ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೩೧

ಒಂದು ವಿಷಯದಲ್ಲಿ ಸಮಾಧಾನ ಹೇಳಿದಂತೆ ಬೈಬಲಿನಲ್ಲಿ ಹೇಳಿದೆ. ಹೀಗೆಯೇ ಇತರ ಅವತಾರ ಪುರುಷರ ಜೀವನ ಚರಿತ್ರೆಗಳಲ್ಲಿಯೂ ಈ ವಿಧವಾದ ಘಟನೆಗಳು ಕಂಡುಬರುತ್ತವೆ. ಹಾಗಾದರೆ ಅವತಾರಪುರುಷರ ಜೀವನಚರಿತ್ರೆಗಳನ್ನು ಬರೆದ ಮಹನೀಯರೆಲ್ಲರೂ ಮಸಲತ್ತು ಮಾಡಿಕೊಂಡು ಒಂದೇವಿಧವಾದ ಸುಳ್ಳನ್ನು ಎಲ್ಲರೂ ಬರೆದಿದ್ದಾರೆಯೆ ?

ಅದೇವರ್ಷ ಶಿವರಾತ್ರಿಯದಿವಸ ಗದಾಧರನ ಜೊತೆಗಾರರಾದ ಕೆಲವು ಹುಡುಗರು ಆ ಗ್ರಾಮದ ಒಬ್ಬ ದೊಡ್ಡ ಮನುಷ್ಯನಾದ ಸೀಥಾನಾಥಪಾಯಿನ್ ಎಂಬಾತನ ಮನೆಯಲ್ಲಿ ಒಂದು ಶಿವಕಥೆಯನ್ನು ಆಟವಾಡಬೇಕೆಂದು ನಿಶ್ಚಯಿಸಿ ಶಿವನವೇಷ ಹಾಕುವುದಕ್ಕೆ ಗದಾಧರನನ್ನು ಕರೆದುಕೊಂಡು ಹೋದರು. ಗದಾಧರನು ಮೊದಲು ತಾನುಮನೆಯಲ್ಲಿ ಮಾಡುತ್ತಿದ್ದ ಪೂಜೆಯನ್ನು ಬಿಟ್ಟು ಬರುವುದಕ್ಕೆ ಒಪ್ಪಲಿಲ್ಲ. ಹುಡುಗರು ಶಿವನವೇಷವನ್ನು ಹಾಕಿಕೊಂಡರೆ ಯಾವಾಗಲೂ ಶಿವನ ಧ್ಯಾನದಲ್ಲಿಯೇ ಇರಬೇಕಾಗುವುದು, ಅದು ಪೂಜೆಂತಲೂ ಯಾವವಿಧದಲ್ಲಿಯೂ ಕಡಮೆಯಾದುದಲ್ಲ ಎಂದು ಹೇಳಿ ಒಪ್ಪಿಸಿದರು. ಆದರೆ ಶಿವನ ವೇಷವನ್ನು ಹಾಕಿಕೊಂಡ ಕೂಡಲೆ ಗದಾಧರನು ಶಿವನಧ್ಯಾನದಲ್ಲಿ ತನ್ಮಯನಾಗಿ ಹೋಗಲು ಬಾಹ್ಯಸಂಜ್ಞೆಯು ಲೋಪವಾಗಿ ಹೋಯಿತ.. ಎಷ್ಟು ಹೊತ್ತಾದರೂ ಪ್ರಜ್ಞೆ ಬರಲೇಯಿಲ್ಲ. ಅ೦ದಿನ ಆಟ ನಿಂತುಹೋಯಿತು.

ಇಲ್ಲಿಂದಮುಂದಕ್ಕೆ ಈ ವಿಧವಾದ "ಭಾವಸಮಾಧಿ” ಯು ಆಗಾಗ್ಗೆ ಆಗುತ್ತಿತ್ತು. ದೇವರನ್ನು ಧ್ಯಾನ ಅಥವಾ ಭಜನೆ ಮಾಡುತ್ತಿರುವಾಗ ಮನಸ್ಸು ಅದರಲ್ಲೇ ಪೂರ್ಣವಾಗಿ ನಿಂತು ಹೋಗಲು, ಬಾಹ್ಯ ಜಗತ್ತೆ ಮರೆತು ಹೋಗುತ್ತಿತ್ತು. ಒಂದೊಂದುಸಾರಿ ಒಂದೆರಡು ದಿವಸಗಳವರೆಗೂ ಪ್ರಜ್ಞೆ ಬರುತ್ತಲೇಇರಲಿಲ್ಲ. ಬಂದ ಮೇಲೆ ಅವನಿಗೆ ಏನಾಗುತ್ತಿತ್ತೆಂದು ಕೇಳಿದರೆ