Pages   (key to Page Status)   

ನಂದಿ ದೇವಂಗೆ
ಖಳ ಸಿರಿಯಾಳಂಗೆ
ಲಿಂಗ ದಾಸಿಮಯ್ಯಂಗೆ
ಜಾಗರ ಬಸವಣ್ಣಂಗೆ
ಆದರಿಕೆಯ ಬಿಟ್ಟು ಜೂಜನಾಡರೆ ನಮ್ಮವರಂದು ? ಒಬ್ಬಂಗೆ ಮಗನ ರಪಣ
ಒಬ್ಬಂಗೆ ಸೀರೆಯ ರಪಣ
ಒಬ್ಬಂಗೆ ತನು ಮನ ಧನದ ರಪಣ. ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.