ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆಹ್ವಾನ ನಿರೂಪಕ: ಮೂಲಭೂತ ಘನ ಕೈಗಾರಿಕೋದ್ಯಮಗಳ ಜತೆಗೆ ಗ್ರಾಮಿಾಣ ಗುಡಿ ಕೈಗಾರಿಕೆಗಳಿಗೂ ಒಂದು ಸ್ಥಾನ. ಪುರುಷ ಪತ್ರಿಕೋದ್ಯೋಗಿ : ಮದರಾಸಿನಲ್ಲಿ ಅಖಂಡ ರೈಲುಡಬ್ಬಿಗಳನ್ನು ತಯಾರಿಸುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ, ಐದುವರ್ಷಗಳ ಗುರಿಯನ್ನು ಮೂರೇ ವರ್ಷಗಳಲ್ಲಿ ಸಾಧಿಸಿದ ಹಿರಿಮೆಯಿದೆ. ಸ್ತ್ರೀಕಂಠ : ಯಾಕಯ್ಯ ಇಷ್ಟೊಂದು ನೀರು ಹಾಕ್ತೀಯಾ ಹಾಲಿಗೆ? ದಿನಾ ಇದೇ ಗೋಳು. ಸಾಕಪ್ಪಾ, ಸಾಕು! ಸ್ತ್ರೀ ಪತ್ರಿಕೋದ್ಯೋಗಿ : ಮುಂಬಯಿಯ ಆರೇ ಮಿಲ್ಕ್ ಕಾಲನಿ, ಇಡೀ ನಗರದ ಅರ್ಧ ಜನಸಂಖ್ಯೆಗೆ ಸಾಲುವಷ್ಟು ಒಳ್ಳೆಯ ಹಾಲನ್ನು ಪೂರೈಸುತ್ತಿದೆ. ಪುರುಷ ಪತ್ರಿಕೋದ್ಯೋಗಿ : ಚಿತ್ತರಂಜನ ಕಾರಖಾನೆಯ ರೈಲು ಎಂಜಿನುಗಳು,ಯಾವದೇಶವಾದರೂ ಹೆಮ್ಮೆ ಪಡುವಂಥವಾಗಿವೆ. ಸ್ತ್ರೀ ಪತ್ರಿಕೋದ್ಯೋಗಿ : ಮುಂಬಯಿಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ಪುಣೆಯ ರಾಸಾಯನಿಕ ಸಂಶೋಧನಾ ಸಂಸ್ಥೆ,ಪಿಂಪ್ರಿಯ ಪೆನಿಸಿಲಿನ್ ಕಾರಖಾನೆ_ ಇವೆಲ್ಲಾ, ಸರಿಯಾದ ದಿಕ್ಕಿನಲ್ಲಿ ಇಡಲಾಗಿರುವ ದೃಢ ಹೆಜ್ಜೆಗಳು. ಪುರುಷ ಪತ್ರಿಕೋದ್ಯೋಗಿ : ಬೆಂಗಳೂರಿನ ಹಿಂದೂಸ್ಥಾನ ವಿಮಾನ ಕಾರಖಾನೆ, ಸೂಪರ್ ಸಾನಿಕ್- ಧ್ವನಿವೇಗದ-ವಿಮಾನವನ್ನು ನಿರ್ಮಿಸಿದೆ. ನಿರೂಪಕ : ರಾಷ್ಟ್ರರಕ್ಷಣೆಯ ಮಾರ್ಗದಲ್ಲಿ ಈ ಆಕಾಶಹರಿಣಿಯೊಂದು ಹೆಗುರುತು.