ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಸ್ತ್ರೀ ಪತ್ರಿಕೋದ್ಯೋಗಿ: ಬೆಂಗಳೂರಿನಲ್ಲಿರುವ ಭಾರತ ಎಲೆಕ್ಟ್ರಾನಿಕ್ಸ್, ಸೂಕ್ಷ್ಮತಮ ವಿದ್ಯುತ್ ಉಪಕರಣಗಳನ್ನು ತಯಾರಿಸುತ್ತಿದೆ. ಸ್ತ್ರೀ ಪತ್ರಿಕೋದ್ಯೋಗಿ : ಮೆಷಿನ್ ಗಳಿಗೆ ಜನ್ಮನೀಡುವ ತಾಯಿಮೆಷಿನ್ ಗಳು, ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಕಾರಖಾನೆಯಲ್ಲಿ ನಿರ್ಮಾಣವಾಗುತ್ತಿವೆ. ನಿರೂಪಕ : ಕೃಷಿ ವ್ಯವಸಾಯವೇ ಜೀವನಾಡಿ ಎಂದು ಪರಿಗಣಿತವಾದ ರಾಷ್ಟ್ರದಲ್ಲಿ, ಔದ್ಯೋಗಿಕ ಕ್ರಾಂತಿ, ಜತೆಯಲ್ಲೆ, ಆ ನಾಡಿಯ ಬಡಿತದ ಬಗೆಗೂ ತೀವ್ರ ಗಮನ. ಸ್ತ್ರೀ ಪತ್ರಿಕೋದ್ಯೋಗಿ: ಸಿಂದ್ರಿಯಲ್ಲಿ ರಾಸಾಯನಿಕ ಗೊಬ್ಬರದ ಕಾರಖಾನೆ ಇದೆ. ಗ್ರಾಮಾಂತರ ಪ್ರದೇಶಗಳ ಸ್ವರೂಪವನ್ನು ಬದಲಾಯಿಸುವ ಕಾರ್ಯಕರ್ತರು ಹೈದರಾಬಾದಿನ ಬಳಿಯ ಹಿಮಾಯತ್ ಸಾಗರದಲ್ಲಿ ಸಿದ್ಧವಾಗುತ್ತಿದ್ದಾರೆ. ಸಮಾಜ ವಿಕಾಸ ಯೋಜನೆಗಳು ಹಳ್ಳಿಗಾಡುಗಳನ್ನು ಆವರಿಸುತ್ತಿವೆ. ಪುರುಷ ಪತ್ರಿಕೋದ್ಯೋಗಿ : ರಾಷ್ಟ್ರೀಯ ಹೆದ್ದಾರಿಗಳ, ಜಲಮಾರ್ಗಗಳ, ನೌಕಾತಾಣಗಳ ರಚನೆಯಾಗುತ್ತಿದೆ. ಒಣಗಿದ ನೆಲಕ್ಕೆ, ಬಂಜರು ಭೂಮಿಗೆ, ನೀರುಣಿಸುವ ಯೋಜನೆಗಳು ಕರಗತವಾಗಿವೆ. ಎಂತಹ ಅಣೆಕಟ್ಟಗಳು! ವಾಯವ್ಯದ ಭಾಕ್ರಾನಂಗಲ್, ಈಶಾನ್ಯದ ಹಿರಾಕುಡ್, ದಕ್ಷಿಣದ ತುಂಗಭದ್ರಾ, ಪಶ್ಚಿಮದ ಕೊಯಿನಾ-ಶರಾವತಿ.... ನಿರೂಪಕ : ನೀರಿಗಷ್ಟೇ ಅಲ್ಲ, ವಿದ್ಯುದುತ್ಪಾದನೆಗೂ ಇಲ್ಲಿ ಏರ್ಪಾಟಿದೆ. ಸ್ತ್ರೀ ಪತ್ರಿಕೋದ್ಯೋಗಿ: ಮನೆ-ಮನೆಗೂ ಬೆಳಕು.