ಆಕೆ ಚೇತರಿಸಿಕೊಂಡಾಗ, "ಮಗು ಸತ್ತು ಬದುಕಿತು" ಎಂದು ಸಮಾಧಾನದ ಉಸಿರೆಳೆದರು ತಂದೆ.
ಆದರೆ ಚೇತರಿಸಿಕೊಳ್ಳುತಿದ್ದ ತುಂಗಮ್ಮ ಮಲಗ್ಗಿದ್ದಲ್ಲಿಂದಲೆ ತಂದೆಯ ಕೈಗಳಿಗೆ ಆತುಕೊಂಡು, ವಯಸಾಗ್ಗಿದ್ದ ಆ ಬೆರಳುಗಳಿಗೆ ಕಣ್ಣೀರಿನ ಸ್ನಾನಮಾಡಿಸಿದಳು.
"ಯಾಕಮ್ಮ, ಯಾಕೆ ಅಳ್ತಿದ್ದೀಯಾ? ಬೇಗನೆ ಗುಣವಾಗತ್ತೆ ಯಾವ ಹೆದರಿಕೇನೂ ಇಲ್ಲ...."
-ಎಂದು ತಂದೆ ರೋಗಿಯನ್ನು ಸಂತೈಸಿದರು ಕ್ಷೀಣವಾಗಿದ್ದರೂ ಕೇಳಿಸಿತು.
"ನುಂಗೆ ಗುಣವಾಗದೇ ಇದ್ರೂ ಮೇಲು ಅಣ್ಣ"
"ಯಾಕೆ, ಯಾಕೆ ಹಾಗಂತೀಯಾ ಮಗಳೆ."
"ಅಣ್ಣ, ಅಣ್ಣಯ್ಯ, ನಾನು ದೊಡ್ಡ ತಪ್ಪು ಮಾಡಿದೀನಿ ಅಣ್ಣಯ್ಯ."
ತುಂಗಮ್ಮನ ತಂದೆಗೆ ಆಕ್ಷಣ ಅರ್ಥವಾಗಲಿಲ್ಲ; ಆದರೆ ಮರುಕ್ಷಣವೆ ಅರ್ಥವಾಯಿತು ಅರ್ಥವಾದಗ ಹೃದಯ ಕ್ರಿಯೆ ನಿಂತು ಚಲಿಸಿತು.
ತನ್ನ ಬಲಗೈಯನ್ನು ಮಗಳ ಬಿಗಿತದಿಂದ ಬಿಡಿಸಿಕೊಂಡು, ಆಕೆಯ ತಲೆಗೂದಲ ಮೇಲೆ ಆ ತಂದೆ ಕೈಯಾಡಿಸಿದರು. ಆ ವಯಸ್ಸಾದ ಕಣ್ಣುಗಳಲ್ಲಿ ಮೂಡಿ ಬಂದ ಬಿಸಿಯಾದ ಮೇಲೆ ಬಾಗಿ, ಮಗಳ ತಲೆಯನ್ನು ಭಾರವಾದ ತನ್ನ ಹೃದಯಕ್ಕೆ ಅನಿಸಿಕೊಂಡು ಬಹಳ ಹೊತ್ತು ಅವರು ಹಾಗೆಯೇ ಕುಳಿತರು.
ಮಗಳು ಮತ್ತಷ್ಟು ಕ್ಷೀಣವಾದ ಸ್ವರದಲ್ಲಿ ಕೇಳಿದಳು:
"ತವ್ವಾಯ್ತು, ಕ್ಷಮಿಸ್ತೀಯಾ ಅಣ್ಣ, ಅಣ್ಣ, ಕ್ಷಮಿಸ್ತೀಯಾ?"
"ಮಾತಡ್ಬೇಡ ತುಂಗ ಆಯಾಸವಾಗುತ್ತಿ...."
ಎನ್ನುತ್ತ ತಂದೆ ಬಲುಪ್ರೀತಿಯಿಂದ ತನ್ನ ತೋರು
ಬೆರಳಮನ್ನು ಮಗಳ ತುಟಿಗಳಿಗೆ ಅಡ್ಡವಾಗಿ ಹಿಡಿದರು. ಆ ಸ್ವರವೂ ನಡುಗುತ್ತಿತ್ತು-ಬೆರಳೂ ಕೂಡಾ.
....ಮಗಳು ಬದುಕಿದಳು. ತಂದೆ ತಲೆಕೆಡಿಸಿಕೊಳ್ಳಲಿಲ್ಲ.