ಆಯಾಸ ತುಂಗಮ್ಮನಿಗೂ ಆಗಿತ್ತು.ಮೈಕೈಗಳು ನೋಯುತಿ
ದ್ದುವು ಹೆಜ್ಜೆ ಹೆಜ್ಜೆಗೂ ತಾನುಗರ್ಭಿಣಿ ಎಂದು ದೇಹ ನೆನಪು ಮಾಡಿ ಕೊಡುತಿತ್ತು. ಆದರೂ ಆಕೆ ಉಸಿರೆತ್ತೆಲಿಲ್ಲ.
ಮುಖ ತೊಳೆದುಕೊಂಡು ಸೆರಗಿನಿಂದ ನೀರಹನಿ ಒರೆಸಿದ ಮೇಲೆ
ತುಂಗಮ್ಮ ಕೇಳಿದಳು:
"ಕಕ್ಕಸು ಎಲ್ಲಿ?"
"ಶುದ್ಧ ಮೂರ್ಖಳುನಾನು. ನಿಮ್ಮನ್ನ ಮೊದ್ಲೇ ಕೇಳ್ಬೇಕಾಗಿತ್ತು.
ಇಲ್ಲೇ ಇದೆ, ಬನ್ನಿ..."
....ಪ್ರಾತರ್ನಿಧಿಗಳನ್ನು ತೀರಿಸಿ ತುಂಗಮ್ಮ ಜಲಜೆಯರು ಆಫೀಸು
ಕೊಠಡಿಗೆ ಹಿಂತಿರುಗಿ ಬಂದಾಗ, ದಮಯಂತಿ--- ಅಲಮೇಲು ಇಬ್ಬರೂ ಅಳುತ್ತ ಕುಳಿತಿದ್ದರು. ದೀರ್ಘಸ್ರವಚನ ಮಾಡಿ ಮುಗಿಸಿ ಮೌನವಾಗಿ ಸರಸಮ್ಮ ವಿರಮಿಸುತಿದ್ದ ಹಾಗಿತ್ತು.
ಬೆಳಗ್ಗಿನ ತಿಂಡಿಯ ಹೊತ್ತು. ತುಂಗಮ್ಮ ಜಲಜೆಯರಿಗಷ್ಟೇ
ಕೊಠಡಿಗೆ ತರಿಸಿ, ಉಳಿದ ಆ ಇಬ್ಬರು ಹುಡುಗಿಯರನ್ನು ಅಲ್ಲಿಯೇ ಉಪವಾಸ ಇರಗೊಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಸರಸಮ್ಮ ಬೇರೆ ನಿಧಾರ್ರಕ್ಕೆ ಬಂದಿದ್ದರು.
"ಈ ಸಾರೆ ನಿಮ್ಮನ್ನ ಕ್ಷಮಿಸಿದೀನಿ ತಿಳೀತೆ?"
ಆ ಇಬ್ಬರೂ ಉತ್ತರನೀಯಲಿಲ್ಲ ಬಿಕ್ಕಿ ಬಿಕ್ಕಿ ಅಳುತಿದ್ದರು ಮಾತ್ರ.
"ಇನೊಂದ್ಸಲಿ ತಪ್ಪು ಮಾಡಿದ್ರೀಂದ್ರೆ---ನೋಡ್ಕೊಳ್ಳಿ ಆ ಮೇಲೆ"
ಆಗಲೂ ಹಾಗೆಯೇ ಇದ್ದರು ಹುಡುಗಿಯರು.
"ಇನ್ನು ಹೊರಡಿ!"
ಆ ಆಜ್ಜೆಯನ್ನಿತ್ತೊಡನೆ ಹುಡುಗಿಯರು ಹೊರಟರು. ಅವರ
ಹಿಂದೆಯೇ ಸರಸಮ್ಮ ತಾವು ಕೊಠಡಿಯ ಬಾಗಿಲು ದಾಟುತಿದ್ದಂತೆಯೇ ಸರಸಮ್ಮ, ತುಂಗಮ್ಮ ಜಲಜೆಯರತ್ತ ನೋಡಿ ಮುಗುಳ್ನಕ್ಕರು.
"ನೋಡಿದಿರಾ ಅಕ್ಕ? ನಮ್ಮಿಂದಾಗಿ ಇವತ್ತು ಅವರಿಬ್ರೂ ಬಚಾಯಿ
ಸ್ಕೊಂಡರು."
"ಹ್ಯಾಗೆ?"