ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೯೩

ಪಶು ಭಾವವನ್ನು ಹೋಗಲಾಡಿಸಿ ಉಚ್ಚಾದರ್ಶವನ್ನು ತೋರಿಸುವುದೇ ಅದರ ಉದ್ದೇಶವೆಂದು ಹೇಳಬಹುದು... ಅವರು ಆಗಾಗ್ಗೆ "ಈ ದೇಹವು ಮಾಡುವುದೆಲ್ಲ ನಿನಗೋಸ್ಕರ; ಎಲೋ ನಾನು ಹದಿನಾರಾಣೆಯ ಪಾಲನ್ನು ಮಾಡಿದರೆ ನೀವು ಒಂದಾಣೆಯ ವಾಲಾ ದರೂ ಮಾಡುತ್ತೀರಿ." ಎಂದು ಹೇಳುತ್ತಿದ್ದರು. [೧] ಇಷ್ಟು ಹೊರತು ನನ್ನ ಕೀಳುಬುದ್ಧಿಯಿಂದ ಅವರ ಮಾಹಾತ್ಮಯನ ಅಳೆದು ಎಂದಿಗೂ ಅವರಲ್ಲಿ ಇಲ್ಲದ್ದನ್ನು ಆರೋಪಿಸಬಾರದು. ಏಕೆಂದರೆ ಸ್ತ್ರೀಸಾಮಾನ್ಯದಲ್ಲಿಯೂ ಜಗನ್ಮಾತೆಯೆಂದು ಬುದ್ಧಿಯನ್ನಿಟ್ಟು ಕೊ೦ಡಿದ್ದ ಪರಮಹಂಸರಿಗೆ, ನಿರ್ವಿಕಲ್ಪ ಸಮಾಧಿಯನ್ನು ಪಡೆದು ದೇಹಬುದ್ದಿಯನ್ನೂ ಇಂದ್ರಿಯಸುಖವನ್ನೂ ಪೂರ್ತಿಯಾಗಿ ಮರೆತು ಬಿಟ್ಟವರಿಗೆ, ಸ್ತ್ರೀಯಲ್ಲಿ ಅನ್ಯಥಾ ಬುದ್ಧಿ ಹೇಗೆ ಹುಟ್ಟಬೇಕು? ಕೆಲವರು “ನಾವು ಆ ಕಾಲದಲ್ಲಿ ವಿದ್ದರೆ ಪರಮಹಂಸರ ಕೈರ್ಯವನ್ನು ಪರೀಕ್ಷೆಮಾಡಿ ಬಿಡುತ್ತಿದ್ದೆವು. ಅಸಿಧಾರಾವತವು ಯಾರಿಂದ ಸಾಧ್ಯ?" ಎಂದು ಹೇಳಬಹುದು. ಆಗಿನಕಾಲದಲ್ಲಿ ಪರಮಹಂಸರ ಶಿಷ್ಯ ಮಂಡಲಿಯಲ್ಲಿಯೇ ಇಂಥ ಸಂದೇಹ ಶೀಲರಾದ ಜನರಿಗೆ ಏನೂ ಅಭಾವವಿರಲಿಲ್ಲ. ನಮಗೆ ಒಂದು ಕಾಳಿನಷ್ಟು ಸಂದೇಹವಾದರೆ ಅವರಿಗೆ ಒಂದು ಬೆಟ್ಟದಷ್ಟು ಸಂದೇಹವಿರುತ್ತಿತ್ತು. ಅದ ಕೋಸ್ಕರ ಅವರ ಶಿಷ್ಯರಲ್ಲೊಬ್ಬರು ರಾತ್ರೆ ವರಮಹಂಸರು ತಮ್ಮ ಪತ್ನಿಯೊಡನೆ ಮಲಗಿರುವ ಮನೆಗೆ ಹೋಗಿ ಬಗ್ಗಿ ಕೂಡನೋಡಿದರ೦ತೆ. ಭಕ್ತರ ಹೃದಯದಲ್ಲಿ ನಡೆಯುವ ವ್ಯಾಪಾರಗಳನ್ನೆಲ್ಲಾ ಚೆನ್ನಾಗಿ ತಿಳಿದ ಗುರುಮಹಾರಾಜರು ಆಗಾಗ್ಗೆ “ ಯಾವುದನ್ನೂ ಚೆನ್ನಾಗಿ ಪರೀಕ್ಷೆ ಮಾಡ ಬೇಕಪ್ಪ! ನಿಮ್ಮ ಗುರುಗಳನ್ನೂ ಚೆನ್ನಾಗಿ ಪರೀಕ್ಷೆ ಮಾಡಬೇಕು: ತಾಗೆ ಮಾಡಿದರೆ ತಾನೆ ಆಮೇಲೆ ದೃಢವಾದ ನಂಬುಗೆ ಯುಂಟಾಗುವುದು.” ಎಂದು ಹೇಳುತ್ತಿದ್ದರು. ಇದು


  1. ಈ ವಿಷಯವನ್ನು ಶಾರದಾನಂದ ಸ್ವಾಮಿಗಳು ತಮ್ಮ ಗ್ರಂಥದಲ್ಲಿ ವಿಸ್ತಾರವಾಗಿ ವಿಚಾರಮಾಡಿದ್ದಾರೆ.