ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಶ್ರೀ ರಾಮಕೃಷ್ಣ ಪರಮಹಂಸರ

[೧]

ಬಹುಕಾಲದ ಮೇಲೆ ಪುನಃ ಅಲ್ಲಿಗೆ ಬಂದದ್ದನ್ನು ನೋಡಿ ಎಲ್ಲರಿಗೂ ಬಹು ಸಂತೋಷವಾಯಿತು. ಜಯರಾಮನಾಟಯಿ೦ದ ಶ್ರೀ ಶಾರದಾದೇವಿಯನ್ನು ಕರೆಸಬೇಕೆಂದು ಮನೆಯಲ್ಲಿ ಹೆಂಗಸರು ಮಾತನಾಡಿಕೊಂಡರು. ಇದು ಪರಮಹಂಸರ ಕಿವಿಗೆ ಬಿತ್ತು. ಆದರೂ ಅವರು ಮಾತ್ರ ಉದಾಸೀನಭಾವದಿಂದಿದ್ದರು. ಬೇಡವೆನ್ನದಿದ್ದರೆ ಸಮ್ಮತಿಸಿದ ಹಾಗೆಯೇ ಎಂದುಕೊಂಡು ಆಕೆಯನ್ನು ಕಾಮಾರಪುಕುರಕ್ಕೆ ಬರಮಾಡಿಕೊಂಡರು.

ಆಗ ಶಾರದಾದೇವಿಗೆ ಹದಿನಾಲ್ಕು ವರ್ಷ ತುಂಬಿ ಹದಿನೈದನೆಯ ವರ್ಷ ನಡೆಯುತ್ತಿತ್ತು. ಆಕೆಯು ಕಾಮಾರಪುಕುರಕ್ಕೆ ಬ೦ದ ಕೂಡಲೆ ಪರಮಹಂಸರು ಆಕೆಗೆ ಮನೆಗೆಲಸಮಾಡುವುದು ಮೊದಲುಗೊಂಡು ಜನಗಳ ಸ್ವಭಾವವನ್ನು ಹೇಗೆ ತಿಳದುಕೊಳ್ಳಿಬೇಕು, ದುಡ್ಡನ್ನು ಹೇಗೆ ಸದ್ಯವಹಾರ ಮಾಡಬೇಕು, ಈಶ್ವರನಿಗೆ ಸರ್ವಸ್ವವನ್ನೂ ಸಮರ್ಪಣೆ ಮಾಡಿ ಹೇಗೆ ಸಾಧನೆ ಭಜನೆಗಳನ್ನು ಮಾಡಬೇಕು ಎಂಬ ಪಠ್ಯಂತ ಸಮಸ್ತವಿಷಯಗಳನ್ನೂ ತಿಳಿಸಿದರು. ಆಕೆಯ ಪತಿಯು ಈಶ್ವರನಿಗಾಗಿ ತನುಮನಧನಗಳನ್ನು ಧಾರೆಯೆರೆದು ಕೊಟ್ಟಿದ್ದಕ್ಕೆ ಪೂರ್ಣ ಸಮ್ಮತಿಯನ್ನು ಕೊಟ್ಟು, ಅಲೌಕಿಕನಾದ ಸ್ವಾರ್ಥತ್ಯಾಗಮಾಡಿ, ಕಾಮಗಂಧರಹಿತವಾದ ಶುದ್ದನಾದ ದಿವ್ಯ ಪ್ರೇಮದಿಂದ ತೃಪ್ತಳಾಗಿ ಆತನನ್ನು ಸಾಕ್ಷಾತ್ ಇಷ್ಟದೇವತೆಯಂತೆ ಸೇವಿಸುತ್ತ ಬ೦ದಳು ಆಕೆಯ ಮಹತ್ವವನ್ನೂ ಪುಣ್ಯವನ್ನೂ ವರ್ಣಿಸಬಲ್ಲವರಾರು?

  1. ದೋಷವೆ೦ದು ಕೆಲವು ದಿನದ ಮೇಲೆ ಬ್ರಾಹ್ಮಣಿಯ ಮನಸ್ಸಿಗೆ ಬಂದು ಅವರ ಕ್ಷಮಾಪಣೆಯನ್ನು ಕೇಳಿಕೊಂಡಳು. ಮತ್ತು ಪರಮಹಂಸರ ಅನುಗ್ರಹದಿಂದ ವೇದಾ೦ತ ಮಾರ್ಗದ ಮೇಲಿದ್ದ ದುರಭಿಪ್ರಾಯವನ್ನು ಬಿಟ್ಟು ಎಲ್ಲಾ ಮಾರ್ಗಗಳ ಲಕ್ಷವೂ ಒ೦ದೇ ಎಂಬ ಅನುಭವವನ್ನು ತ೦ದುಕೊಳ್ಳಲು ತಪಸ್ಸು ಮಾಡುವುದಕ್ಕಾಗಿ ಕಾಶಿಗೆ ಹೊರಟು ಹೋದಳು. ಅ೦ತು ಆಕೆಯು ದಕ್ಷಿಣೇಶ್ವರದಲ್ಲಿ ಸುಮಾರು ಆರು ವರ್ಷವಿದ್ದಳು.