ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೭೭

"ಇನ್ನೆಂಥ ನಿರಾಶೆಯಣ್ಣ?ನನಗೆ ಇನ್ನೇನಣ್ಣ ಆಗ್ಬೇಕಾಗಿದೆ?"

ಆ ಮಾತಿಗೆ ಉತ್ತರ ಕೊಡುವುದು ಸಾಧ್ಯವಿತ್ತು? ಉತ್ತರ ವಾದರೂ ಏನಾದರೂ ಇತ್ತೆ? ತಂದೆ ಸಹಾಯಕ್ಕೆಂದು ಮಗನತ್ತ ತಿರುಗಿದರು:

"ನೋಡು ಪುಟಾಣಿ....ನಿನ್ನಕ್ಕ ನಮ್ಜತೇಲಿ ಬರೋಲ್ವಂತೆ."

"ಬರೊಲ್ವೆ ಅಕ್ಕ?" ತುಂಗ ಉತ್ತರವೀಯಲಿಲ್ಲ.ತಂದಯೇ ಹೇಳಿದರು:

"ಇನ್ನು ನಿನ್ನಕ್ಕ ನಮ್ಮನ್ನ ಬಿಟ್ಬಟ್ಟು ಇಲ್ಲೇ ಇರುತಾಳಂತೆ" ವ್ಯಧೆಯಿಂದ ತಂದೆಯ ಧ್ವನಿ ನಡುಗುತಿತ್ತು.ಮಗನ ಕಣ್ಣುಗಳು ಸಜಲವಾದುವು.

"ಹಾಗಾದರೆ ನಾವೂ ಇಲ್ಲೇ ಇದ್ಬಿಡೋಣ್ವೆ ಅಣ್ಣ?" ಎಂತಹ ಪರಿಹಾರ!

ಮೌನವಾಗಿಯೆ ದುಃಖದ ಉಗುಳು ನುಂಗುತ್ತ ತಂದೆ ತಮ್ಮ ಹುಬ್ಬುಗಳ ಮೇಲೆ ಬೆರಳೋಡಿಸಿದರು. ಆ ಮೂವರೂ ಉಸಿರಾಡುವುದು ಕಷ್ಟವಾದಂತಹ ಯಾತನೆಯ ಸನ್ನಿವೇಶ....

ಸರಸಮ್ಮ ಬಾಗಿಲಿನತ್ತ ಸುಳಿದಿದ್ದರು.ಆಷ್ಟರೊಳಗೆ ಆಗಲೇ ಹೊರಡುವ ತೀರ್ಮಾನ ಮಾಡಿ, ತಂದೆ-ಮಗಳು ತಮ್ಮ ಹಾದಿ ನೋಡುತ್ತಿರ ಬಹುದು ಎಂದುಕೊಂಡಿದ್ದರು ಆಕೆ.ತುಂಗಮ್ಮನನ್ನು ಮಧ್ಯಾಹ್ನದ ಊಟಕ್ಕೆ ನಿಲ್ಲಿಸಿಕೊಳ್ಳಬೇಕು; ಬೀಳ್ಕೊಡುವ ಸಮಾರಂಭಕ್ಕಾಗಿ ವಿಶೇಷ ಅಡುಗೆ ಮಾಡಿಸಬೇಕು;-ಎಂದು ಅವರು ಭಾವಿಸಿಕೊಂಡಿನದ್ದರು....ಆದರೆ ಇಲ್ಲಿ ಆಕೆ ಕಂಡ ದೃಶ್ಯ ನಿರೀಕ್ಷಿಸಿದ್ದುದಕ್ಕಿಂತ ಭಿನ್ನವಾಗಿತ್ತು. ಸರಸಮ್ಮ ಒಳಬಂದುದನ್ನು ಕಂಡು ಎಲ್ಲರಿಗೂ ಒಂದು ರೀತಿಯ ಸಮಾಧಾನವಾಯಿತು.ಆದರೆ ಅವರೆಲ್ಲರನ್ನೂ ನೋಡಿ ಅಣಕಿಸಿತು. ವಿಜಯಿಯಾಗಿದ್ದ ಮೌನ. ಹೀಗೆ ದುರ್ಬಲ ಮನಸಿನಿಂದ ವರ್ತಿಸುವುದು ನಿವ್ರುತ್ತ ಹೈಸ್ಕೂಲು