ಈ ಪುಟವನ್ನು ಪ್ರಕಟಿಸಲಾಗಿದೆ
ನಿಮ್ಮ ಮಾನಸಿಕ ಆರೋಗ್ಯವರ್ಧನೆ ಹೇಗೆ?

 'ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ
ಇಂದ್ರಿಯಗಳೆಂಬ ಶಾಖೋಪಶಾಖೆಗೆ ಹಾರಿ
ವಿಷಯಗಳೆಂಬ ಹಣ್ಣು ಫಲಗಳಂ ಗ್ರಹಿಸಿ
ಭವದತ್ತ ಮುಖಮಾಡಿ ಹೋಗುತ್ತಿದೆ ನೋಡಾ
ಈ ಮನವೆಂಬ ಮರ್ಕಟದ ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ
ಎನ್ನ ಉಳಿಸಿಕೊಳ್ಳಾ ಅಖಂಡೇಶ್ವರ'

ನಮ್ಮ ಮನಸ್ಸು ಮಂಗನಂತೆ ಅತಿಚಂಚಲ. ಒಂದು ವಿಷಯದಿಂದ ಮತ್ತೊಂದಕ್ಕೆ, ಒಂದು ಆಸೆಯಿಂದ ಮತ್ತೊಂದು ಆಸೆಗೆ, ಒಂದು ಚಿಂತೆಯಿಂದ ಮತ್ತೊಂದು ಚಿಂತೆಗೆ, ಒಂದು ಆಕರ್ಷಣೆಯಿಂದ ಇನ್ನೊಂದು ಆಕರ್ಷಣೆ ಎಡೆಗೆ ಜಿಗಿಯುತ್ತಲೇ ಇರುತ್ತದೆ. ಅದಕ್ಕೆ ನೆಮ್ಮದಿ ಇಲ್ಲವೇ ಇಲ್ಲ. ಅದು ಸುಮ್ಮನೆ ಕೂರುವುದಿಲ್ಲ. ನಮ್ಮ ಮನಸ್ಸು ಸುಖದಿಂದ ಹಿಗ್ಗುತ್ತದೆ. ದುಃಖದಿಂದ ಕುಗ್ಗುತ್ತದೆ. ಸಿಟ್ಟುಕೋಪಗಳಿಂದ ಉರಿಯುತ್ತದೆ. ಭಯದಿಂದ ನಡುಗುತ್ತದೆ. ಮತ್ಸರದಿಂದ ಕುದಿಯುತ್ತದೆ. ನಿರಾಶೆ, ಜಿಗುಪ್ಪೆಗಳಿಂದ ಕಂಗಾಲಾಗುತ್ತದೆ. ಇರುವುದಕ್ಕಿಂತ ಇಲ್ಲದಿರುವುದರೆಡೆಗೆ ತುಡಿಯುತ್ತಿರುತ್ತದೆ. ಅದಕ್ಕೆ ತೃಪ್ತಿ ಇಲ್ಲ. ಸಮಾಧಾನವಿಲ್ಲ. ಪ್ರತಿಕ್ಷಣ ಏನಾದರೊಂದನ್ನು ಬೇಡುತ್ತಲೇ ಇರುತ್ತದೆ. ಅದರ ಬೇಕುಗಳ ಪಟ್ಟಿ ಬಹುದೊಡ್ಡದು. ಬಯಸಿದ್ದು ದೊರಕಿದಾಗ, ಸಾಕು ಎಂದು ಹೇಳದೇ, ಇನ್ನಷ್ಟುಬೇಕು ಎನ್ನುತ್ತದೆ. ಇತರರಿಗೆ ನೋವು ಸೋಲು, ನಿರಾಶೆಗಳಿಂದ ಕಂಗೆಡುತ್ತದೆ. ತಾನೂ ರೋಗಗ್ರಸ್ತವಾಗಿ ಹೆಚ್ಚು ಸಿಕ್ಕಿದೆ ನನಗೆ ಕಡಿಮೆ ಎಂದು ಖಿನ್ನವಾಗುತ್ತದೆ. ಉಂಟಾದ ಕಷ್ಟನಷ್ಟ ದೇಹವನ್ನೂ ರೋಗಗ್ರಸ್ತವನ್ನಾಗಿ ಮಾಡುತ್ತದೆ. ಏನಿದೀ ಮನಸ್ಸು, ಅದನ್ನು


ಖಿನ್ನತೆ: ಬನ್ನಿ ನಿವಾರಿಸೋಣ / 45