ಈ ಪುಟವನ್ನು ಪರಿಶೀಲಿಸಲಾಗಿದೆ



                   ಅಹ್ವಾನ
 ಚಿತ್ರಾ :
   ಹ್ಞ.ವೇದೋಪನಿಷತ್ತುಗಳು,ಬುದ್ದ ಜೀವನ ಮಂದಿರ, ಮಸೀದೆ,ಗೋರಿ,
   ಗುರುದ್ವಾರ-ನಿರ್ಮಾಣವೈಖರಿ ಬೇರೆ ಬೇರೆ ಎಂದು ಕಂಡರೂ ಎಲ್ಲದರಲ್ಲೂ
   ಸಮಾನ ಅಂಶಗಳಿವೆ. ಬುದ್ದ, ಗೋಮಟೇಶ, ತ್ರಿಮೂರ್ತಿ-ಇವೆಲ್ಲ ಭಾರ
   ತೀಯ ಶಿಲ್ಪದ ಅಮೂಲ್ಯ .ದಾಖಾಲೆ.
 ಭರತೇಶ್ :
   ಸ್ವಾತಂತ್ರ್ಯೋತ್ತರ ಸೃಷ್ಟಿಯಾದ ಚಂದೀಘ್ಡ್ ನಗರವನ್ನು ನೋಡಿದೇನೆ.
 ಚಿತ್ರಾ:
   ಪೌರಸ್ತ್ಯ - ಪಾಶ್ಚಾತ್ಯ ಪದ್ಧತಿಗಳೆರಡೂ ಅಲ್ಲಿ ಬೆರೆತಿವೆ.
 ಇತಿಹಾಸದ ಪ್ರಾದ್ಯಾಪಕ:
   ಆ ದೃಷ್ಟಿಯಲ್ಲಿ ನಮ್ಮ ಚಿತ್ರಕಲಾಕ್ಷೇತ್ರವೂ ಪ್ರಯೋಗಗಳ ಕರ್ಮಾಗಾರ,
   ಅಲ್ಲವೆ?
  ಚಿತ್ರಾ :
     ನಿಜ. ಇದು ಅಪೂರ್ವ ಸಾಧನೆಗಳ ರಸಶಾಲೆಯೂ ಹೌದು. ಭಾರತೀಯ
     ಚಿತ್ರಕಲೆ, ಜಾತಿ-ಮತ-ಭಾಷೆಗಳ ಎಲ್ಲೆ ಕಟ್ಟುಗಳನ್ನೆಲ್ಲ ಮುರಿದಿಕ್ಕಿ ಹಾರು ತ್ತಿರುವ ಖಗರಾಜ.  
 ಭರತೇಶ್:
    ಸಂಗೀತಗಾರ ತಾನ್ ಸೇನ್ ಗಡ್ಡಬಿಟ್ಟುಕೊಂಡು ನವಾಬನ ಹಾಗಿರುತ್ತಿದ್ದ 
    ನಂತೆ !
 ಪಂಡಿತ್ :
    ಹೌದು. ಕವಿ ಜಗನ್ನಾಥ ಪಂಡಿತ ಶಹಜಹಾನನ ಅಂತರಂಗದ ಮಿತ್ರನಾಗಿದ್ದ.
 ಇತಿಹಾಸದ ಪ್ರಾದ್ಯಾಪಕ : -
    ಕವಿತೆಯ ಮಾತು ಬಂತು. “ಭಾರತೀಯ ಕಾವ್ಯ' ಅಂತ ಒಂದಿದೆ ತಾನೆ? 
 ಭರತೇಶ್:
     ಖಂಡಿವಾಗಿ! ಬೇಕಾದರೆ ಸಂಸ್ಕೃತದ ಪ್ರಾಧಾಪಕರನ್ನು ಕೇಳಿ. ಏನ್ರಿ
     ಪಂಡಿತ್ ಜ್?
                      _________________
                             ೧೬೯