Pages   (key to Page Status)   

ತನುವನೆಲ್ಲವ ಜರಿದು ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯಾ ಎನಗೆ. ಭಾವವಿಲ್ಲದ ಬಯಲಸುಖವು ಭಾವಿಸಿದಡೆಂತಹುದು ಬಹುಮುಖರುಗಳಿಗೆ ? ಕೇಳಯ್ಯಾ
ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವಾ ನಾನಳಿದು ನೀನುಳಿದ ಪರಿಯ ತೋರಯ್ಯಾ ಪ್ರಭುವೆ.