ಈ ಪುಟವನ್ನು ಪರಿಶೀಲಿಸಲಾಗಿದೆ

22

ಶ್ರೀಕೃಷ್ಣಸಕ್ತಿ ಮುಕ್ತಾವಳಿ.

ರಾತ್ರಿಯನ್ನು ಹೇಗಮ್ಮ' -- ಕಳೆಯುವೆ? ಎಲ್ಲಿ ಮಲಗುವೆ?”...ಎಂದಳು. ದಾಮಿ
ನಿಯು ಪ್ರಥಮತ:- “ಆರಿಗೆ ಗೊತ್ತಮ್ಮ?” ಎಂದು ಹೇಳಿ, ಉತ್ತರಕೃಣದಲ್ಲಿಯೆ
- “ ಇಲ್ಲಿಯೇ ಇರುವೆನು. ನನಗಿನ್ನಲ್ಲಿ ಸ್ಥಳವಿದೆ?” ಎಂದಳು.
ಪ್ರತಿವಾಸಿನಿಯು ನಡುಗಿದಳು, ಹೇಳಿದಳು:- ಅಮ್ಮ! ಅದೇನು -ಹೆಂಗು
ಸರಿಗೆ ಸಾಧ್ಯವೆ? ಈ ಕತ್ತಲೆಯಲ್ಲಿ ವನಮಧ್ಯದಲ್ಲಿ ಒಂಟಿಗನಾಗಿ ಆವ ಗಂಡು
ಸಾದರೂ ಇರಲಾರದು. ಹಾಗೆಂದ ಮೇಲೆ, ನೀನೊಬ್ಬಳೇ ಇಲ್ಲಿ ಹೇಗೆ ಇರಬಲ್ಲೆ?
ರಾತ್ರಿಯ ವೇಳೆಯಲ್ಲಿ - ಮನೆಯೊಳಗೆ ಬೇಡವಮ್ಮ! ಮನೆಯ ಹೊರಗಿನ ಆವು
ದಾದರು ಒಂದು ಚಾವಡಿಯಲ್ಲಿಯಾದರೂ ನಿಮ್ಮ ಅತ್ತೆಮಾವಂದಿರು ಸ್ಥಳವನ್ನು
ಕೊಡಲಾರರೆ? ಅಗತ್ಯವಾಗಿಯೂ ಕೊಟ್ಟಾರು!”ಎಂದಳು,
ದಾಮಿನಿಯೂ ಅದೇ ಆಸೆಯನ್ನು ಮಾಡಿಕೊಂಡಿದ್ದಳು, ನಿಜವಾಗಿಯೂ
ಅವಳು ನಿಶ್ಬಯಮಡಿಕೋಂಡಿದಳೆನೆಂದರೆ, ರಾತ್ರಿಯಲ್ಲಿ ಯಾರಾದರೂ ತನ್ನ
ನ್ನು ಕರೆದುಕೊಂಡು ಹೋಗಬಹುದು' -ಎಂದು. ಆದರೆ, ರಾತ್ರಿಯಯಿತು;
ಪ್ರತಿವಾಸಿಯು ಹೊರಟುಹೋದಳು; ಇಷ್ಟಾದರೂ, ಆರೂ ತನ್ನನ್ನು ವಿಚಾರಿ
ಸಲಿಲ್ಲ. ಇದುವರೆಗೂ, ಮನೆಯ ಹಿಂಬಾಲಾದರೂ ತೆರೆಯಲ್ಪಟ್ಟಿತು;
ಈಗ ಅದೂ ಮುಟ್ಟಲ್ಪಟ್ಟಿತು.
ದಾಮಿನಿಯೊಬ್ಬಳೇ ಅಂಧಕಾರದಲ್ಲಿ ಕುಳಿತುಕೊಂಡಿದ್ದಳು. ರಾತ್ರಿಯೂ
ಕ್ರಮಕ್ರಮವಾಗಿಯೂ ಗಭಿರವಾಗುತ್ತ ಬಂದಿತು. ದರವಲ್ಲಿ ಅದಾವುದೋ
ಒಂದೆರಡು ದೀಪಗಳ ಬೆಳಕು ಕಾಣಬರುತ್ತಿದ್ದಿತು; ಆ ಬೀಜಗಳೂ ಒಂದೊಂದಾಗಿ
ನಂದಿಹೋದುವು. ಗ್ರಾಮವಾಸಿಗಳೆಲ್ಲರೂ ನಿಶ್ಚಿಂತರಾಗಿ ನಿದ್ದೆಹೋಗುತ್ತಿದ್ದರು;
ಆರಿಗೂ ದಾಸಿಯ ಯೋಚನೆಯೇ ಇಲ್ಲ. ಸಾನಿಯು ತನ್ನ ವಿಚಾರವನ್ನೇ
ಯೋಚಿಸತೊಡಗಿಳು, ಒಂದೊಂದು ಬಾರಿ ಭಯವೂ ಉಂಟಾಯಿತು; ಒಬ್ಬ
ಳೇ ಇರುವುದು ಅವಳಿಗೆ ಕಷ್ಟವಾಗಿ ತೋರತೊಡಗಿತ್ತು. ಒಂದು ಕಡೆ ದಿನವೆಲ್ಲ
ವೂ ಆಹಾರವಿಲ್ಲ; ಆಮೇಲೆ ಆದ್ಯಂತದಿನವೂ ಅಳುತ್ತಿದ್ದಳು. ಹೀಗೆ ಶ್ರಮದಿಂದ
ಅವಳ ದೇಹವು ದುರ್ಬಲವಾಗತೊಡಗಿತು. ದಾಮಿನಿಯು ಧೂಳಿಯಲ್ಲಿಯೇ
ಶಯನಮಾಡಿದಳು. ನಿದ್ದೆಯೂ ಬೇಗನೆ ಬಂದಿತು.
ಸ್ವಪ್ನದಲ್ಲಿಯೆ ಆಲಿಸಿದಳು;-ಆರೋ ತನ್ನನ್ನು “ ಅಮ್ಮಾ?” ಎಂದು ಕೂಗಿ
ಕರೆದರು. • ಅದಕ್ಕೆ ಸ್ವಪ್ನದಲ್ಲಿಯೇ ಅಮ್ಮಾ!' ಎಂದು ಉತ್ತರವಿತ್ತಳು. ಸ್ವಪ್ನ
ದಲ್ಲಿಯೇ ಬೋಧೆಯುಂಟಾಯಿತು; ಅವಳ ಅಮ್ಮನು ಹೇಳುತ್ತಿದ್ದಾಳೆ: -ಎಳ
ಮ್ಮ! ಈ ಮನೆಯಲ್ಲಿ ಇನ್ನು ಏನಿದೆ? - ಎಂದು.
ಮರುದಿನ ಬೆಳಗ್ಗೆ ಎದ್ದವರಾರೂ ಪುನಃ ದಾಮಿನಿಯನ್ನು ನೋಡಲಿಲ್ಲ.