ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಬಿ. ಎಸ್. ವೆಂಕಟರಾಮ್

"ಏನೂ ಇಲ್ಲ ; ಸುಮ್ಮನೆ ನಾನು ಪೂನಾಯಿಂದ ಈ ಗಾಡೀಲಿ ಬರ್ತಿನೀಂತ ತಿಳಿಸಿದ್ದೆ ಅಷ್ಟೆ.”
"ಆಷ್ಟೇನೆ ? ನಿಮ್ಮ ಹೆಂಡತಿ ಬರ್ತಿದಾಳೆ ಜೊತೇಲೀಂತ ತಿಳಿಸಿರಲಿಲ್ವೆ ? ” ಗಿರೀಶನ ಮುಖವು ತೀರ ಕೆಂಪೇರಿತು. ಶಶಿಗೆ ಮುಖ ತೋರದೆ ಹೋಗಿ ಕುರ್ಚಿಯೊಂದರ ಮೇಲೆ ಕುಳಿತ. ನಾನು ಆಗಲೇ ಅದನ್ನ ಊಹಿಸಿದೆ ..ಆದರೆ ನನಗಾವಿಚಾರ ರೈಲಿನಲ್ಲೇ ಏಕೆ ಹೇಳಬಾರದಾಗಿತ್ತು ? ಸುಮ್ಮ ಸುಮ್ಮನೆ ನನ್ನ ಮನಸ್ಸು ಯಾಕೆ ನೋಯಿಸ್ಟೇಕಾಗಿತ್ತು ?”
“ ಅಯಾಂ ಸಾರಿ ....ಹಾಗೆ ತಂತಿ ಕೊಟ್ಟ ಮೇಲೆ ಪುನಃ ನನ್ನ ಮನಸ್ಸು ಬದಲಾಯ್ತು....ಈ ತಾಪತ್ರಯಗಳೆಲ್ಲಾ ಏಕೆ ಅಂತನ್ನಿಸ್ತು ; ....“ಬಟ್ ಐ ರ್ಡಿಟ್ ಆನೆಸ್ಟ್ಲಿ ಮೀನಿಟ್ !...."”
" ಹೋಗಲಿ ಬಿಡಿ....ಇನ್ನು ಆ ಮಾತೇಕೆ ?.... ಅದಿರಲಿ.... ನಿಮ್ಮ ವಿಚಾರಾನೇ ಏನೂ ನನಗೆ ಹೇಳೇ ಇಲ್ಲವಲ್ಲಾ....ಒಂದು ವೇಳೆ ಅವನ್ಯಾರಾದರೂ ನನ್ನ ಏನಾದರೂ ಕೇಳಿದರೆ ಏನು ಹೇಳಬೇಕು ?"
"ಗಂಡಸರ್ಯಾರೂ ನಿನ್ನ ಕೇಳೋರಲ್ಲ; ನನ್ನ ಕತೆ ಅವರಿಗೆ ಗೊತ್ತು. ಇನ್ನು ಹೆಂಗಸರು. ನಿನಗೆ ಹಿಂದಿ ಮಾತಾಡೋಕೆ ಬರೊಲ್ಲ ವಲ್ಲ ...ಆ ಹೆಂಗಸರಿಗೆ ಇಂಗ್ಲಿಷ್ ಅರ್ಥವಾಗೋಲ್ಲ. ಆದ್ರಿಂದ ನೀನು ಹಿಂದಿ ಮಾತಾಡೋಕೆ ಕಲಿಯೋದರೊಳಗಾಗಿ ನನ್ನ ಕಥೇನೆಲ್ಲಾ ಹೇಳ್ತಿನಿ.... ನಿಧಾನವಾಗಿ ಕೇಳೂವಂತೆ.”
“ ಹೋಗಲಿ....... ಇನ್ನೊಂದು ಮಾತು ಕೇಳ್ತೆನೆ.......ನಿಜಾ ಹೇಳೀರಾ ?" "ಏನು.... ?" "ನಿಮಗೆ ನಿಜವಾಗಿ ಮದುವೇ ಆಗಿದೆಯೇ ?"
"ಆಗದೇನೇ ಈಗ ಅವರೆಲ್ಲಾ ನನ್ನ ಹೆಂಡತಿ ಪರಿಚಯಾ ಪಡೆದರೆ ?”