ಈ ಪುಟವನ್ನು ಪ್ರಕಟಿಸಲಾಗಿದೆ

 ೧೬೫ ಅಭಯ

" ನಿಮ್ತಂದೆ ಬಂದ್ಮೇಲೆ ಹೊರಟ್‍ಹೋಗ್ತೀಯೇನಮ್ಮ ತುಂಗ?"
ಆ ಪ್ರಶ್ನೆಗೆ ತುಂಗಮ್ಮ ಸಿದ್ದವಾಗಿರಲಿಲ್ಲ ಏನು ಉತ್ತರ ಕೊಡ
ಬೇಕೆಂಬುದೇ ತೋಚಲಿಲ್ಲ ಆಕೆಗೆ ಆದರೂ ಪ್ರಬಲವಾಗಿಯೆ ಎದ್ದು
ಕಾಣಿಸಿಕೊಂಡ ಮುಂದೇನು ಪ್ರಶ್ನಾರ್ಥಕ ಚಿಹ್ನೆ ಆಕೆಯನ್ನು ಅಧೀರಳಾಗಿ
ಮಾಡಿತು.
“ನಂಗೊತ್ತಿಲ್ಲ ದೊಡ್ಡಮ್ಮ. ಏನಂತಾರೊ ನಮ್ಮಣ್ಣ ?”
ತಾವು ಪ್ರಶ್ನೆಕೇಳಿದ ತಪ್ಪನ್ನು ತಿದ್ದಿಕೊಳ್ಳುವವರಂತೆ ಸರಸಮ್ಮ
ನೆ೦ದರು :
"ಸರಿಬಿಡು. ಆಮೇಲೆ ಮಾಡಿದರಾಯ್ತು ಆ ಯೋಚ್ನೆ”.
ಸ್ವಲ್ಪಹೊತ್ತು ಮೌನವಾಗಿದ್ದು ತುಂಗಮ್ಮ ಬೇರೆಮಾತು ತೆಗೆದಳು :
"ಇವತ್ನಿಂದ ಜಗಲೀಲೆ ಮಲಗ್ತೀನಿ ದೊಡ್ಡಮ್ಮ.”
"ಯಾಕೆ ಒಳಗೆ ಸೆಖೇನಾ ?”
"ಹಾಗಲ್ಲ ದೊಡ್ಡಮ್ಮ. ನಾನೇನೂ ಇನ್ನು ರೋಗಿ ಅಲ್ಲವಲ್ಲ.
ಬೇರೆಯವರ ಜತೇಲೆ ಹೊರಗೆ ಮಲಗೋದು ನ್ಯಾಯ ಅಲ್ವೆ?”
ನಟನೆಯ ಗದರಿಕೆಯ ಧ್ವನಿಯಲ್ಲಿ ಸರಸಮ್ಮ ಹೇಳಿದರು :
"ಸಾಕ್ಸಾಕು! ತಿಳ್ದೋರಹಾಗೆ ಜಾಸ್ತಿ ಮಾತಾಡ್ಬೇಡ. ಇನ್ನೂ ಹಸಿಮೈ
—ఆಗ್ಲೇ—"
"ಹಾಗಲ್ಲ ದೊಡ್ಡಮ್ಮ. ಬೇರೆ ಹುಡುಗೀರು ಏನೂ ಅನ್ನೊಲ್ವೆ?”
ತಾನು ಅಭಯಧಾಮಕ್ಕೆ ಬ೦ದ ಮಾರನೆ ದಿನ ಬೆಳಿಗ್ಗೆ ಕಳ್ಳಿ
ದಮಯಂತಿ ಜಲಜೆಯನ್ನು ಕುರಿತು ಆಡಿದ್ದ ಮಾತನ್ನು ತುಂಗಮ್ಮ ಮರೆತಿರ
ಲಿಲ್ಲ. ಆದರೂ ಸರಸಮ್ಮನ ನಿರ್ಧಾರದ ಸ್ವರ ಕೊನೆಯ ಮಾತು
ಹೇಳಿತು:
"ಅಮ್ಮ ತುಂಗಾ! ಇಲ್ಲಿ ನಾನು ಮೇಟ್ರನ್, ತಿಳೀತಾ?"
ತುಂಗಮ್ಮ ನಿರುತ್ತರಳಾದಳು
ಕಾಲಕಳೆಯುವ ಸಮಸ್ಯೆಗೆ ಪರಿಹಾರವಾಗಿ ಆಕೆ ಆ ಕೊಠಡಿಯಲ್ಲಿದ್ದ
ಸಣ್ಣ ಪುಟ್ಟ ಸಾಮಗ್ರಿಗಳನ್ನೆತ್ತಿ, ಫೂ ಎಂದು ಧೂಳು ಊದಿ, ಮತ್ತೆ ಅಲ್ಲಿಯೆ
ಇಡ ತೊಡಗಿದಳು. ಸರಸಮ್ಮ ಅದಕ್ಕೂ ಆಕ್ಷೇಪಿಸಿದರು. ಸಂದರ್ಶಕರ