ಈ ಪುಟವನ್ನು ಪ್ರಕಟಿಸಲಾಗಿದೆ

ಲೇಖಕನ ಮಾತು

ಖಿನ್ನತೆಯಿಂದ ಬಳಲದ ವ್ಯಕ್ತಿ ಇಲ್ಲ. ಮಕ್ಕಳಿಂದ ಹಿಡಿದು ಮುದುಕರವರೆಗೆ, ಉಳ್ಳವರಿಂದ ಹಿಡಿದು ಏನೂ ಇಲ್ಲದವರಿಗೆ, ಸ್ತ್ರೀ ಪುರುಷರಿಗೆ, ಯಾವುದೇ ಕಷ್ಟ ಕಾರ್ಪಣ್ಯ ಬಂದಾಗ ಅಥವಾ ಯಾವ ಕಾರಣವೂ ಇಲ್ಲದೆ ಖಿನ್ನತೆ ಬರಬಹುದು.

ಖಿನ್ನತೆ ವ್ಯಕ್ತಿಯ ದೈಹಿಕ-ಮಾನಸಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಅವನ/ ಅವಳ ದೈನಂದಿನ ಚಟುವಟಿಕೆಗಳಿಗೆ, ಜಾಣ್ಮೆ, ಪ್ರತಿಭಾ ಪ್ರದರ್ಶನಕ್ಕೆ ಅಡ್ಡಗಾಲನ್ನು ಹಾಕುತ್ತದೆ. ಖಿನ್ನತೆಯಿಂದಾಗಿ ಹೀರೋ ಆಗಿದ್ದ ವ್ಯಕ್ತಿ ಜೀರೋ ಆಗಿಬಿಡುತ್ತಾನೆ.

ಅನುವಂಶೀಯತೆ, ಬಾಲ್ಯದ-ಆನಂತರದ ಜೀವನದ ಕಹಿ- ಅನುಭವಗಳು, ಪ್ರೀತಿ ವಾತ್ಸಲ್ಯದ ಕೊರತೆ, ಆಸರೆ-ಸಹಾನುಭೂತಿಯ ಅಭಾವ, ಮಿದುಳಿನಲ್ಲಿ ರಾಸಾಯನಿಕ ಏರುಪೇರು, ಅನಾರೋಗ್ಯ ಮತ್ತು ಅಹಿತಕರ ಪರಿಸರ ಎಲ್ಲವೂ ಖಿನ್ನತೆ ಬರಲು ಕಾರಣವಾಗುತ್ತವೆ.

ಖಿನ್ನತೆಗೆ ಚಿಕಿತ್ಸೆಯೂ ಇದೆ. ಅದು ಗುಣವಾಗುವಂತಹ ಕಾಯಿಲೆ. ಖಿನ್ನತೆ ಬರದಂತೆ ತಡೆಗಟ್ಟಲೂಬಹುದು.

2017-18 ಖಿನ್ನತೆಯ ನಿವಾರಣೆಯ ವರ್ಷ. ಬನ್ನಿ ಖಿನ್ನತೆಯನ್ನು ನಿಭಾಯಿಸೋಣ, ನಿವಾರಿಸೋಣ.

ಈ ಕಿರುಪುಸ್ತಕವನ್ನು ಪ್ರಕಟಿಸಿ, ಸಾಹಿತ್ಯ ದಾಸೋಹ ಮಾಡಿರುವ ಶ್ರೀ ಎಸ್.ಎಸ್. ಹಿರೇಮಠ ದಂಪತಿಗಳಿಗೆ ಧನ್ಯವಾದಗಳನ್ನು ಹೇಳೋಣ.

ಬೆಂಗಳೂರು

ಡಾ. ಸಿ. ಆರ್. ಚಂದ್ರಶೇಖರ್

ಏಪ್ರಿಲ್ 2017

ಖಿನ್ನತೆ: ಬನ್ನಿ ನಿವಾರಿಸೋಣ / 5