ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೮೧

(1) ಎಷ್ಟು ಕ್ಲಶಕರಗಳಾಗಲಿ ಅಸಹಕರಗಳಾಗಲಿ ಶಾಸ್ತ್ರೋಕ್ತವಾದ ಸಾಧನಗಳೆಲ್ಲವೂ ಸತ್ಯ.
(2) ಎಲ್ಲಾ ಮತಗಳೂ ಸತ್ಯ.
(3) ಈಶ್ವರನಾಕ್ಷಾತ್ಕಾರವೇ ಅವೆಲ್ಲವುಗಳ ಉದ್ದೇಶ್ಯವೂ ಆಗಿದೆ: ಸಿದ್ದಿಗಳನ್ನು ಪಡೆಯುವುದಲ್ಲ.
(4) ವಿಷಯಸುಖದಲ್ಲಿ ವೈರಾಗ್ಯ ಹುಟ್ಟಿದ ಹೊರತು ಸಿದ್ಧಿಯಾಗುವುದಿಲ್ಲ.[೧]
(5) ನಿಜವಾದ ವ್ಯಾಕುಲತೆಯಿದ್ದರೆ ಯಾವ ಸಾಧನೆಯ ಸಹಾಯವೂ ಇಲ್ಲದೆ ಈಶ್ವರಸಾಕ್ಷಾತ್ಕಾರವಾಗುವುದು. ಬೇಕಾದ ಅನುಕೂಲಗಳೆಲ್ಲವೂ ತಾವಾಗಿಯೇ ಒದಗಿಬರುವುವು.
(6) ವ್ಯಾಕುಲತೆಯ, ವೈರಾಗ್ಯವೂ ಎಷ್ಟು ಪ್ರಬಲವಾಗಿದ್ದರೆ ಅಷ್ಟು ಬೇಗ ಸಿದ್ಧಿಯಾಗುವುದು (ಎಷ್ಟೋ ಸಾಧನೆಗಳಲ್ಲಿ ಪರಮಹಂಸರು ಮೂರುದಿನಗಳೊಳಗಾಗಿ ಸಿದ್ಧರಾದರೆಂಬುದನ್ನು ಇಲ್ಲಿ ಪಾಠಕರು ಜ್ಞಾಪಿಸಿಕೊಳ್ಳಬೇಕು.)
(7) ಎಂಥ ಉತ್ತಮನಾದ ಸಾಧಕನಿಗೂ ಗುರುಸಹಾಯ ಬೇಕು. ಇತ್ಯಾದಿ...

ವೇದಕಾಲದಿಂದ ಇಂದಿನವರೆಗೆ ಪ್ರಚಾರದಲ್ಲಿದ್ದ ಮುಖ್ಯ ಮುಖ್ಯವಾದ ನಕಲ ಸಾಧನಗಳನ್ನೂ, ಮಾರ್ಗಗಳನ್ನೂ, ಮತ ಗಳನ್ನೂ ಅನುಷ್ಠಾನಮಾಡಿ ಅವುಗಳೆಲ್ಲ ವೂ ಸತ್ಯವೆಂದೂ ಅವುಗಳ ಉದ್ದೇಶವೆಲ್ಲವೂ ಒಂದೇಯೆಂದೂ ತೋರಿಸಿಕೊಟ್ಟ ಪರಮಹಂಸರ ಮಹಿಮೆಯನ್ನು ಎಷ್ಟೆಂದು ಹೇಳೋಣ ! ಇಂಥವರನ್ನು ಅವತಾರ ಪುರುಷರೆಂದೆನ್ನದೆ ಮತ್ತೇನೆನ್ನ ಬೇಕು? ಸಂಸಾರವನ್ನು ತ್ಯಾಗಮಾಡಿ ಆಜೀವನವೂ ಶ್ರಮಪಟ್ಟರೂ ಒಂದೊಂದು ಮಾರ್ಗದಲ್ಲಿಯಾದರೂ ಸಿದ್ಧರಾಗುವುದು ಕಷ್ಟ. ಅಂಥದರಲ್ಲಿ ಒಂದಾದಮೇಲೆ ಒಂದರಂತೆ ಅವರು ಎಷ್ಟು ಸಾಧನೆಗಳನ್ನು ಮಾಡಿ ಮುಗಿಸಿ ಸಿದ್ಧರಾದರು!


  1. Cf. You cannot serve both God and Mammon.