ಈ ಪುಟವನ್ನು ಪ್ರಕಟಿಸಲಾಗಿದೆ
  • ಆತ್ಮಹತ್ಯೆಯ ಯೋಚನೆ ಬಂದರೆ

ಈಸಬೇಕು ಇದ್ದು ಜಯಿಸಬೇಕು. ಸಾವು ಯಾವುದಕ್ಕೂ ಪರಿಹಾರವಲ್ಲ, ಪರಿಹಾರ ಆಗಲು ಸಾಧ್ಯವಿಲ್ಲ. ನೀವು ಸ್ವಹತ್ಯೆ ಮಾಡಿಕೊಂಡು ಸತ್ತರೆ, ನಮ್ಮನ್ನು ಪ್ರೀತಿಸುವವರಿಗೆ, ಮನೆಯವರಿಗೆ ಅವರ ಕಡೆಯ ಉಸಿರಿನವರೆಗೆ ದುಃಖ, ನೋವು ಕಾಡುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

  • ಕಷ್ಟಗಳು, ನೋವು, ಅಪಮಾನಗಳು ಚಲಿಸುವ ಮೋಡಗಳಿದ್ದಂತೆ ನಿಲ್ಲುವುದಿಲ್ಲ. ಸರಿದು ಹೋಗುತ್ತದೆ ಎಂಬುದನ್ನು ಗಮನಿಸಿ. ನೋವಿನಲ್ಲೂ ನಗಲು ಪ್ರಯತ್ನಿಸಿ.
  • ನಿಮ್ಮ ವೈದ್ಯರನ್ನು ಕಾಣಿ: ಖಿನ್ನತೆ ನಿವಾರಕ ಮತ್ತು ಶಮನಕಾರಿ ಮಾತ್ರೆಗಳನ್ನು ಬರೆಸಿಕೊಂಡು ಅವರ ಮಾರ್ಗದರ್ಶನದಲ್ಲಿ ಸೇವಿಸಿ, ಅಗತ್ಯಬಿದ್ದರೆ ಮನೋವೈದ್ಯರನ್ನು, ಮನಶಾಸ್ತ್ರಜ್ಞರನ್ನು ಕಾಣಿರಿ.

ಖಿನ್ನತೆ ಮತ್ತು ಆತ್ಮಹತ್ಯೆ:

2015ರಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತವರ ಸಂಖ್ಯೆ 1,34,000. ಇದು ಪೊಲೀಸ್ ಇಲಾಖೆಯ ಅಂಕಿ ಅಂಶ, ವರದಿಯಾಗದ ಪ್ರಕರಣಗಳನ್ನು ಗಮನಿಸಿದರೆ, ಈ ಸಂಖ್ಯೆ ಹತ್ತು ಲಕ್ಷವನ್ನೂ ಮೀರುತ್ತದೆ. ಆತ್ಮಹತ್ಯೆಗೆ ಖಿನ್ನತೆ ರೋಗವೇ ಪ್ರಮುಖ ಕಾರಣ. ಆತ್ಮಹತ್ಯೆಗೆ ಪ್ರಯತ್ನ ಮಾಡುವವರೆಲ್ಲಾ ಶೇ. 70ರಷ್ಟು ಜನ ಖಿನ್ನರಾಗಿರುತ್ತಾರೆ. ಬದುಕಿನಲ್ಲಿ ಆಸಕ್ತಿ, ವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ. ಅವರಿಗೆ 'ಸಾವೇ ಪರಿಹಾರ, ಕಷ್ಟನೋವುಗಳಿಂದ ತಪ್ಪಿಸಿಕೊಳ್ಳಲು ರಾಜಮಾರ್ಗ' ಎನಿಸಿಬಿಡುತ್ತದೆ. ಒಳಜನ್ಯ ಖಿನ್ನತೆ ಉಳ್ಳವರು, ತೀವ್ರ ಬಗೆಯ ವಿಧಾನಗಳನ್ನು ಆತ್ಮಹತ್ಯೆಗೆ ಬಳಸುತ್ತಾರೆ. ಇದರ ಬಗ್ಗೆ ಯಾವ ಸುಳಿವನ್ನೂ ಕೊಡುವುದಿಲ್ಲ. ಆತ್ಮಹತ್ಯೆ ಆಲೋಚನೆ ಮಾಡುವ ವ್ಯಕ್ತಿಯನ್ನು ನೀವು ಕಂಡರೆ ಬಹಳ ಎಚ್ಚರಿಕೆಯಿಂದ ಅವರನ್ನು ಗಮನಿಸಿ, ಆತ್ಮಹತ್ಯೆಯನ್ನು ತಡೆಗಟ್ಟಿ.


ಖಿನ್ನತೆ: ಬನ್ನಿ ನಿವಾರಿಸೋಣ / 37