ಈ ಪುಟವನ್ನು ಪರಿಶೀಲಿಸಲಾಗಿದೆ
ನಮ್ಮ ಮುಂಬರುವ ಕೃತಿ
ಬಿ ಸಿ ಲ ತೆ ರೆ ಕೊ. ಸು. ಸೀತಾರಾಮ್ ರವರ ಕಾದಂಬರಿ
ಮಧ್ಯಮ ವರ್ಗದವರ ಜೀವನವೆಂದರೆ ಉನ್ನತಗಿರಿ-ಆಳವಾದ ಕಮರಿಗಳ ನಡುವಿನ ಕಿರು ದಾರಿಯಂತೆ, ಇತ್ತ ಬಡತನದ ಆಳಕ್ಕೆ ಬೀಳ
ಲಾರದೆ ಅತ್ತ ಸಿರಿತನದ ಶಿಖರವೇರಲಾರದೇ ತತ್ತರಿಸುತ್ತಾರೆ. ಈ ವರ್ಗದವರು.
ಇನ್ನು ಮಧ್ಯಮವರ್ಗದವನ ಆ ಬಾಳೋ.. ಜೀವನದಲ್ಲಿ ತಾನು ನಿರೀಕ್ಷಿಸುವುದೇ ಒಂದು, ನಿಜವಾಗಿ ಸಂಭವಿಸು
ವುದೇ ಬೇರೊಂದು. ಇಲ್ಲಿ ಮಿತ್ರನು ದೂರವಾಗುತ್ತಾನೆ, ಒಡಹುಟ್ಟಿದವರು ಬೆಳಗುತ್ತಾರೆ, ಹೆತ್ತವರು ಕಣ್ಣೆದುರೇ ಸಾಯುತ್ತಾರೆ-- ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ. ಬಾಲ್ಯದಿಂದಲೂ ತಾನು ಪ್ರೀತಿಸಿದವಳು ಬೇರೊಬ್ಬನ
ಮಡದಿಯರಾಗುತ್ತಾಳೆ. ಇಷ್ಟೇ ಅಲ್ಲ. ಕಂಡುದೆಲ್ಲವೂ ಬಿಸಿಲ್ಗುದುರೆಗಳೇ ಆಗುವ ಈ ಬಾಳಿ
ನಲ್ಲಿ ತನ್ನ ಅಧಿಕಾರ ದರ್ಪವನ್ನೂ ತೋರಲಾಗುವುದಿಲ್ಲ. ತಾನು ಬೇಡ ವೆಂದು ದೂರೀಕರಿಸಿದ್ದ ಹೆಣ್ಣೂ ಸಹ ತನ್ನ ಹೆಂಡತಿಯಾಗಿಬಿಡಿತ್ತಾಳೆ!
ರಾಮುವಿನ ಜೀವನವೊಂದು ಈ ವಿಚಿತ್ರ ಘಟನ ಪರಂಪರೆಗಳ ಸಿಕ್ಕು ಬಲೆ ಎಲ್ಲ ಮಧ್ಯಮವರ್ಗದವರ ಜೀವನದ ಕೈಗನ್ನಡಿಯೀ ಕಾದಂಬರಿ.
ಸುಮಾರು ೨೬೦ ಪುಟಗಳು ತ್ರಿವರ್ಣ ಮುಖಚಿತ್ರ ಬೆಲೆ.೧--೮--೦