ಈ ಪುಟವನ್ನು ಪರಿಶೀಲಿಸಲಾಗಿದೆ
ಅಹ್ವಾನ ಚಿತ್ರಾ : ಹ್ಞ.ವೇದೋಪನಿಷತ್ತುಗಳು,ಬುದ್ದ ಜೀವನ ಮಂದಿರ, ಮಸೀದೆ,ಗೋರಿ, ಗುರುದ್ವಾರ-ನಿರ್ಮಾಣವೈಖರಿ ಬೇರೆ ಬೇರೆ ಎಂದು ಕಂಡರೂ ಎಲ್ಲದರಲ್ಲೂ ಸಮಾನ ಅಂಶಗಳಿವೆ. ಬುದ್ದ, ಗೋಮಟೇಶ, ತ್ರಿಮೂರ್ತಿ-ಇವೆಲ್ಲ ಭಾರ ತೀಯ ಶಿಲ್ಪದ ಅಮೂಲ್ಯ .ದಾಖಾಲೆ. ಭರತೇಶ್ : ಸ್ವಾತಂತ್ರ್ಯೋತ್ತರ ಸೃಷ್ಟಿಯಾದ ಚಂದೀಘ್ಡ್ ನಗರವನ್ನು ನೋಡಿದೇನೆ. ಚಿತ್ರಾ: ಪೌರಸ್ತ್ಯ - ಪಾಶ್ಚಾತ್ಯ ಪದ್ಧತಿಗಳೆರಡೂ ಅಲ್ಲಿ ಬೆರೆತಿವೆ. ಇತಿಹಾಸದ ಪ್ರಾದ್ಯಾಪಕ: ಆ ದೃಷ್ಟಿಯಲ್ಲಿ ನಮ್ಮ ಚಿತ್ರಕಲಾಕ್ಷೇತ್ರವೂ ಪ್ರಯೋಗಗಳ ಕರ್ಮಾಗಾರ, ಅಲ್ಲವೆ? ಚಿತ್ರಾ : ನಿಜ. ಇದು ಅಪೂರ್ವ ಸಾಧನೆಗಳ ರಸಶಾಲೆಯೂ ಹೌದು. ಭಾರತೀಯ ಚಿತ್ರಕಲೆ, ಜಾತಿ-ಮತ-ಭಾಷೆಗಳ ಎಲ್ಲೆ ಕಟ್ಟುಗಳನ್ನೆಲ್ಲ ಮುರಿದಿಕ್ಕಿ ಹಾರು ತ್ತಿರುವ ಖಗರಾಜ. ಭರತೇಶ್: ಸಂಗೀತಗಾರ ತಾನ್ ಸೇನ್ ಗಡ್ಡಬಿಟ್ಟುಕೊಂಡು ನವಾಬನ ಹಾಗಿರುತ್ತಿದ್ದ ನಂತೆ ! ಪಂಡಿತ್ : ಹೌದು. ಕವಿ ಜಗನ್ನಾಥ ಪಂಡಿತ ಶಹಜಹಾನನ ಅಂತರಂಗದ ಮಿತ್ರನಾಗಿದ್ದ. ಇತಿಹಾಸದ ಪ್ರಾದ್ಯಾಪಕ : - ಕವಿತೆಯ ಮಾತು ಬಂತು. “ಭಾರತೀಯ ಕಾವ್ಯ' ಅಂತ ಒಂದಿದೆ ತಾನೆ? ಭರತೇಶ್: ಖಂಡಿವಾಗಿ! ಬೇಕಾದರೆ ಸಂಸ್ಕೃತದ ಪ್ರಾಧಾಪಕರನ್ನು ಕೇಳಿ. ಏನ್ರಿ ಪಂಡಿತ್ ಜ್? _________________ ೧೬೯