ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ ೧೯೧

ಮನಸಿನೊಳಗೆ ಆ ಗೊಂದಲವಿದ್ದುದು ಒಂದೆರಡು ನಿಮಿಷ ಮಾತ್ರ.
ತಾವೇನನ್ನೂ ಆ ಹಣದಿಂದ ತೆಗೆದುಕೊಳ್ಳಕೂಡದೆಂದೇ ಅವರು ನಿರ್ಧರಿ
ಸಿದರು.
“ಇದು ನೀವು ಅಭಯಧಾಮಕ್ಕೆ ಕೊಡೋ ಮೊದಲ್ನೇ ಕಾಣಿಕೆ
ಮತ್ತು ಕೊನೇ ಕಾಣಿಕೆ, ಅಲ್ವೆ ?”
“ಯಾಕೆ ?”
“ಇನ್ನೇನು ? ತುಂಗ ಇನ್ನು ಇಲ್ಲಿ ಅನಾಥೆಯಾಗಿ ಇರೋದಿಲ್ಲ.
ಸಮಿತಿಯವರು ಒಪ್ಪಿದ್ಮೇಲೆ ಆಕೆ ಸ್ಟಾಫಿನವಳಾಗ್ತಾಳೆ-ಉಪಾಧ್ಯಾಯಿನಿ
ಎಂತಲೋ, ನಿನಗೆ ಸಹಾಯಕಿ ಎಂತಲೋ ಆ ಮೇಲೆ ಆಕೇನೆ ಸಂವಾದಿ
ಸ್ತಾಳೆ ... ಏನಮ್ಮ ತುಂಗ ?”
ಬದುಕು ನಿರಾಶಾಮಯವೆಂದು ಯಾವ ಕಾಲದಲ್ಲಿಯೂ ತೋರಿಯೇ
ಇರಲಿಲ್ಲವೇನೊ ಎಂಬ ಭ್ರಮೆ ಹುಟ್ಟಿಸುವಷ್ಟು ಸಮರ್ಥವಾಗಿದ್ದುವು ಆ
ಮಾತುಗಳು.
ಅಷ್ಟು ಹೊತ್ತೂ ಮುಂದೆ ಬಾಗಿದ್ದ ತಂದೆ ಒರಗು ಬೆಂಚಿಗೊರಗಿ
ನೇರವಾಗಿ ಕುಳಿತರು. ಹಾಗೆ ಕುಳಿತು ಅವರು ಮಗಳ ಮುಖ ನೋಡಿದರು.
ಎಷ್ಟೊಂದು ನಿರ್ಮಲವಾಗಿತ್ತು, ನಿಷ್ಕಪಟವಾಗಿತ್ತು ಆ ಮುಖ ಮುದ್ರೆ !
ಕಣ್ಣುಗಳು ಮಿನುಗುತಿದ್ದುವಲ್ಲವೆ ? ನಿನ್ನೆಯ ತನಕ ನಡೆದುದೆಲ್ಲವೂ ಬರಿಯ
ಕನಸಾಗಿ ಇಂದಿನದೊಂದೇ ನಿಜವಾಗುವುದು ಸಾಧ್ಯವಾದರೆ !
“ಆಗಲಿ ಹಾಗಾದರೆ ಮಗಳಿಗೆ ಕಾಗದ ಬರೀತಾ ಇರಿ, ಆಕೇನೂ
ಬರೀತಾಳೆ.”
.... ತಾವಿನ್ನು ಹೊರಡಬೇಕು ಹೊತ್ತಾಯಿತೆನ್ನುವ ಸೂಚ್ಯ ಸೂಚನೆ
ಆ ಮಾತು.
ತುಂಗಮ್ಮನ ತಂದೆ ಎದ್ದರು ಸರಸಮ್ಮನೂ ಕುಳಿತಲ್ಲಿಂದ ಎದ್ದರು.
ತನಗರಿಯದಂತೆಯೇ ತುಂಗಮ್ಮ ತಂದೆಯ ಬಳಿಗೆ ಬಂದು ನಿಂತಳು.
“ಸರಸಮ್ಮನವರೆ--"
ಅದು ತಂದೆಯ ಧ್ವನಿ. ಒಮ್ಮೆಲೆ, ಹೆಸರು ಹಿಡಿದು ಅವರು ಸಂಬೋ
ಧಿಸಿದ್ದರು.