ಈ ಪುಟವನ್ನು ಪ್ರಕಟಿಸಲಾಗಿದೆ

೯೮

ಶ್ರೀ ರಾಮಕೃಷ್ಣಪರಮಹಂಸರ

ರಾರು ? ವಿಚಾರಮಾಡಿಯೇ ನಂಬಬಹುದು. ಸ್ವಲ್ಪವಿಚಾರ ಬುದ್ಧಿಯೂ ಬೇಕು. ಅದಕ್ಕಾಗಿಯೇ ವಿವೇಕಾನಂದಸ್ವಾಮಿಗಳು ಜ್ಞಾನಮಿಶ್ರವಾದ ಭಕ್ತಿಯೇ ಉತ್ತಮವೆಂದು ಬೋಧಿಸುತ್ತಿದ್ದರು. ರಾಮಕೃಷ್ಣಪರಮಹಂಸರೂ ಒಂದುದಿನ ತಮ್ಮ ಶಿಷ್ಯರಲ್ಲೊಬ್ಬರು ಅಜಾಗರೂಕತೆಯಿಂದ ಏನೋ ಒಂದು ತಪ್ಪು ಮಾಡಿದ್ದನ್ನು ಕಂಡು “ ಭಕ್ತನಾಗಿರು ಎಂದರೆ ಗಗ್ಗನೇಕೆ ಆದೆಯೊ? ” ಎಂದು, ತಾವು ಹೇಗೆ ಮೂರುಹೊತ್ತೂ ದೇವರಮೇಲೆ ಮನಸ್ಸಿದ್ದರೂ ಸರ್ವಕಾರ್ಯಗಳಲ್ಲಿಯೂ ಜಾಗರೂಕರಾಗಿರುತ್ತಿದ್ದರೆಂದು ಬೋಧಿಸಿದರಂತೆ. ಈ ಸಂದರ್ಭದಲ್ಲಿಯೇ “ ಯಾವಾಗಲೂ ವಿಚಾರಮಾಡುತ್ತಿರಬೇಕು. ಯಾವುದು ಸತ್ಪದಾರ್ಥ, ಯಾವುದು ಅಸತ್ಪದಾರ್ಥ, ಯಾವುದು ನಿತ್ಯ, ಯಾವುದು ಅನಿತ್ಯ ಎಂದು ವಿಚಾರಮಾಡುತ್ತಾ,ಅನಿತ್ಯವಾದುವುಗಳನ್ನು ತ್ಯಜಿಸುತ್ತ, ನಿತ್ಯವಾದುವುಗಳಮೇಲೆ ಮನಸ್ಸಿಡುತ್ತಾ ಬರಬೇಕು” ಎಂದು ಹೇಳುತ್ತಿದ್ದರು. ಆದ್ದರಿಂದ ವಿಚಾರ ಬುದ್ದಿಯೇನೋ ಆವಶ್ಯಕ. ಆದರೆ ಆಧ್ಯಾತ್ಮಿಕ ವಿಚಾರಗಳಲ್ಲಿ ಮಾತ್ರ ವಿಚಾರಮಾಡುತ್ತ ಹೋದರೆ ಕೊನೆಮೊದಲಿಲ್ಲದೇ ಹೋಗುತ್ತದೆ. ಅನೇಕ ಸಂಶಯಗಳು ಹುಟ್ಟಿ ಅವು ಪರಿಹಾರವಾಗುವುದೇ ಇಲ್ಲ. “ ಮದುವೆಯಾದಹೊರತು ಹುಚ್ಚು ಬಿಡದು ಹುಚ್ಚುಬಿಟ್ಟ ಹೊರತು ಮದುವೆಯಾಗದು' ಎಂಬುದೊಂದು ಗಾದೆಯುಂಟು. ಹಾಗೆ ಈ ಸಂಶಯ ನಿವಾರಣೆಯಾದ ಹೊರತು ನಮಗೆ ಶ್ರದ್ಧಾ ಭಕ್ತಿಗಳು ಹುಟ್ಟುವಹಾಗಿಲ್ಲ. ಶ್ರದ್ಧಾಭಕ್ತಿಗಳು ಹುಟ್ಟಿದಹೊರತು ಜ್ಞಾನ ಸಂಪಾದನೆಯಾಗುವಹಾಗಿಲ್ಲ. ಜ್ಞಾನವುಂಟಾಗಿ ಇಂದ್ರಿಯಾತೀತವಾದ ಪರಬ್ರಹ್ಮವಸ್ತುವಿನ ಅನುಭವವಾದ ಹೊರತು ಸಂಶಯಗಳು ದೂರವಾಗುವುದಿಲ್ಲ. [೧] ಇದರ ಮೇಲೆ “ಕುರುಡುನಂಬಿಕೆ”

  1. ಜ್ಞಾನಸ೦ಛಿನ್ನ ಸ೦ಶಯಂ-ಗೀತಾ. ಭಿದ್ಯತೆಹೃದಯಗ್ರ೦ಥಿಶ್ಫಿದ್ಯಂತೆ ಸರ್ವಸ೦ಶಯಾಃ |.... ತಸ್ಮಿನ್ ದೃಷ್ಟೆ ಪರಾವರೆ.---ಮುಂಡಕೋಪನಿಷತ್ತು.