ಇಪ್ಪತ್ತನೆಯ ಸಂಧಿ ಸಂಪಾದಿಸಿ
ಪದ್ಯ :ಸೂಚನೆ: ಸಂಪಾದಿಸಿ
ಸೂಚನೆ: ರಘುವರನ ತುರಗಮೇಧಾಧ್ವರದ ಕುದುರೆಯನ | ಲಘು ಪರಾಕ್ರಮಿ ಲವಂ ತರಳತನದಿಂ ಕಟ್ಟ | ಲಘಟಿತಮೆನಿಸಿತು ಶತ್ರುಘ್ನಲಕ್ಷ್ಮಣರ ತಳತಂತ್ರಕ್ಕೆ ಬಿಡಿಸಿಕೊಳಲು || |
[ಆವರಣದಲ್ಲಿ ಅರ್ಥ];=
|
ಪದ್ಯ :೧: ಸಂಪಾದಿಸಿ
ಹಿಮಕರಕುಲೇಂದ್ರ ಕೇಳ್ ವಾಲ್ಮೀಕಿ ಮುನಿಪನಾ | ಶ್ರಮದೊಳ್ ಸಮಸ್ತಕಲೆಗಳನರಿದು ಕಾಕ ಪ | ಕ್ಷಮನಾಂತು ಜಾನಕಿಯ ಶುಶ್ರೂಷೆಯೊಳ್ ಸಂದು ಋಷಿಯ ಚಿತ್ತಕ್ಕೆಬಂದು || |
[ಆವರಣದಲ್ಲಿ ಅರ್ಥ];=
|
ಪದ್ಯ :೨: ಸಂಪಾದಿಸಿ
ಅವರ್ಗಳಂತಿರಲಯೋಧ್ಯಾಪುರದೊಳಿತ್ತ ರಾ | ಘವನಖಿಳ ಧರಣಿಯಂ ಪಾಲಿಸುತ ಸೌಖ್ಯಾನು | ಭವದೊಳೊಂದಿಸದೆ ರಾವಣವಧೆಯೊಳಂದು ಬಂದಾ ಬ್ರಹ್ಮಹತಿ ತನ್ನನು || |
[ಆವರಣದಲ್ಲಿ ಅರ್ಥ];=
|
ಪದ್ಯ :೩: ಸಂಪಾದಿಸಿ
ವಾಮದೇವಾತ್ರಿ ಗಾಲವ ಗುರು ವಸಿಷ್ಠ ವಿ | ಶ್ವಾಮಿತ್ರರಂ ಕರೆಸಿ ಹಯಮೇಧಲಕ್ಷಣವ | ನಾ ಮುನಿಗಳಂ ಕೇಳ್ದನುಜ್ಞೆಗೊಳಲವರಿದಕೆ ನಿಜಪತ್ನಿವೇಳ್ವು(ಳ್ಕುಮೆ)ದೆನಲು || |
[ಆವರಣದಲ್ಲಿ ಅರ್ಥ];=
|
ಪದ್ಯ :೪: ಸಂಪಾದಿಸಿ
ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ | ತಳೆದು ರಘುನಾಂಥ ತುರಂಗಮಂ ಪೂಜೆಗೈ | ದಿಳೆಯೊಳ್ ಚರಿಸಲದರ ಪಣೆಗೆ ತನ್ನಗ್ಗಳಿಕೆಯಂ ಬರೆದ ಪತ್ರಿಕೆಯನು || |
[ಆವರಣದಲ್ಲಿ ಅರ್ಥ];=
|
ಪದ್ಯ :೫: ಸಂಪಾದಿಸಿ
ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ | ಸೂಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ | ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :೬: ಸಂಪಾದಿಸಿ
ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ | ತೊತ್ತಳದುಳಿವು*ದು ವಾಲ್ಮೀಕಿಮುನಿನಾಥ ನೇ | ಪೊತ್ತು ಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ || |
[ಆವರಣದಲ್ಲಿ ಅರ್ಥ];=
|
ಪದ್ಯ :೭: ಸಂಪಾದಿಸಿ
ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ | ನೊರ್ವನೇ ವೀರನಾತನ ಯಜ್ಞ ತುರಗಮಿದು | ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ || |
[ಆವರಣದಲ್ಲಿ ಅರ್ಥ];=
|
ಪದ್ಯ :೮: ಸಂಪಾದಿಸಿ
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ | ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ | ಮಿಗೆ ನಡುಗಿ ಬೇಡಬೇಡರಸುಗ ವಾಜಿಯಂ ಬಿಡು ಬಡಿವರೆಮ್ಮನೆನಲು || |
[ಆವರಣದಲ್ಲಿ ಅರ್ಥ];=
|
ಪದ್ಯ :೯: ಸಂಪಾದಿಸಿ
ಕುದುರೆಗಾವಲ ಸುಭಟರನಿತರೊಳೊದಗಿ ಬಂದು | ಕದಳೀದ್ರುಮಕೆ ಕಟ್ಟಿದ ತುರಂಗಮಂ ಕಂಡು | ಸದಮಲ ಬ್ರಹ್ಮಚಾರಿಗಳನಾರ್ಭಟಿಸಿ ವಾಜಿಯನೇಕೆ ಬಿಗಿದಿರೆನಲು || |
[ಆವರಣದಲ್ಲಿ ಅರ್ಥ];=
|
ಪದ್ಯ :೧೦: ಸಂಪಾದಿಸಿ
ವಿಕ್ರಮವಿದೇಕೆ ಬಿಡೆನಶ್ವಮಂ ಮೇಣ್ಬಿಡಲು | ಪಕ್ರಮಿಸಿದವರ್ಗಳ ಕರಮನರಿವೆನೆನಲವರ | ತಿಕ್ರಮಿಸಿ ವಾಜಿಯಂ ಬಿಡುವೊಡೈತರಲವರ ಕೈಗಳಂ ಕೋಪದಿಂ || |
[ಆವರಣದಲ್ಲಿ ಅರ್ಥ];=
|
ಪದ್ಯ :೧೧: ಸಂಪಾದಿಸಿ
ಬಾಲಕನ ಮೇಲೆ ಕವಿದುದು ಬಳಿಕ ಮುಳಿದು ಹಯ | ಪಾಲಕಬಲಂ ಕರಿ ತುರಗ ರಥ ಪದಾತಿಗಳ | ಜಾಲಕವನೋರ್ವನೆನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಗಿಳೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :೧೨: ಸಂಪಾದಿಸಿ
ಸಂಖ್ಯೆಯಿಲ್ಲದೆ ಮೇಲೆ ಬೀಳ್ವಕೈದುಗಳೆಲ್ಲ | ಮಂ ಖಂಡಿಸುತ್ತೊಡನೆ ಮುತ್ತಿದರಿ ಚತುರಂಗ | ಮಂ ಖಾತಿಯಿಂದೆ ಸಂಹರಿಸುತೊಂದೊಂದು ರಿಪುಬಾಣಕೈದಂಬುಗಳನು || |
[ಆವರಣದಲ್ಲಿ ಅರ್ಥ];=
|
ಪದ್ಯ :೧೩: ಸಂಪಾದಿಸಿ
ದುರಿತ ಗಣಮಿರ್ದಪುದೆ ಗೌತಮಿಯೊಳಾಳ್ದಂಗೆ | ಪರಮಯೋಗಿಗೆ ಭವದ ಬಂಧನಂ ಬಂದಪುದೆ | ಪರಸೈನ್ಯದುರುಬೆ ರಘುಕುಲಜರ್ಗೆ ತೋರುವುದೆ ಪೇ(ಕೇ)ಳವನಿಪಾಲತಿಲಕ || |
[ಆವರಣದಲ್ಲಿ ಅರ್ಥ];=
|
ಪದ್ಯ :೧೪: ಸಂಪಾದಿಸಿ
ಒತ್ತಿಬಹ ಶತ್ರುಘ್ನನುರುಬೆಗೆ ಲವಂ ತನ್ನ | ಚಿತ್ತದೊಳ್ ಮಾಹೇಶಮಂತ್ರಮಂ ಸ್ಮರಿಸುತ್ತೆ | ಮತ್ತೆ ನಿರ್ಭಯನಾಗಿ ಮಾರಾಂತನಾತನೆಲವೆಲವೊ ನೀಂ ಪಸುಳೆ ನಿನಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೧೫: ಸಂಪಾದಿಸಿ
ತರಳನ ಪರಾಕ್ರಮಕೆ ಮೆಚ್ಚಿದಂ ಮತ್ತೊಂದು | ತಿರುವನಳವಡಿಸಿದಂ ಕಾರ್ಮುಕಕೆ ಶತ್ರುಘ್ನ | ನಿರದೆ ಕಣೆಮೂರರಿಂ ಬಾಲಕನ ಪಣೆಯನೆಚ್ಚೊಡೆ ನಗುತೆಪರಿಮಳಿಸುತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೧೬: ಸಂಪಾದಿಸಿ
ಕೋಪದಿಂ ಪೊಸರಥಕಡರ್ದು ಶತ್ರುಘ್ನನುರು | ಚಾಪಮಂ ಕೊಂಡು ದಿವ್ಯಾಸ್ತ್ರದಿಂತೆಸುತ ಬರ | ಲಾಪಥದೊಳೆಣಿಕೆಗೆಯ್ದಣ್ಣನಂ ಮಾತೆಯಂ ನೆನೆದು ಮನದೊಳು ಮರುಗುತ || |
[ಆವರಣದಲ್ಲಿ ಅರ್ಥ];=
|
ಪದ್ಯ :೧೭: ಸಂಪಾದಿಸಿ
ವಿಸ್ಮಯಾನ್ವಿತನಾದನಂದು ಶತ್ರುಘ್ನ ನಾ | ಕಸ್ಮಿಕದ ಪಸುಳೆಯ ಪರಾಕ್ರಮಕೆ ಬಳಿಕ ವಿಲ | ಯಸ್ಮರಾಂತಕನ ಪಣೆಗಣ್ಣಿಂದ ಪೊರಮಡುವೆ ದಳ್ಳುರಿಯತೆರದೊಳೆಸೆವ || |
[ಆವರಣದಲ್ಲಿ ಅರ್ಥ];=
|
ಪದ್ಯ :೧೮: ಸಂಪಾದಿಸಿ
ಅರಸ ಕೇಳಾಶರದೊಳರ್ಧಮವನಿಗೆ ಕೆಡೆದು | ದಿರದೆ ಮೇಲ್ವಾಯ್ದರ್ಧಮೀ ಲವನ ಕಾರ್ಮುಕವ | ನರಿದುಕೊಂಡೆರ್ದೆಯನುಚ್ಚಳಿಸೆ ಮೈಮರೆದೊರಗಿದಂ ಪಸುಳೆ ಮೂರ್ಛೆಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೧೯: ಸಂಪಾದಿಸಿ
ಕದಳಿಯೊಳ್ ಕಟ್ಟಿರ್ದ ಕುದುರೆಯಂ ಬಿಡಿಸಿ ನಗ | ರದ ಕಡೆಗೆ ಪಡೆವೆರಸಿ ತಿರುಗಿದಂ ಶತ್ರುಘ್ನ | ನುದಧಿಘೋಷದೊಳಿತ್ತ ಲೋಡಿದರ್ ತಾಪಸವಟುಗಳವನಿಸುತೆಯ ಪೊರೆಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೦: ಸಂಪಾದಿಸಿ
ಒಸರಿದುವು ಕಂಬನಿಗಳಂಗಲತೆ ಕಂಪಿಸಿತು | ಪೊಸೆದಳೊಡಲಂ ಕೂಡೆ ಕೂಡೆ ಸುತಮೋಹದಿಂ | ದಸವಳಿದು ಕಂದನೆಲ್ಲಿರ್ದಪಂ ಕಾದಿದನೆ ಪಗೆಯ ಕೈಗೊಳಗಾದನೇ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೧: ಸಂಪಾದಿಸಿ
ಅನ್ನೆಗಂ ಬಂದನಗ್ಗದ ಸಮಿತ್ಪುಷ್ಪಂಗ | ಳನ್ನೆತ್ತಿಯೊಳ್ ಪೊತ್ತುಕೊಂಡು ಕುಶನಳುತಿರ್ಪ | ತನ್ನ ತಾಯಂ ಕಂಡಿದೇನದ್ಭುತಪ್ರಳಾಪಂ ನಿನಗೆ ಪೇಳೆನಲ್ಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೨: ಸಂಪಾದಿಸಿ
ಶೋಕಮೇಕಿದಕೆ ಹರಣವನೊಯ್ದೊಡಂತಕನ | ಲೋಕವಂ ಸುಡುವೆನಲ್ಲಹುದೆಂದೊಡಜ ಹರಿ ಪಿ | ನಾಕಿಗಳನುರಿಪುವೆಂ ಮಿಕ್ಕರಸುಗಿರಸುಗಳ ಪಾಡಾವುದೀಗ ತನಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೩: ಸಂಪಾದಿಸಿ
ರಾಯ ಕೇಳ್ ಕುಶನ ವಿಕ್ರಮವನಭಿವರ್ಣಿಸಲ | ಜಾಯುವುಳ್ಳನ್ನೆಗಂ ತನಗೆ ತೀರದು ಬಳಿಕ | ತಾಯಂಘ್ರಿಗೆರಗಿ ಬೀಳ್ಕೊಂಡು ತಾರಕನ ಪೆರ್ಬಡೆಗೆ ಗುಹನೆಯ್ದುವಂತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೪: ಸಂಪಾದಿಸಿ
ಪದ್ದೆರಗಿದುವು ಭಟರ ಮಂಡೆಗಳ ಮೇಲುಡಿದು | ಬಿದ್ದುವು ಚಲಧ್ವಜಪತಾಕೆಗಳ್ ಕೂಡೆ ದೂ | ಳೆದ್ದು ಬಿರುಗಾಳಿ ಬೀಸಿದುದು ಕಂಬನಿ ಕರೆದುವಂದಾನೆಕುದುರೆಗಳ್ಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೫: ಸಂಪಾದಿಸಿ
ಆ ಬಾಲಕನ ಬಾಣಘಾತದಿಂದಳವಳಿದು | ದೀಬಲದ ಮಂದಿ ಮತ್ತೀಗಳಿವನೊರ್ವನಿದೆ | ಕೋ ಬಂದನೆಂದಿಸುವ ಬೆಸೆಗಳ್ಗೆ ದೆಸೆಗೆಟ್ಟು ಸೇನೆ ಗಜಬಜಿಸೆ ಕಂಡು | |
[ಆವರಣದಲ್ಲಿ ಅರ್ಥ];=
|
ಪದ್ಯ :೨೬: ಸಂಪಾದಿಸಿ
ಬಳಿಕ ಶತ್ರುಘ್ನನ ನಿರೂಪದಿಂ ತಿರುಗಿದಂ | ದಳಪತಿ ಸಮಸ್ತಬಲಸಹಿತಾ ಕುಮಾರನಂ | ಬಳಸಿದಂ ತಮತಮಗೆ ವಿವಿಧಾಯುಧಂಗಳಂ ಜಾಳಿಸುತೆ ವಹಿಲದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೭: ಸಂಪಾದಿಸಿ
ಆ ದಳಪತಿಯ ತಮ್ಮನೋರ್ವ ನಗನೆಂಬವಂ | ಕಾದಿ ಮಡಿದಣ್ಣನಂಕಾಣುತ್ತ ಖತಿಯಿಂ ಮ | ಹಾದಂತಿಯಂಕುಶನ ಮೇಲೆಯಂಕುಶದಿಂದಿರಿದು ನೂಕಿದಂ ಕುಶಲದ || |
[ಆವರಣದಲ್ಲಿ ಅರ್ಥ];=
|
ಪದ್ಯ :೨೮: ಸಂಪಾದಿಸಿ
ಕಿತ್ತಡಾಯುಧದೊಳೈದುವನ ಘನ ಹಸ್ತಮಂ | ಕತ್ತರಿಸಲೆಡಗೈಯೊಳೊಂದು ಗದೆಯಂ ಕೊಂಡು | ಮತ್ತೆ ಮೇಲ್ವಾಯ್ದೊಡಾ ಕರಮಂ ಕಡಿಯೆ ಬಾಹುಗಳಿಂದೆ ಪೊಯ್ವೆನೆಂದು || |
[ಆವರಣದಲ್ಲಿ ಅರ್ಥ];=
|
ಪದ್ಯ :೨೯: ಸಂಪಾದಿಸಿ
ಬಾಹುಯುಗಮೂರುದ್ವಯಂ ಪೋದ ಕಾಯದಿಂ | ಸಾಹಸಂಗೈದವಂ ಮೇಲ್ವಾಯ್ದು ಚಂದ್ರಂಗೆ | ರಾಹುವಂಗೈಸುವಂತುರವಣಿಸೆ ಕುಶನಳುಕದೆಚ್ಚವನ ತಲೆಯನರಿಯೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೩೦: ಸಂಪಾದಿಸಿ
ಕಡುಮುಳಿದು ಶತ್ರುಘ್ನನೊಂಬತ್ತು ಬಾಣದಿಂ | ಬಿಡದೆಚ್ಚೊಡಾ ಕುಶಂ ಕೋಪದಿಂದವನ ತೇ | ರ್ಪುಡಿಯಾಗೆ ಸಾರಥಿರಥಾಶ್ವಂಗಳೆಡೆಗೆಡೆಯೆ ಬಿಲ್ಲುಡಿಯೆ ಪೇರುರದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :೩೧: ಸಂಪಾದಿಸಿ
ಗಿರಿತಟದೊಳೊಂದೊಂದರೊಳ್ ಪೆಣಗಿ ಸೋಲ್ತ ಮದ | ಕರಿ ಧರೆಗುರುಳ್ವಂತೆ ಪೂರಾಯ ಗಾಯದಿಂ | ದಿರದೆ ಶತ್ರುಘ್ನಂ ಮಹೀತಳಕೆ ರಥದಿಂದೆ ಬೀಳ್ವನಿತರೊಳ್ ಪಡೆಯೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :೩೨: ಸಂಪಾದಿಸಿ
ಬಹುದುರಿತಮಂ ಸ್ವಧರ್ಮದೊಳೊರಸುವಂತೆ ಕುಶ | ನಹಿತರಂ ತನ್ನ ಭುಜಬಲದಿಂದೆ ಸವರಿದಂ | ಮಹದಾಹವದ ಮೂರ್ಛೆ ತಿಳಿದನಿತರೊಳ್ ಕಂಡನಣ್ಣನಂ ಬಳಿಕಲವನು || |
[ಆವರಣದಲ್ಲಿ ಅರ್ಥ];=
|
ಪದ್ಯ :೩೩: ಸಂಪಾದಿಸಿ
ಚರು ಪುರೋಡಾಶ ತಂಡುಲ ತಿಲ ವ್ರೀಹಿ ಘೃತ | ದುರು ಹವಿರ್ಧೂಮದಿಂದರುಣಲೋಚನನಾಗಿ | ಪರಿಮೇಖಲಾಶೃಂಗ ಮೃಗಚರ್ಮಧರನಾಗಿ ನವನೀತಲಿಪ್ತನಾಗಿ || |
[ಆವರಣದಲ್ಲಿ ಅರ್ಥ];=
|
ಪದ್ಯ :೩೪: ಸಂಪಾದಿಸಿ
ಅವಧರಿಸು ಜೀಯ ನಿನ್ನಧ್ವರದ ಚಾರು ಹಯ | ಮವನಿಯೊಳವಿಘ್ನದಿ ತಿರುಗಿ ಬಂದುದು ಬಳಿಕ | ಲವನೆಂಬ ಬಾಲಕಂ ಕಟ್ಟಿದಂ ಕಡುಗಿದೊಡೆ ಬಲಮೆಲ್ಲಮಂ ಕೊಂದನು || |
[ಆವರಣದಲ್ಲಿ ಅರ್ಥ];=
|
ಪದ್ಯ :೩೫: ಸಂಪಾದಿಸಿ
ಕೇಳುತೆ ಕನಲ್ದೆಲವೊ ಶತ್ರುಘ್ನನಂ ಜಯಿಸು | ವಾಳುಂಟೆ ಲೋಕದೊಳ್ ಪೋಗಿವರ್ ಮರುಳರೆಂ | ದಾಳವಾಡಲ್ ಜೀಯ ನಿಮ್ಮಡಿಗಳಾಣೆ ಪುಸಿಯಲ್ಲೆಂದು ಮತ್ತೆ ಚರರು || |
[ಆವರಣದಲ್ಲಿ ಅರ್ಥ];=
|
ಪದ್ಯ :೩೬: ಸಂಪಾದಿಸಿ
ಬಳಿಕ ರಾಘವನಂಘ್ರಿಗೆರಗಿ ಕಳುಹಿಸಿಕೊಂಡ | ತುಳತಂತ್ರ*ಸನ್ನಾಹದಿಂ ಕಾಲಜಿತುವೆಂಬ | ದಳಪತಿಸಹಿತ ಸುಮಿತ್ರಾತ್ಮಜಂ ನಗರಮಂ ಪೊರಮಟ್ಟು ನಡೆವ ಭರಕೆ ||
|
[ಆವರಣದಲ್ಲಿ ಅರ್ಥ];=
|
ಪದ್ಯ :೩೭: ಸಂಪಾದಿಸಿ
ಪೊಡವಿಯಗಲದೊಳೆಯ್ದುವಾನೆಗಳ ಸೇನೆಗಳ | ಕಡುಗಿ ಮುಂಬರಿವ ರಥರಾಜಿಗಳ ತೇಜಿಗಳ | ಬಿಡದೆ ಗಗನದೊಳಿಡಿದ ಸತ್ತಿಗೆಯ ಮುತ್ತಿಗೆಯ ಢಾಳಿಸುವ ಚಮರಂಗಳ || |
[ಆವರಣದಲ್ಲಿ ಅರ್ಥ];=
|
ಪದ್ಯ :೩೮: ಸಂಪಾದಿಸಿ
ಪ್ರಾಣಮಿಲ್ಲದೆ ಚೇತರಿಸಿಕೊಳಲ್ ತನುವಿನೊಳ್ | ತ್ರಾಣಮಿಲ್ಲದೆ ನೊಂದು ಗಾಯದಿಂ ಮರವೆಯಂ | ಕೇಣಿಗೊಂಡೊರಗಿ ಶತ್ರುಘ್ನನಳಿದುಳಿದ ಬಲದೊಡನೆ ರಾಹುಗ್ರಸ್ತದ || |
[ಆವರಣದಲ್ಲಿ ಅರ್ಥ];=
|
ಪದ್ಯ :೩೯: ಸಂಪಾದಿಸಿ
ಕಂಡರೀಚೆಯೊಳರಿಬಲವ್ಯೂಹಮಂ ಬರಲಿ | ಖಂಡಿಸುವೆನೆಂದೊರ್ವರೊರ್ವರೊಳ್ ಮಾತಾಡಿ | ಕೊಂಡರವರೊಳ್ ತನ್ನ ಬಿಲ್ಮುರಿದುದಾಹವದೊಳೆಂದು ಲವನಗ್ರಜಂಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೪೦,೪೦,೪೨: ಸಂಪಾದಿಸಿ
ಮಿತ್ರಾಯ ಸೂರ್ಯಾಯ ಹಂಸಾಯ ಪೂಷ್ಣೇ ಸ | ವಿತ್ರೇ ಜಗಚ್ಚಕ್ಷುಷೇ ಚಂಡಘೃಣಯೇ ಪ | ವಿತ್ರಾಯ ಪಿಂಗಾಯ ಪುರುಷಾಯ ಭಾನುವೇ ಜ್ಯೋತಿಷೇ ಭಾಸ್ಕರಾಯ || |
[ಆವರಣದಲ್ಲಿ ಅರ್ಥ];=
|
ಪದ್ಯ :೪೩: ಸಂಪಾದಿಸಿ
ಅವನೀಶ ಕೇಳ್ ಬಳಿಕಲವನ ವಿಮಲಸ್ತುತಿಗೆ | ರವಿ ಮೆಚ್ಚಿ ಕೊಟ್ಟನಾತನ ಕೈಗೆ ದಿವ್ಯಚಾ | ಪವನದಂ ಕೊಂಡಗ್ರಜಂಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳುಗೆನುತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೪೪: ಸಂಪಾದಿಸಿ
ನೂರಾಳಿಗೊಂದು ಹಯಮಿರುತಿರ್ಪುದಾ ಹಯಂ | ನೂರಕಿರುತಿಹುದು ಮೇಣೊಂದು ರಥ ಮಾರಥಂ | ನೂರಕಿಭವೊಂದಿರ್ಪುದಿಂತಿಭ ಸಹಸ್ರಮಿರೆ ಭ್ರಮಿಯೆಂದೆನಿಸಿಕೊಳ್ವುದು || |
[ಆವರಣದಲ್ಲಿ ಅರ್ಥ];=
|
ಪದ್ಯ :೪೫: ಸಂಪಾದಿಸಿ
ಹೂಣೆವೊಕ್ಕಿಸುತ ಬಾಲಕರೈದೆ ಲಕ್ಷ್ಮಣಂ | ಕಾಣುತಿದಿರಾದಂ ಕುಶಂಗಖಿಳವಾಹಿನೀ | ಶ್ರೇಣಿಸಹಿತುರುಬಿದಂ ಕಾಲಜಿತುವಾ ಲವನ ಮೇಲೆ ವಡಬಾಗ್ನಿಯೆಡೆಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೪೬: ಸಂಪಾದಿಸಿ
ಏಸು ಭಟರಂಬುಗಳನಿಸುವರೈಸಂಬುಗಳ | ನಾಸುಭಟರಂಗದೊಳ್ ಕಾಣಿಸಿದನಾ ಬಲದೊ | ಳೇಸು ಕೈದುಗಳೊಳೊದಗಿದರೈಸು ಕೈದುಗಳನೆಲ್ಲಮಂ ತಡೆಗಡಿದನು || |
[ಆವರಣದಲ್ಲಿ ಅರ್ಥ];=
|
ಪದ್ಯ :೪೭: ಸಂಪಾದಿಸಿ
ಜಾನಕಿಯ ಸುತನ ಬಾಣಾವಳಿಯ ಹಾವಳಿಯ | ನೇನೆಂಬೆನಹಿತರಂ ಕವರಿದುವು ಸವರಿದುವು | ಬಾನೆಡೆಯೊಳಿಟ್ಟಣಿಸಿ ಹರಿದುವು ತರಿದುವು ಕೊಂದುವರಿದುವು ಪರಿದುವು || |
[ಆವರಣದಲ್ಲಿ ಅರ್ಥ];=
|
ಪದ್ಯ :೪೮: ಸಂಪಾದಿಸಿ
ಭೂರಿಬಾಣದೊಳಹಿತಸೇನೆಯೊಳ್ ಮುಳಿದ ಚ | ತ್ವಾರಿಂಶದನುಪಮ ಭ್ರಮಿಗಳಂ ತಡೆಗಡಿದು | ವೀರ ಲವನಲ್ಲಿ ಕುಶನಂ ಕಾಣದೆಡಬಲದೊಳರಸೆ ರುಧಿರಾಕ್ಷನೆಂಬ || |
[ಆವರಣದಲ್ಲಿ ಅರ್ಥ];=
|
ಪದ್ಯ :೪೯: ಸಂಪಾದಿಸಿ
ಕರದ ಬಿಲ್ಲಂ ಕಿತ್ತು ಕೊಂಡೋಡುವಸುರನಂ | ಭರದಿಂದೆ ಬೆಂಬತ್ತಿ ಪೋಗದಿರ್ ಪೋಗದಿರ್ | ತಿರುಗೆನುತ ವಾಲ್ಮೀಕಿಮುನಿಪನಿತ್ತಗ್ನಿ ಮಂತ್ರಧ್ಯಾನಮಂ ಮಾಡಲು || |
[ಆವರಣದಲ್ಲಿ ಅರ್ಥ];=
|
ಪದ್ಯ :೫೦: ಸಂಪಾದಿಸಿ
ಮತ್ತುರುಬಿದನಿತು ಬಲಮಂ ಕರದ ಚಕ್ರದಿಂ | ತತ್ತರದರಿದು* ರಾಕ್ಷಸೇಂದ್ರನಂ ಬಿಡದೆ ಲವ | ನೊತ್ತಾಯಮಂ ಮಾಡುತಿರೆ ಕಂಡು ದಶರಥ ನೃಪತಿಯ ಮಂತ್ರಿಯತನುಜರು ||
|
[ಆವರಣದಲ್ಲಿ ಅರ್ಥ];=
|
ಪದ್ಯ :೫೧: ಸಂಪಾದಿಸಿ
ಕರದ ಚಕ್ರಂ ಪೋಗೆ ಪರಿಘಮಂ ಕೊಂಡು ಲವ | ನುರವಣಿಸಿ ಹೊಯ್ದನಿಬರಂ ಕೆಡಹೆ ಮತ್ತೆ ಬಂ | ದುರು ಗದಾದಂಡಮಂ ಕೊಂಡು ರುಧಿರಾಕ್ಷನೀತನ ಪಣೆಯನಪ್ಪಳಿಸಲು || |
[ಆವರಣದಲ್ಲಿ ಅರ್ಥ];=
|
ಪದ್ಯ :೫೨: ಸಂಪಾದಿಸಿ
ಬಿಡದೆ ರುಧಿರಾಕ್ಷ ರಾಕ್ಷಸನಂ ರಣಾಗ್ರದೊಳ್ | ಕೆಡಹಿ ನಿಜಚಾಪ ಚಾಪಲಹಸ್ತನಾಗಿ ಲವ | ನಡಸಿದರಚತುರ ಚತುರಂಗಮಂ ಸಂಹರಿಸತೊಡಗಿದಂ ಮತ್ತೆ ಮುಳಿದು || |
[ಆವರಣದಲ್ಲಿ ಅರ್ಥ];=
|
ಪದ್ಯ :೫೩: ಸಂಪಾದಿಸಿ
ಪಡೆ ಮಡಿಯುತಿರ್ದುದು ಲವಾಸ್ತ್ರದಿಂದಿತ್ತ ಕುಶ | ನೊಡನೆ ಸೌಮಿತ್ರಿಗಾದುದು ಯುದ್ಧಮಾಗ ಕಿವಿ | ಗಡಿಗೆ ತೆಗೆದೆಚ್ಚನೈದಂಬುಗಳನಿದಿರಾಗಿ ಭೂಮಿಜೆಯ ಸುತನ ಮೇಲೆ | |
[ಆವರಣದಲ್ಲಿ ಅರ್ಥ];=
|
ಪದ್ಯ :೫೪: ಸಂಪಾದಿಸಿ
ಮೆಚ್ಚಿದಂ ಬಾಲಕನ ವಿಕ್ರಮಕೆ ಲಕ್ಷ್ಮಣಂ | ಪೆಚ್ಚಿದತಿರೋಷದಿಂ ಮತ್ತೊಂದು ರಥಕಡ | ರ್ದೆಚ್ಚನೆರಡಂಬಿನಿಂದೀತನ ಕಿರೀಟಮಂ ಕವಚಮಂ ಮೂರರಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೫೫: ಸಂಪಾದಿಸಿ
ಧುರದೊಳ್ ಕಿರೀಟ ಕವಚದ ಪೊರೆಯಿದೇಕೆಂದು | ಪರಿಹರಿಸಿದುಪಕಾರಕಪಕಾರಮಂ ಮಾಡೆ | ನುರುಸೈನ್ಯಭಾರಮಂ ನಿನಗೆ ಬಿಡಿಸುವೆನೀಗ ನೋಡಾದೊಡೆನುತೆ ಕುಶನು || |
[ಆವರಣದಲ್ಲಿ ಅರ್ಥ];=
|
ಪದ್ಯ :೫೬: ಸಂಪಾದಿಸಿ
ಬಲಮೆಲ್ಲಮಂ ಸುಡುವ ಪಾವಕ ಜ್ವಾಲೆಯಂ | ಕಲಿಲಕ್ಷ್ಮಣಂ ಕಂಡು ವರುಣಾಸ್ತ್ರದಿಂದದಂ | ನಿಲಿಸಲ್ಕೆ ಬಾಲಕಂ ಮತ್ತೆ ನಸುನಗುತೆ ವಾಯವ್ಯಮಾರ್ಗಣವನೆಸಲು || |
[ಆವರಣದಲ್ಲಿ ಅರ್ಥ];=
|
ಪದ್ಯ :೫೭: ಸಂಪಾದಿಸಿ
ಭುಜಬಲಕೆ ಪಾಡಲ್ಲ ತರಳನೆಂದುಳುಹಿದೊಡೆ | ವಿಜಯನಾದಪೆ ಬೇಡ ಹೋಗೆಲವೊ ಕಾರುಣ್ಯ | ರುಜುವಲ್ಲ ತಾನೆನುತ ಕಾಲಜಿತುವೆಚ್ಚೊಡಾತನ ಬಾಣಮಂ ಖಂಡಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :೫೮: ಸಂಪಾದಿಸಿ
ಎಸುಗೆಯೆಂತುಟೊ ಕುಶನ ಕಣೆ ರಣದೊಳಾರ್ದು ಗ | ರ್ಜಿಸುವ ನಾಲಗೆಯ ನರಿದುದು ಬಳಿಕ ಮೌನದಿಂ | ಮಸಗಿ ರೋಷದೊಳುಬ್ಬಿ ಕಾಲಜಿತುವೆಚ್ಚೊಡಾ ಜಾನಕಿಯ ಸೂನು ನಗುತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೫೯: ಸಂಪಾದಿಸಿ
ವೀರಲಕ್ಷ್ಮಣನಿಸುವ ಕೂರಂಬನೆಲ್ಲಮಂ | ವಾರುವಂ ನಾಲ್ಕುಮಂ ತೇರಂ ಸುಕೇತುವಂ | ನಾರಿಯಂ ಚಾಪ ತೂಣೀರಂಗಳಂ ಕೆಲದ ಚಾರರಂ ಸಾರಧಿಯನು || |
[ಆವರಣದಲ್ಲಿ ಅರ್ಥ];=
|
ಪದ್ಯ :೬೦: ಸಂಪಾದಿಸಿ
ಚರ್ಮಖಡ್ಗಂಗಳಿಂ ವಿವಿಧಾಯುಧಂಗಳಿಂ | ದೂರ್ಮಿಳಾಕಾಂತನೊದಗಿದೊಡನಿತನೆಲ್ಲಮಂ | ನಿರ್ಮಲಾಸ್ತ್ರಂಗಳಿಂ ಕತ್ತರಿಸಿ ವಾಲ್ಮೀಕಿ ಮುನಿವರಂ ತನಗೆ ಕೊಟ್ಟ || |
[ಆವರಣದಲ್ಲಿ ಅರ್ಥ];=
|
ಪದ್ಯ :೬೧: ಸಂಪಾದಿಸಿ
ಆ ಘೋರತರದ ಸಂಗ್ರಾಮದೊಳ್ ತಾನೆಚ್ಚ | ಮೋಘಮಾಗಿರ್ದ ಮುನಿ ಕೊಟ್ಟ ದಿವ್ಯಾಸ್ತ್ರದ ಮ | ಹಾಘಾತಿಯಿಂದೆ ಕಡುನೊಂದು ಮೂರ್ಛಿತನಾಗಿ ಬಿದ್ದು ಭೂತಳದ ಮೇಲೆ || |
[ಆವರಣದಲ್ಲಿ ಅರ್ಥ];=
|
ಪದ್ಯ :೬೨: ಸಂಪಾದಿಸಿ
ಶರ ಚಾಪ ಚರ್ಮ ಖಡ್ಗಂಗಳಂ ಕೊಂಡು ಕುಶ | ನಿರದೆ ಲವನಿದ್ದೆಡೆಗೆ ಚಿಗಿದನಲ್ಲಿಂ ಖಗೇ | ಶ್ವರನಂತೆರಗಿದನದನೇವೇಳ್ವೆ ನಳಿದುಳಿದ ರಿಪುವಾಹಿನೀ ಭ್ರಮಿಗಳು || |
[ಆವರಣದಲ್ಲಿ ಅರ್ಥ];=
|
ಹೋಗಿ ಸಂಪಾದಿಸಿ
ನೋಡಿ ಸಂಪಾದಿಸಿ
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ ಸಂಪಾದಿಸಿ
ಕನ್ನಡ ವಿಕಿಸೋರ್ಸ್ ಸಂಪಾದಿಸಿ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ ಸಂಪಾದಿಸಿ
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.