ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೧೦೧

ದ್ವೈತ ವಿಶಿಷ್ಟಾದ್ವೈತ ಮತಗಳು ಬೇರೆ ಬೇರೆಯಲ್ಲ.ಅವೆಲ್ಲವೂಒಬ್ಬೊಬ್ಬ ಸಾಧಕನ ಜೀವಮಾನದಲ್ಲಿಯೂ ಒಂದಾದ ಮೇಲೆ ಒ೦ದರಂತೆ ಬರತಕ್ಕ ಅವಸ್ಥಾಭೇಧಗಳು[೧] ” ಎಂದು ಮುಂತಾಗಿ ಹೇಳುತ್ತಿದ್ದರು. ಅವರ ಆಚರಣೆಯೂ ಎಷ್ಟು ಮತವೋ ಅಷ್ಟು ಪಥ”ಎಂಬುದಕ್ಕೆ ತಕ್ಕಂತೆಯೇ ಇತ್ತು. ತಲೆಗೆಲ್ಲ ಒಂದೇ ಸೂತ್ರವನ್ನುಅವರು ಎಂದಿಗೂ ವಿಧಿಸಿದವರಲ್ಲ. ಒ೦ದು ಜನರಿಗೂ ಮತ್ತೊಂದುಜನರಿಗೂ ಒಬ್ಬ ಮನುಷ್ಯನಿಗೂ ಮತ್ತೊಬ್ಬ ಮನುಷ್ಯನಿಗೂ ಸ್ವಭಾವಗುಣ, ಮುಂತಾದುವ್ರಗಳಲ್ಲಿ ವ್ಯತ್ಯಾಸವಿರುವತನಕ ಅವರ ಮಾರ್ಗವೂ ಬೇರೆಯಾಗಬೇಕು. ಆದ್ದರಿಂದ ಪರಮಹಂಸರು ಶಿಷ್ಯರಯೋಗ್ಯತೆಯನ್ನು ನೋಡಿ ಅವರವರಿಗೆ ತಕ್ಕ ಶಿಕ್ಷಣವನ್ನು ಕೊಡುತ್ತಿದ್ದರು ಸಮರ್ಥನಾದ ವೈದ್ಯನಂತೆ ಬೇಕಾದ ಸಾಧನಸಾಮಗ್ರಿಗಳನ್ನೂ ಅನುಭವವನ್ನೂ ಸಂಪಾದಿಸಿಟ್ಟುಕೊಂಡು ಯಾರು ಬಂದರೂ,

  1. ಈ ಸ೦ದರ್ಭದಲ್ಲಿ ಮಹಾಜ್ಞಾನಿಯಾದ ಹನುಮ೦ತನ ಕಥೆಯನ್ನು ಹೇಳುತ್ತಿದ್ದರು. ಒಂದು ಸಲ ಶ್ರೀರಾಮಚಂದ್ರನು, ಹನುಮ೦ತನನ್ನು ' ನೀನು ನನ್ನನ್ನು ಯಾವಭಾವದಲ್ಲಿ ಕಾಣುವೆ ? ನನ್ನನ್ನುಯಾವಭಾವದಿಂದ ಕಂಡುಕೊಂಡು ಪೂಜೆ ಮಾಡುವೆ ? ' ಎ೦ದು ಕೇಳಿದನ೦ತೆ. ಆಗ ಆ೦ಜನೇಯನು, " ಹೇ ರಾಮ ! ಯಾವಾಗ ನನಗೆ ಈದೇಹ ಬುದ್ದಿ ಇರುತ್ತದೆಯೋ, ಅ೦ದರೆ ನಾನು ದೇಹವೆ೦ದು ತಿಳಿದುಕೊಂಡಿರುತ್ತೇನೆಯೋ, ಆಗ ನೀನು ಪ್ರಭು, ನಾನು ದಾಸ, ನೀನುಸೇವ್ಯ ನಾನು ಸೇವಕ, ನೀನು ಪೂಜ್ಯ, ನಾನು ಪೂಜಕ ಎಂದು ತಿಳಿದುಕೊ೦ಡಿರುತ್ತೇನೆ. ಯಾವಾಗ ನಾನು ಮನಸ್ಸು ಬುದ್ದಿ ಗಳಿ೦ದ ಕೂಡಿದಜೀವಾತ್ಮನೆಂಬ ಭಾವವಿರುತ್ತದೆಯೋ ಆಗ ನೀನು ಪೂರ್ಣ, ನಾನುಅ೦ಶ ಎ೦ದು ತಿಳಿದುಕೊಂಡಿರುತ್ತೇನೆ. ಮತ್ತು ಯಾವಾಗ ನಾನುಉಪಾಧಿರಹಿತವಾದ ಶುದ್ಧವಾದ ಆತ್ಮವೆಂದು ಸಮಾಧಿಯಲ್ಲಿ ಅನುಭವಕ್ಕೆ ತಂದುಕೊಳ್ಳುತ್ತೇನೆಯೋ ಆಗ ನೀನು ಯಾರೋ ನಾನು ಅವನೇ.ನೀನೂ ನಾನೂ ಒ೦ದೇ, ಏನೂ ಭೇದವಿಲ್ಲ, ಎಂದು ತಿಳಿದುಕೊಳ್ಳುತ್ತೇನೆ ” ಎ೦ದು ಉತ್ತರಕೊಟ್ಟನಂತೆ.