ಭವತೀ ಕಾತ್ಯಾಯನೀ/೩೮ನೆಯ ಗ್ರಂಥ/೨ ನೆಯ ಪ್ರಕರಣ

10

ಸಮಾಜದ ವಿಚಾರದ, ಹಾಗು ಆಚಾರದ ಅಳವಿನೊಳಗೆ ಬಾರದ ಗಹನವಾದ ವೇದಾಂ ತವಿಷಯದ ಚರ್ಚೆಯನ್ನು ಸುಮ್ಮನೆ ಬರೆಯುತ್ತ ಹೋಗಿ, ಜನರನ್ನು ಬೇಸರಗೊಳಿ ಸುವದು ನಮ್ಮ ಕೆಲಸವಲ್ಲ. ವೇದಾಂತಶ್ರವಣಕ್ಕೆ ಅನಧಿಕಾರಿಯಾದ್ದರಿಂದ ತಮ್ಮ ಪ್ರಿಯಪತ್ನಿಗೂ ಆ ವಿಷಯವನ್ನು ತಾವಾಗಿ ಉಪದೇಶಿಸುವ ಗೊಡವಿಗೆ ಭಗವಾನ್ ಯಾ ಜ್ಞವಲ್ಕ್ಯರೇ ಹೋಗದಿರುವಾಗ, ವೇದಾಂತದ ಅನುಭವವಿಲ್ಲದ ನಮ್ಮಂಥ ಪಾಮರರ ಪಾಡೇನು ? ಮಹಾತ್ಮರಾದ ಯಾಜ್ಞವಲ್ಕ್ಯರಿಗೆ ಕಾತ್ಯಾಯನೀ, ಮೈತ್ರೇಯಿ ಎಂಬ ಇಬ್ಬರು ಹೆಂಡಿರು. ಅವರಲ್ಲಿ ಮುಖ್ಯವಾಗಿ ಸದ್ಗುಣಸಂಪನ್ನೆಯೂ, ಕರ್ತವ್ಯದಕ್ಷಳೂ, ಪತಿಭಕ್ತಿಪರಾಯಣಳೂ, ಪುತ್ರವತ್ಸಲಳೂ ಮೇಲೆ ಯಾಜ್ಞವಲ್ಕ್ಯಪಾಣಿಗ್ರಹಣದಿಂದ ಆತ್ಮನಿಷ್ಠಳೂ ಆದ ಭಗವತೀ ಕಾತ್ಯಾಯನಿಯಂಥ ಭಗಿನೀವರ್ಗವೂ, ಮಾತೃವರ್ಗವೂ ನಮ್ಮ ಕನ್ನಡಸಮಾಜದಲ್ಲಿ ಉಂಟಾಗುವದು ಹಿತಕರವೆಂದು ನಮ್ಮ ಭಾವನೆಯಿರುವದ ರಿಂದ, ನಾವು ಈ ಪುಸ್ತಕಕ್ಕೆ ಭಗವತೀಕಾತ್ಯಾಯನೀಯೆಂದು ಹೆಸರಿಟ್ಟರುವೆವು; ಮತ್ತು ಸೀತಾ, ದ್ರೌಪದೀ ಮೊದಲಾದ ಪೌರಾಣಿಕಕಾಲದ ಸ್ತ್ರೀಯರ ಸಂಗ್ತಿಯಲ್ಲಿ ಕಣ್ಣು ಮು- ಚ್ಚಿಕೊಂಡು ಕುಳ್ಳಿರಿಸಬಹುದಾಗಿದ್ದ ಆ ಮಹಾತ್ಮಳ ಅನುಕರಣಮಾಡಬೇಕೆಂದು ಬುದ್ದಿ ಪೂರ್ವಕವಾಗಿ ನಾವು ನಮ್ಮ ಮಾತೃಭಗಿನೀವರ್ಗವನ್ನು ಪ್ರಾರ್ಥಿಸುವೆವು. ಭಗವತೀ- ಕಾತ್ಯಾಯನಿಯರಂಥ ಕರ್ತಾರರು ಲೋಕಕ್ಕೆ ಅನುಕರಣೀಯರೆಂತಲೂ, ಭಗವತೀ- ಮೈತ್ರೇಯಿಯರಂಥ ಬ್ರಹ್ಮವಾದಿಗಳು ಲೋಕಕ್ಕೆ ಪೂಜ್ಯರೆಂತಲೂ ತಿಳಿಯತಕ್ಕದ್ದು. ಬ್ರಾಹ್ಮಣರು ಪುಣ್ಯಾಹವಾಚನ ಕರ್ಮದಲ್ಲಿ "ಅರುಂಧತೀಪುರೋಗಾ ಏಕಪತ್ನ್ಯಃಪ್ರೀಯಂ ತಾಂ” ಎಂದು ಉಚ್ಚರಿಸುವದರ ಸಾಲಿನಲ್ಲಿಯೇ "ಭಗವತೀಕಾತ್ಯಾಯನೀ ಪ್ರೀಯತಾಂ” ಎಂದು ಉಚ್ಚರಿಸುವದರ ಮರ್ಮವನ್ನು ವಾಚಕರು ಅವಶ್ಯವಾಗಿ ವಿಚಾರಿಸತಕ್ಕದ್ದು ಇರಲಿ. ಇನ್ನು ಪ್ರಕೃತವಿಷಯವನ್ನು ಕೈಕೊಳ್ಳೋಣ.

ಪ್ರಾತಃಕಾಲದ ಸುಸಮಯವು. ಜನಕಮಹಾರಾಜನ ರಾಜಧಾನಿಯಾದ ಜನಕ

ಪುರದಬಳಿಯ ಗಹನಾರಣ್ಯ - ಅದೇ ಸೂರ್ಯೋದಯವಾಗಿದೆ. ಮಂದಮಾರುತನು ಸುಳ್ಳನೆ ಸುಳಿದು ಗಿಡಬಳ್ಳಿಗಳ ಚಿಗುರುಗಳನ್ನು ಅಲ್ಲಾಡಿಸುತ್ತ ಸದ್ದಿಲ್ಲದೆ ಸಂಚರಿಸತೊಡ ಗಿದಾನೆ. ಭಗವಾನ್ ಶ್ರೀ ಸೂರ್ಯನಾರಾಯಣನ ಸ್ವಾಗತಾರ್ಥವಾಗಿ ಪಕ್ಷಿಗಣವು ಮಂಜುಲಸ್ವರದಿಂದ ಗಾನಮಾಡತೊಡಗಿದೆ. ಚಿಗರೆಗಳು ಚಂಡಿನಂತೆ ಟಣ್ಣ ಟಣ್ಣನೆ ಜಿಗಿ ಯುತ್ತ ನಡೆದವೆ. ಇಂಥ ಸಮಯದಲ್ಲಿ ಮೂವರು ದಾರಿಕಾರರು ದಾರಿಯಹಿಡಿದು ಜನಕ ಪುರದ ಕಡೆಗೆ ಸಾಗಿದ್ದರು. ಅವರು ಮೂವರೂ ಕಸುವಿನ ಮೈಕಟ್ಟಿನವರಾಗಿದ್ದು, ನಿಲುವಿಕೆಯಲ್ಲಿ ಎತ್ತರವಾಗಿದ್ದರು . ಒಟ್ಟಿನಲ್ಲಿ ಅವರ ಆಕೃತಿಗಳು ಭವ್ಯವಾಗಿದ್ದವು. ಅವರಲ್ಲಿ ಇಬ್ಬರು ಉಣ್ಣಿಯ ಅಂಗಿಗಳನ್ನು ಹಾಕಿಕೊಂಡು, ಉದ್ದವಾದ ತಮ್ಮ ಚಂಡಿಕೆ ಗಳಿಗೆ ಗಂಟುಹಾಕಿದ್ದರು. ಅವರಿಬ್ಬರಿಗೂ ಗಡ್ಡಗಳಿದ್ದವು. ಅವರು ಹೇಳಿಕೊಳ್ಳು ವಂಥ ಸುಂದರರಾಗಿರದಿದ್ದರೂ, ಅವರ ಮುಖಮುದ್ರೆಯಲ್ಲಿ ಶೌರ್ಯದ ಕಳೆಯು ಉಕ್ಕು

ತ್ತಿತ್ತು ಅವರ ಬೆನ್ನಿಗೆ ಬತ್ತಳಿಕೆಯಿದ್ದು, ಕೆಳಗೆ ಕಾಲತನಕ ಇಳಿಬಿದ್ದಂಥ ಧನುಸ್ಸನ್ನು

11

ಅವರು ಹೆಗಲಿಗೆ ಹಾಕಿದ್ದರು. ಅವರ ಟೊಂಕದಲ್ಲಿ ಖಡ್ಗವು ಅಲೆದಾಡುತ್ತಿತ್ತು. ಇವರಿಬ್ಬರಿಂದ ತೀರ ಭಿನ್ನವಾದ ವೇಷವು ಮೂರನೆಯವನದಿತ್ತು. ಅವನು ಚಿಗರಿಯ ಚರ್ಮವನ್ನು ಹೊದ್ದಿದ್ದನು. ಆತನ ತಲೆಗೂದಲುಗಳ ರಚನೆಯು ಮೇಲಿನ ಇಬ್ಬರು ಗೃಹಸ್ಥರ ತಲೆಗೂದಲುಗಳ ರಚನೆಯಂತೆಯೇ ಇತ್ತು. ಮೈಮೇಲೆ ಭಸ್ಮದ ಪಟ್ಟಿ ಗಳಿದ್ದು, ಕೈಯಲ್ಲಿ ಉದ್ದವಾದದೊಂದು ಕೋಲು ಇತ್ತು. ಆತನ ಉಡಿಗೆ-ತೊಡಿಗೆಗಳು ತೀರ ಸಾದಾತರದವಾಗಿದ್ದರೂ, ಸುವ್ಯವಸ್ಥಿತವಾಗಿದ್ದವು. ಆತನ ಮುಖಮುದ್ರೆಯು ಗಂಭೀರವಾಗಿದ್ದು, ಅದರಲ್ಲಿ ನಿರ್ಧಾರದ ಚಿಹ್ನವು ಒಡೆದು ಕಾಣುತ್ತಿತ್ತು. ಆತನ ಮಾತುಗಳು ಅತ್ಯಂತ ಪವಿತ್ರವಾದವೂ, ಪರಿಶುದ್ಧವಾದವೂಇದ್ದವು. ಈ ಎಲ್ಲ ಚಿಹ್ನ ಗಳಿಂದ ಆತನು ಬ್ರಾಹ್ಮಣನಿದ್ದನೆಂಬದನ್ನೂ, ಉಳಿದವರಿಬ್ಬರು ಕ್ಷತ್ರಿಯರಿದ್ದರೆಂಬದನ್ನೂ ವಾಚಕರಿಗೆ ನಾವು ತಿಳಿಸುವ ಅವಶ್ಯವಿಲ್ಲ. ಆ ತೇಜಃಪುಂಜನಾದ ಬ್ರಾಹ್ಮಣನು ಜನಕ ರಾಜನ ವಿಶ್ವಾಸದ ಶ್ರೇಷ್ಠ ಮಂತ್ರಿಯಾದ ಮಿತ್ರನೆಂಬವನಾಗಿದ್ದನು. ಉಳಿದ ಕ್ಷತ್ರಿಯ ವೀರರಿಬ್ಬರನ್ನು ಬೆಂಗಾವಲಾಗಿ ನಿಯಮಿಸಿ, ಜನಕರಾಜನು ಕಾರ್ಯನಿಮಿತ್ತವಾಗಿ ಆ ತನ್ನ ಮಂತ್ರಿಶ್ರೇಷ್ಠನನ್ನು ನೆರೆಯಗ್ರಾಮಕ್ಕೆ ಕಳಿಸಿದ್ದನು. ಆ ಕಾರ್ಯವನ್ನು ಸಾಧಿಸಿ ಕೊಂಡು ಈ ಮೂವರು ಮೇಲೆ ಹೇಳಿದಂತೆ ತಮ್ಮ ರಾಜಧಾನಿಯಾದ ಜನಕಪುರಿಯ ಕಡೆಗೆ ಸಾಗಿದ್ದರು. ಜನಕರಾಜನು ಅದೇ ನೆರಿಸಿದ್ದಮಹಾಸಭೆಯಸುದ್ಧಿಯನ್ನೂ ,ಯಾಜ್ಞ- ವಲ್ಕ್ಯರ ಪ್ರಭಾವವನ್ನೂ ಕುರಿತು ಅವರು ಮಾತಾಡುತ್ತಲಿದ್ದರು. ಮಿತ್ರನು ಯಾಜ್ಞವ ಲ್ಕ್ಯರ ಸ್ನೇಹಿತನಾಗಿದ್ದು, ಘನಪಂಡಿತನಾಗಿದ್ದನು. ಯಾಜ್ಞವಲ್ಕ್ಯರು ಶ್ರೀ ಸೂರ್ಯ ನಾರಾಯಣನ ಉಪದೇಶರೂಪಪ್ರಸಾದದಿಂದ ಹೊಸದಾಗಿ ರಚಿಸುತ್ತಿದ್ದ ಶುಕ್ಲಯಜು ರ್ವೇದ-ವ್ಯವಹಾರದಲ್ಲಿ ಮಿತ್ರನ ಅಂಗವು ಇತ್ತು. ಈ ಕಾರ್ಯಕ್ಕಾಗಿ ಹಲವು ಋಷಿಗಳು ಯಾಜ ವಲ್ಕ್ಯರ ಗೃಹದಲ್ಲಿಕೂಡುತ್ತಿದ್ದರು. ಈ ಮಿತ್ರನಿಗೆ ಮೈತ್ರೇಯಿಯೆಂಬ ಒಬ್ಬ ಅವಿ ವಾಹಿತಳಾದಮಗಳಿದ್ದಳು. ಆಕೆಗೆ ಈಗ ಹದಿನೆಂಟುವರ್ಷದಪ್ರಾಯವಿತ್ತು. ಮೈತ್ರೇಯಿಯ ಸದುಣಗಳ, ಹಾಗು ಲೋಕೋತ್ತರ ಸೌಂದರ್ಯದ ಕೀರ್ತಿಯು ಎಲ್ಲಕಡೆಯಲ್ಲಿಯೂ ಪಸರಿಸಿತ್ತು. ದೊಡ್ಡ ದೊಡ್ಡ ವಿದ್ವಾಂಸರಾದ ತರುಣಬ್ರಾಹ್ಮಣರು ಮೈತ್ರೇಯಿಯ ಪಾಣಿ ಗ್ರಹಣದ ಸುಯೋಗವು ತಮ್ಮ ಪಾಲಿಗೆ ಇರಬಹುದೇ, ಎಂದು ಎದುರು ನೋಡು ತಿದರು. ಆಗಿನಕಾಲದಲ್ಲಿ ಸ್ತ್ರೀಯರು ಆಜನ್ಮ ಬ್ರಹ್ಮಚರ್ಯದಿಂದ ಕಾಲಹರಣಮಾ ಡುವ ಪ್ರಚಾರವಿತ್ತು. ಗಾರ್ಗಿಯು ಇದಕ್ಕೆ ಪ್ರಸಿದ್ಧವಾದ ಉದಾಹರಣವಾಗಿದ್ದಳು. ಗಾರ್ಗಿಯು ಸಾಮಾನ್ಯಸ್ತ್ರೀಯಲ್ಲ, ಯಾಜ್ಞವಲ್ಕ್ಯರೊಡನೆ ಮಹಾಸಭೆಯಲ್ಲಿ ವಾದ ಮಾಡಿದವರಲ್ಲಿ ಆಕೆಯು ಅಗ್ರಗಣ್ಯಳಾಗಿದ್ದಳು. ಗಾರ್ಗಿಯು ಮೈತ್ರೇಯಿಯ ಅಬ ಚಿಯು, ಅಂದರೆ ಮಿತ್ರನ ಹೆಂಡತಿಯ ತಂಗಿಯು. ಮೈತ್ರೇಯಿಯ ಮೇಲೆ ಗಾರ್ಗಿಯ ಪ್ರೀತಿಯು ಬಹಳ. ಅಬಚಿಯ ಸಹವಾಸದಿಂದ ಮೈತ್ರೇಯಿಯ ವಿಚಾರಗಳು ಪರಿ ಪಕ್ವವಾಗತೊಡಗಿದ್ದವು. ಆಕೆಯ ಒಲವು ಅಧ್ಯಾತ್ಮವಿಷಯದಕಡೆಗೆ ವಿಶೇಷವಾಗಿತ್ತು.

ಆದ್ದರಿಂದ ಲಗ್ನ ಮಾಡಿಕೊಳ್ಳುವದರಕಡೆಗೆ ಆಕೆಯಲಕ್ಷವು ವಿಶೇಷವಾಗಿದ್ದಿಲ್ಲ. ತನ್ನ ಅಬಚಿ

12

ಯಂತೆ ಮೈತ್ರೇಯಿಯು ಬ್ರಹ್ಮಚರ್ಯದಿಂದ ಕಾಲಹರಣಮಾಡುವಳೆಂದು ಜನರು ಅನ್ನುತ್ತಿದರು. ಹೀಗೆ ಸದುಣಮಂಡಿತಳೂ, ಲೋಕೋತ್ತರ ಸುಂದರಿಯಾ ಆದ ಮಗಳಿಗೆ ತಕ್ಕವರನನ್ನು ಆರಿಸುವವಿಷಯದಲ್ಲಿ ಮಿತ್ರನು ಯಾವಾಗಲೂ ಚಿಂತಿಸುತ್ತಿದನು. ಮಗಳು ಕಣ್ಣಿಗೆ ಬಿದಾಗೆಲ್ಲ, ಮತ್ತು ಆಕೆಯ ನೆನಪುಆದಾಗೆಲ್ಲ ಮಿತ್ರನ ಮನಸ್ಸು ವಗ್ರವಾಗುತ್ತಿತು. ಹೆಣ್ಣು ಹಡೆದವರ ಸಿತಿಯು ಹೀಗೆಯೇ ಸರಿ!

ಮೇಲೆ ಹೇಳಿದಂತೆ ಮಿತ್ರನುಇಬ್ಬರು ಕ್ಷತ್ರಿಯವೀರರೊಡನೆ ಜನಕಪುರದಕಡೆಗೆ ಹೊರ

ಟದ್ದಾಗ, ಆತನಿಗೆ ಮಗಳ ನೆನಪಾಗಿ ಆತನ ಮನಸ್ಸು ವ್ಯಗ್ರವಾಗಿತ್ತು. ಮಾತಿನಕಡೆಗೆ ಆತನ ಲಕ್ಷವಿದ್ದಿಲ್ಲ. ಈ ಸಂಗತಿಯು ಆ ಕ್ಷತ್ರಿಯವೀರರಿಗೆ ಗೊತ್ತಾಗಿತ್ತು. ತಮ್ಮ ಮಾತಿನಕಡೆಗೆ ಮಿತ್ರನ ಲಕ್ಷವಿಲ್ಲೆಂಬದನ್ನೂ, ಮಹಾಸಭೆಯಾದಂದಿನಿಂದ ಇತ್ತಿತ್ತಲಾಗಿ ಮಿತ್ರನು ಬಹುತರ ಯಾವಾಗಲೂ ಚಿಂತಾಮಗ್ನನಾಗಿರುವನೆಂಬುದನ್ನೂ ಅವರು ಅರಿತಿದ್ದರು; ಮಿತ್ರ ನಂಥ ಜ್ಞಾನಧನನ ಚಿಂತೆಯಕಾರಣವು ಗೊತ್ತಾಗದ್ದರಿಂದ ಅವನ್ನು ಅರಿತುಕೊಳ್ಳಲಿಕ್ಕೆ ಅವರು ಆತುರಪಡುತ್ತಿದ್ದರು; ಆದರೆ ಒಮ್ಮೆಲೆ ಮಿತ್ರನನ್ನು ಕೇಳುವ ಧೈರ್ಯವು ಅವರಿಗೆ ಆಗಿದ್ದಿಲ್ಲ. ಆ ಕ್ಷತ್ರಿಯವೀರರಿಬ್ಬರೂ ಮಿತ್ರನ ಆದರಕ್ಕೆ ಪಾತ್ರರಾಗಿದ್ದರೂ, ಯಾವದೊಂದು ಮಾತನ್ನು ಕುರಿತು ಮಿತ್ರನನ್ನು ತಟ್ಟನೆ ಕೇಳಲಿಕ್ಕೆ ಅವರು ಆತಂಕಪಡುತ್ತಿದ್ದರು. ಆ ಕ್ಷತ್ರಿಯವೀರರಿಬ್ಬರಲ್ಲಿ ಯಜ್ಞದತ್ತನೆಂಬುವನು ಮಿತ್ರ, ನನ್ನು ಕುರಿತು ವಿನಯದಿಂದ -- "ಭಗವನ್, ತಾವು ಚಿಂತಾತುರರಾಗಿರುವಂತೆ ತೋರುತ್ತದೆ. ಮಹಾಸಭೆಯಾದಂದಿನಿಂದ ನಿಮ್ಮ ಮನಸ್ಸಿಗೆ ಸ್ಪಷ್ಟವಿಲ್ಲ. ಮಹಾಸಭೆಗೂ ನಿಮ್ಮ ಚಿಂತೆಗೂ ಸಂಬಂಧವೇನೋ ತಿಳಿಯದಾಗಿದೆ. ಚಿಂತೆಯಕಾರಣವು ನಾನು ಕೇಳ ತಕ್ಕದ್ದಾಗಿದ್ದರೆ ದಯಮಾಡಿ ಹೇಳೋಣಾಗಬೇಕು, ಆಜ್ಞಾಧಾರಕರಾದ ನಮ್ಮಲ್ಲಿ ಪರಕೀಯತ್ವವನ್ನು ವಹಿಸಬಾರದು” ಎಂದು ಕೇಳಿಕೊಂಡನು. ಅದಕ್ಕೆ ಮಿತ್ರನು --

"ವತ್ಸಾ, ನೀನೂ, ವಿಷ್ಣುಮಿತ್ರನೂ ನನಗೆ ಹೊರಗಿನವರಲ್ಲ. ನಿಮ್ಮ ಮುಂದೆ ಹೇಳಲಿಕ್ಕೆ ಯಾವ ಬಗೆಯ ಸಂಕೋಚವೂ ನನಗೆ ಆಗುವಹಾಗಿಲ್ಲ. ನನ್ನ ಚಿಂತೆಯಕಾರಣವು ನನ್ನ ಮಗಳು ಆಗಿರುವಳು. ಆಕೆಯ ಲಗ್ನದ ಚಿಂತೆಯು ಯಾವಾಗಲೂ ನನ್ನನ್ನು ಬಾಧಿಸುತ್ತದೆ. ಅದೊಂದು ಕಾರ್ಯವು ಆದರೆ ನನ್ನ ಮನಸ್ಸಿಗೆ ಸಮಾಧಾನವಾಗುವದು. ಯಜ್ಞದತ್ತಾ, ಏನುಮಾಡುವದು ಹೇಳು. ಬ್ರಹ್ಮಸಂಕಲ್ಪವಿದ್ದಂತೆ ಆಗುತ್ತದೆಂದು ಬಾಯಿಂದ ಯಾರಾದರೂ ಹೇಳಬಹುದು; ಆದರೆ ಹಾಗೆಹೇಳುವದು ಕೇವಲ ಪ್ರಯತ್ನಾಂತದಲ್ಲಿ ಸಮಾಧಾನಪಡಲಿಕ್ಕೆ ತಕ್ಕಮಾತಲ್ಲದೆ, ಪ್ರಯತ್ನ ಮಾಡದೆ ಆ ಮಾತನ್ನು ನಂಬಿ ಸುಮ್ಮನೆ ಕುಳಿತುಕೊಳ್ಳತಕ್ಕದಲ್ಲ. ಯತ್ನಮಾಡುವದು ನಮ್ಮ ಕರ್ತವ್ಯವಾದ್ದರಿಂದ ಯೋಗ್ಯವರಪ್ರಾಪ್ತಿಗಾಗಿ ಯತ್ನಮಾಡಲೇಬೇಕು. ಹಾಗೆ ನಾನು ಈವರೆಗೆ ಯತ್ನಿಸಿದ್ದರೂ, ಆಯತ್ನಕ್ಕೆ ಸಿದ್ದಿಯು ದೊರೆತಿರುವದಿಲ್ಲ. ಮೈತ್ರೇಯಿಯ ಶಿಕ್ಷಣದ ವಿಷಯವಾಗಿ ನಾನು ದುರ್ಲಕ್ಷಮಾಡಿರುವದಿಲ್ಲ. ಗಾರ್ಗಿಯಂಥ ಯೋಗ್ಯತಾಸಂಪನ್ನಳಾದ ಸ್ತ್ರೀಯಸಹವಾಸವೂ ಮೈತ್ರೇಯಿಗೆ ಇರುತ್ತದೆ. ಆದ್ದರಿಂದ ಆ ನನ್ನಮಗಳು ಕೇವಲ ವಿಷಯೋಪ

15

ಭೋಗದ ದೃಷ್ಟಿಯಿಂದ ಲಗ್ನ ಮಾಡಿಕೊಳ್ಳಬೇಕೆಂದು ಇಚ್ಛಿಸುವದಿಲ್ಲ. ಕೇವಲ ಶ್ರೀಮಂತನಾದ ವರನು ಆಕೆಗೆ ಸೇರನು. ಆಕೆಯ ವಿದ್ಯೆಯೇ ಆಕೆಯ ಲಗ್ನಕ್ಕೆ ವಿಘ್ನವಾದ ತಾಗಿದೆ. ಮೊನ್ನೆ ಮಹಾಸಭೆಯಲ್ಲಿ ಯಾಜ್ಞವಲ್ಕರ ವಿದ್ಯಾಪ್ರಭಾವವನ್ನು ನೋಡಿ ಮೈತ್ರೇಯಿಯು--" ( ಆದರೆ ಯಾಜ್ಞವಲ್ಯರನ್ನು ಮದುವೆಯಾಗಬೇಕು, ಇಲ್ಲದಿದ್ದರೆ ತನ, ಅಬಚಿಯಾದ ಗಾರ್ಗಿಯಂತೆ ಆಜನ್ಮ ಬ್ರಮ್ಮಚರ್ಯದಿಂದ ಇರಬೇಕು, ” ಎಂದು ನಿಶ್ಚಯಸಿರುವಂತೆ ಕೇಳುತ್ತೇನೆ; ಆದ್ದರಿಂದ ನನಗೆ ನೀಗಲಾರದ ಚಿಂತೆಯು ಪ್ರಾಪ್ತ ವಾದಂತಾಗಿರುತ್ತದೆ .

ಮಿತ್ರನ ಈ ಮಾತುಗಳನ್ನು ಕೇಳಿ ಯಜ್ಞದತ್ತನು- ಭಗವನ್ , ಹದಿನೆಂಟ

ನೆಯ ವರ್ಷದ ವಯಸ್ಸಿನಲ್ಲಿಯೇ ಆಧ್ಯಾತ್ಮವಿಷಯದ ಕಡೆಗೆ ಮನಸ್ಸು ತಿರುಗಿ , ಯಾಜ್ಞವಲ್ಕರಂಥ ಬ್ರಹ್ಮನಿಷ್ಟರನ್ನು ಲಗ್ನವಾಗಲು ಬಯಸುವದು ನಿಮ್ಮ ಮಗ ಳಿಗೆ ಭೂಷಣವೇ ಸರಿ ನಿಮ್ಮ ಮಗಳಲ್ಲಿಯಲ್ಲದೆ ಇಂಥ ಘನತರವಾದ ಯೋಗ್ಯ, ತೆಯು ಅನರಲ್ಲಿ ಹಾಗೆ ಬರಬೇಕು ? ಕೇವಲ ದ್ರವಕ್ಕೆ, ರೂಪಕೆ, ವಿದ್ಯೆಗೆ, ಆಡಂಬರಕ್ಕೆ ಮರುಳಾಗಿ ಲಗ್ನವಾಗುವದು ಸಾಮಾನ್ಯವಧುಗಳ ಮಾತಾಯಿತು; ಆದರೆ ತಮ್ಮಂಥವರ ಮಗಳು ಯಾಜ್ಞವಲ್ಕರಂಥ ಬ್ರಹ್ಮನಿಷ್ಠರನ್ನು ವರಿಸಲಿಚ್ಛಿಸುವದು ಸಂತೋಷದ ಸಂಗತಿಯೇ ಸರಿ! ಯಾಜ್ಞವಲ್ಯರಿಗಾದರೂ ನಿಮ್ಮ ಮಗಳನ್ನು ಲಗ, ವಾಗುವದು ಬಹುಮಾನದ ಲಕ್ಷಣವೇ ಆಗಿರುವದು! ಮೈತ್ರೇಯಿಯಂಥ ತಮಗೆ ಅನು ರೂಪವಾದ ವಧುವು , ಹುಡುಕುತ್ತ ಹೋದರೂ ಯಾಜ್ಞವಲ್ಯರಿಗೆ ದೊರಕಲಿಕ್ಕಿಲ್ಲ. ಆದ್ದರಿಂದ ಯಾಜ್ಞವಲರೂ ಸಂತೋಷದಿಂದ ಮೈಯಿಯ ಪಾಣಿಗ್ರಹಣ ಮಾಡ ಬಹುದು ; ಅಂದಬಳಿಕ ತಾವು ಚಿಂತಿಸುವದೇಕೆ?' ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಮಿತ್ರನು--LC ವತ್ಸಾ , ಯಾಜ್ಞವಲ್ಯರ ಸಂಸಾರಸುಖದ ಕಲ್ಪನೆಯು ನಿನಗೆ ಇರುವ ದಿಲ್ಲಾದ್ದರಿಂದ, ಅವರು ಸಹಜವಾಗಿ ನನ್ನ ಮಗಳನ್ನು ಲಗ್ನವಾಗಬಹುದೆಂದು ನೀನು ತಿಳಿಯು; ಆದರೆ ಹಾಗೆ ತಿಳಿಯುವದು ಸರ್ವಥಾ ಯೋಗ್ಯವಲ್ಲ, ಯಾಜ್ಞವ ಲ್ಯರ ಲಗ್ನವಾಗಿರುವದೆಂಬದಿ ನಿನಗೆ ಗೊತ್ತಿರಬಹುದು , ನನ್ನ ಪ್ರಿಯಮಿತ

ನಾದ ಕಾತ್ಯನೆಂಬವನ ಮಗಳಾದ ಕಾತ್ಯಾಯನಿಯೊಡನೆ ಅವರ ಲಗ್ನವಾಗಿರುವದು. ಆ ತರುಣಿಯು ಬಹುತರ ಎಲ್ಲಬಗೆಯಿಂದಲೂ ಯಾಜ್ಞವಲ್ಕರಿಗೆ ಒಪ್ಪುವಂಥ ಹೆಂಡತಿ ಯಾಗಿರುತ್ತಾಳೆ. ಆಕೆಯು ಅತ್ಯಂತ ಸುಂದರಿಯು, ಗೃಹಕೃತ್ಯದಲ್ಲಿ ದಕಳು , ಸೌಮ್ಯ ಸ್ವಭಾವದವಳು , ಮಧುರಭಾಷಣವು ಆಕೆಯ ಹುಟ್ಟುಗುಣವಾಗಿರುವದು. ಒಮ್ಮೆ ಕಾತ್ಯಾಯನಿಯನ್ನು ನೋಡಿದವರ ಮನಸ್ಸಿನಲ್ಲಿ ಆ ಸದ್ದುಣಮಂಡಿತವಾದ ಪ್ರೇಮಲಮೂರ್ತಿಯು ಸ್ಥಿರಗೊಳ್ಳುವದು, ನಾನು ಯಾಜ್ಞವಲ್ಯರ ಮನೆಗೆ ಹೋದಾ ಗೆಲ್ಲ ಆ ಪತಿಭಕ್ತಿಪರಾಯಣಳು, ಪ್ರಮಪುರಸ್ಕೃರವಾದ ಮೃದುಹಾಸದಿಂದ ನನ್ನ, ಸಾ'ಗತಮಾಡುವಳು. ನನ್ನ ವಿಷಯವಾಗಿ ಆಕೆಯ ಅಂತಃಕರಣದಲ್ಲಿ ಅತ್ಯಂತ ಆದರ ಭಾವವು ವಾಸಿಸುತ್ತಿರುವದರಿಂದ ನನ್ನನ್ನು ನೋಡಿದಕೂಡಲೆ ಆಕೆಯ ನಗೆಮೊಗದಲ್ಲಿ

14

ಅತ್ಯಂತ ವಿನಯಭಾವವು ವ್ಯಕ್ತವಾಗುತ್ತದೆ. ಆ ಕಾಲದ- ಆ ದಿನ ಮೂರ್ತಿಯನ್ನು ನೋಡಿದಕೂಡಲೆ , ಸಾಕ್ಷಾತ್ ದೇವತೆಯೇ ಭೂತಳದಲ್ಲಿ ಅವತರಿಸಿರುವಂತೆ ನನಗೆ ಭಾಸ ನಾಗುತ್ತದೆ. ಇಂಥ ಸದ್ಗುಣಸಂಪನ್ನಳಾದ ಹೆಂಡತಿಯ ಮೇಲೆ ಯಾಜ್ಞವಲ್ಐಕರ ಅಕೃತ್ರಿಮಪ್ರೇಮವು ಎಷ್ಟಿರುತ್ತದೆಂಬದನ್ನು ನಾನು ಬಲ್ಲೆನು; ಆದ್ದರಿಂದ ಒಂದು ಪಕ್ಷ ಧಲ್ಲಿ ಯಾಜ್ಞವಲ್ಕ್ಯ ನಮ್ಮ ಮೈತ್ರೇಯಿಯನ್ನು ಲಗ್ನವಾಗಲಿಚ್ಛಿಸಿದರೊ ,ಅವರ ಸುಂದರಸಂಸಾರದಲ್ಲಿ ಮಣ್ಣುಗೂಡಿಸುವ ಎರಡನೆಯ ಲಗ್ನದ ಯೋಗವನ್ನು ನಾನು ಎಂದಿಗೂ ತರಲಿಚ್ಛಿಸುವದಿಲ್ಲ. ಅದರಲ್ಲಿ ನನ್ನ ಮಗಳು ತರುಣಿಯೂ, ಅನನುಭವಿಯ ಇರುವದರಿಂದ, ಆಕೆಯು ಅವರೊಡನೆ ಯಾವಾಗಲೂ ವಿವೇಕದಿಂದ ನಡೆದುಕೊಳ್ಳುವ ಳೆಂಬ ನಿಯಮವೂ ಇಲ್ಲ ! ಅಂದಬಳಿಕ ಯಾಜ್ಞವಲ್ಕರಿಗೆ ಇಲ್ಲದ ತೊಂದರೆಯನ್ನು ನಾನು ಯಾಕೆ ಉಂಟುಮಾಡಲಿ ?

ಮಿತ್ರನ ಈ ಮಾತುಗಳನ್ನು ಕೇಳಿ ಯಜ್ಞದತ್ತನಿಗೆ ಸ್ವಲ್ಪ ಸಂಶಯ ಉಂಟಾ,

ಯಿತು. ಆತನು ಮತ್ತೆ ಮಿತ್ರನನ್ನು ಕುರಿತು-"ಮುನಿಶ್ರೇಷ್ಠಾ, ಭಗವತೀಕಾತ್ಯಾಯನಿ ಯು ಪ್ರತ್ಯಕ್ಷ ದೇವತೆಯು ಅವತರಿಸಿದಂತೆ ಇರುವಳೆಂದು ನೀವು ಹೇಳುತ್ತಿರುವಾಗ, ಆಕೆ ಯು ಬಹುತರ ಯಾಜ್ಞವಲ್ಕರಿಗೆ ಒಪ್ಪುವಂಥ ಹೆಂಡತಿಯಾಗಿರುವಳೆಂದು ಹೇಳಿದ್ದರಿಂದ ನನಗೆ ಸಂಶಯ ಉಂಟಾಯಿತು. "ಬಹುತರ"ಎಂಬ ಶಬ್ದ ಪ್ರಯೋಗದಿಂದ ಕಾತ್ಯಾಯನಿ ಯಲ್ಲಿ ಏನೋ ಕೊರತೆಯಿದ್ದಂತೆ ತೋರುತ್ತದೆ; ಆದರೆ ಆ ಕೊರತೆಯು ಯಾವದು ?" ಎಂದು ಕೇಳಲು, ಮಿತ್ರನು _"ವತ್ಸಾ, ಕಾತ್ಯಾಯನಿಯ ಒಲವು ಆಧ್ಯಾತ್ಮವಿಷಯದ ಕಡೆಗೆ ವಿಶೇಷವಾಗಿ ಇಲ್ಲೆಂಬದೇ ಆ ಕೊರತೆಯು, ಆ ಕೊರತೆಯು ಕೇವಲ ಯಾಜ್ಯ ವಲ್ಕರ ದೃಷ್ಟಿಯಿಂದಲ್ಲದೆ, ಅನ್ಯರ ದೃಷ್ಟಿ ಯಿಂದ ಅಲ್ಲ. ಕಾತ್ಯಾಯನಿಯು ಪತಿಸೇವೆ, ಮಕ್ಕಳಆರೈಕೆ, ಬೇರೆ ಗೃಹಕೃತ್ಯಗಳು ಇವುಗಳಲ್ಲಿ ಯಾವಾಗಲೂ ತೊಡಗಿಹೋಗಿರುವದ ರಿಂದ, ಆಧ್ಯಾತ್ಮವಿಚಾರಕ್ಕೆ ಆಕೆಗೆ ಅವಸರವೇ ದೊರೆಯುವದಿಲ್ಲ. ಆಧ್ಯಾತ್ಮ ದೃಷ್ಟಿಯಿಂ ದ ಇದು ಕೆಲಮಟ್ಟಿಗೆ ಅನಿಷ್ಟವಾಗಿ ತೋರಿದರೂ, ಸುಂದರ ಸಂಸಾರದೃಷ್ಟಿಯಿಂದ ಇದು ಅತ್ಯಂತ ಇಷ್ಟವಾಗಿರುವದು,”ಅನ್ನಲು ಎಷ್ಟು ಮಿತ್ರನು-ಭಗವನ್, ನೀವು ಏನು ಹೇಳಿದರೂ, ಯಾಜ್ಞವಲ್ಕ್ಯರು ನಿಮ್ಮ ಮಗಳೊಡನೆ ಲಗ್ನವಾಗುವದಕ್ಕೆ ಈ ಕೊರ ತೆಯು ಆಸ್ಪದಕೊಡುತ್ತದೆಂದು ನಾನು ಹೇಳದೆ ಇರಲಾರೆನು; ಆದರೆ ಈ ಕೊರತೆಯನ್ನು ಪೂರ್ಣಮಾಡಿಕೊಳ್ಳುವದು ಬಿಡುವದು ಯಾಜ್ಞವಲ್ಕ್ಯರ ಕಡೆಗಿರುವದೆಂಬದು ನಿಜವು. ತಮ್ಮಂಥವರು ಅದಕ್ಕಾಗಿ ಪ್ರಯತ್ನ ಮಾಡುವದು, ಸ್ವಾರ್ಥವೆಂಬ ದೃಷ್ಟಿಯಿಂದ ಗೌಣವಾ ದದ್ದೇಸರಿ, ತಮ್ಮಂಥವರು ಅದಕ್ಕೆ ಮನಸ್ಸೊ ಮಾಡಲಾರಿರಿ,” ಎಂದು ನುಡಿಯುತ್ತಿರಲು, ಮಿತ್ರನ ಲಕ್ಷವು ಆ ಅರಣ್ಯದೊಳಗಿನ್ನದೊಂದು ದಿನ್ನೆಯ ಕಡೆಗೆ ಹೋಯಿತು. ಆತನು ಒಮ್ಮಿಂದೊಮ್ಮೆ ನಿಂತು ಆ ದಿನ್ನೆಯಕಡೆಗೆ ನೋಡಹತ್ತಿದನು. ಆತನ ದೃಷ್ಟಿಯು ಭಯ ರಸವಾಯಿತು. ಆ ಮೂವರು ದಟ್ಟವಾದ ಅರಣ್ಯದಲ್ಲಿ ಸಾಗಿದ್ದು, ಅವರು ಕ್ರಮಿಸು

ತಿದ್ದ ಕಾಲಧಾರಿಯು ಬಲುಕಿರಿದಾಗಿತ್ತು. ಮಾರ್ಗದ ಎಡ-ಬಲದಲ್ಲಿ ಗಗನಚುಂಬಿತ

15

ವೃಕ್ಷಗಳ ದಟ್ಟಣೆಯಿತ್ತು. ಮಿತ್ರನಿಗೆ ಆ ದಿನ್ನೆಯ ಮೇಲೆ, ಗಿಡಗಳಲ್ಲಿ ಮುಚ್ಚಿದಂತೆ ಆಗಿದ್ದ ಒಂದು ಮನುಷ್ಯಾಕೃತಿಯು ಕಾಣಿಸಿತು. -ಮುಂದಕ್ಕೆ ಸ್ವಲ್ಪ ಸಾಗಿಹೋಗಲು, ಯಾವನೋ ಒಬ್ಬ ತಪೋನಿಷ್ಠ ಮುನಿಯು ಧ್ಯಾನಸ್ಥನಾಗಿ ಕುಳಿತಿದ್ದು, ಒಂದು ಭಯಂಕ ರವಾದ ಹುಲಿಯು ಅವನ ಮೇಲೆ ಬೀಳುವದಕ್ಕೆ ಜಪ್ಪು ಹಾಕಿತ್ತು. ಇದನ್ನು ನೋಡಿ ಮಿತ್ರನು ಮುಂದಕ್ಕೆ ಸಾಗುತ್ತಿರಲು, ಆ ತಪೋನಿಷ್ಠನು ಯಾಜ್ಞವಲ್ಕ್ಯರೇ ಎಂಬದು ಆತನಿಗೆ ಗೊತ್ತಾಯಿತು. ಈಶ್ವರಧ್ಯಾನಾಸಕ್ತರಾದ ಯಾಜ್ಞವಲ್ಕ್ಯರಿಗೆ ಹುಲಿಯ ಸುದ್ದಿ ಯು ಹ್ಯಾಗೆ ಗೊತ್ತಾಗಬೇಕು? ಯಾಜ್ಞವಲ್ಕರಮೇಲೆ ಒದಗಿದ ಸಂಕಟವನ್ನು ಮಿತ್ರನು ತನ್ನ ಕ್ಷತ್ರಿಯ ವೀರರಿಗೆ ತಿಳಿಸಲು, ಕೂಡಲೆ ಅವರು ಬಾಣಗಳನ್ನು ಗುರಿಯಿಟ್ಟು ಹುಲಿಯಮೇಲೆ ಬಿಟ್ಟರು. ಆಗ ಆ ಎರಡು ಬಾಣಗಳು ಹುಲಿಯ ಒಂದೊಂದು ಕಣ್ಣು ಗಳಲ್ಲಿ ಸೇರಿ, ಅದರ ಹೃದಯವನ್ನು ಪ್ರವೇಶಿಸಿದವು. ಅಷ್ಟರಲ್ಲಿ ಮತ್ತೆ ಆ ಕ್ಷತ್ರೀಯ ವೀರರ ಕೆಲವು ಬಾಣಗಳು ಹುಲಿಯ ಹೃದಯವನ್ನು ಭೇದಿಸಲು, ಹುಲಿಯು ನೆಲಕ್ಕುರು ಳಿತು. ಅದು ಪ್ರಾಣಸಂಕಟದಿಂದ ಭಯಂಕರವಾಗಿ ಗರ್ಜಿಸುವಾಗ ಧ್ಯಾನಸ್ಥರಾದ ಯಾ ಜ್ಞವಲ್ಕ್ಯರು ಎಚ್ಚತ್ತರು. ಅಷ್ಟರಲ್ಲಿ ಮಿತ್ರನೂ, ಯಜ್ಞದತ್ತ-ವಿಷ್ಟು ಮಿತ್ರರೂ ಧಾವಿಸಿ ಅಲ್ಲಿಗೆ ಹೋಗಿದ್ದರು. ಯಾಜ್ಞವಲ್ಕ್ಯರು ಕಣ್ಣೆರೆದು ನೋಡಲು, ಒದಗಿದ ಪ್ರಸಂ ಗವು ಅವರ ಕಣ್ಣಿಗೆ ಬಿದ್ದಿತು. ಆಗ ಯಾಜ್ಞವಲ್ಕ್ಯರು ಕೃತಜ್ಞತೆಯಿಂದ ಮಿತ್ರನ ಚರಣಸ್ಪರ್ಶಮಾಡಿ, ಕ್ಷತ್ರಿಯವೀರರನ್ನು ಪ್ರೇಮದಿಂದ ಆಲಿಂಗಿಸಿದರು. ಆಕಸ್ಮಿಕ ಪ್ರಸಂ ಗದಿಂದ ತಮಗೊದಗಿದ ಸಂಕಟದ ನಿವಾರಣವಾಯಿತೆಂದು ಯಾಜ್ಞವಲ್ಕ್ಯರು ಕೃತಜ್ಞ ತೆಯಿಂದ ಶತಶಃ ಆ ಮೂವರ ಅಭಿನಂದನಮಾಡಿದರು.

ಮೇಲೆ ಹೇಳಿದಂತೆ ಮಿತ್ರನು ಯಾಜ್ಞವಲ್ಕ್ಯರ ಪ್ರಾಣರಕ್ಷಣಮಾಡಿದರೂ, ತಾನು

ಮಾಡಿದ ಉಪಕೃತಿಯ ಭಾರವನ್ನು ಆತನು ಯಾಜ್ಞವಲ್ಕ್ಯರಮೇಲೆ ಸರ್ವಥಾ ಹೊರಿಸ ಲಿಲ್ಲ. ನನ್ನಿಂದ ನಿಮ್ಮ ಪ್ರಾಣರಕ್ಷಣವಾಗಿರುವದರಿಂದ ನನ್ನ ಮಗಳ ಪಾಣಿಗ್ರಹಣಮಾ ಡಬೇಕೆಂದು ಹೇಳುವ ವಿಚಾರವು ಸಹ ಆ ಮುನಿಯ ಮನಸ್ಸಿನಲ್ಲಿ ಹೊಳೆಯಲಿಲ್ಲ. ಆ ಕಾಲದ ಆರ್ಯಾವರ್ತದ ಸಾಮಾಜಿಕ ಪದ್ಧತಿಯಂತೆ, ಮಾದಲಲಗ್ನವಾದ ಮನುಷ್ಯನಿ ಗೂ ಸುಸ್ವರೂಪಿಯೂ, ಸದ್ಗುಣಸಂಪನ್ನಳೂ ಆದ ಹುಡುಗೆಯನ್ನು ಕೊಡುವದು ಅಯೋಗ್ಯವೆಂದು ತಿಳಿಯಲ್ಪಡುತ್ತಿದ್ದಿಲ್ಲ. ಇಂಥ ಸದ್ಗುಣ ಸಂಪನ್ನಳಾದ ಸುಂದರಕನ್ಯೆಯ ಪ್ರಾಪ್ತಿಯಾಗುವದು ಬಹುಮಾನದ ಲಕ್ಷಣವೆಂದು ಆಗಿನ ಜನರು ತಿಳಿಯುತ್ತಿದ್ದರು; ಆದರೆ ಇದುಸಮಾಜದೊಳಗಿನ ಸರ್ವಸಾಧಾರಣ ಜನರಮಾತಾಯಿತು; ಆದರೆಯಾಜ್ಞವಲ್ಕ್ಯರೂ, ಮಿತ್ರನೂ ಸಾಮಾನ್ಯಜನರೊಳಗಿನವರಲ್ಲವೆಂಬದನ್ನು ನಾವು ವಾಚಕರಿಗೆ ಬರೆದು ತಿಳಿಸಲ ವಶ್ಯ ವಿಲ್ಲ; ಆ ದ್ದ ರಿ ೦ ದ, ಲೋ ಕ ವ ೦ ದ್ಯ ರಾ ದ ಯಾಜ್ಞವಲ್ಕ್ಯರೊಡನೆ ಮೈತ್ರೇಯಿಯ ದ್ವಿತೀಯ ಸಂಬಂಧವಾಗುವದು ಶಕ್ಯವಾಗಿದ್ದಿಲ್ಲ. ಮೇಲೆ ಹೇಳಿ

ದಂತೆ ಯಾಜ್ಞವಲ್ಕ್ಯರ ಪ್ರಾಣರಕ್ಷಣದ ಯೋಗವು ಒದಗಿದ್ದರಿಂದ ಮಿತ್ರನೊಡನೆ

16

ಯಾಜ್ಞವಲ್ಕ್ಯರ ಸ್ನೇಹದ ಅಭಿವೃದಿ ಯಾಗಿ, ಅವರಿಬ್ಬರ ಮನೆಯೊಳಗಿನ ಹೆಣ್ಣು ಮಕ್ಕಳ ಪರಸ್ಪರ ಸ್ನೇಹವೂ ಹೆಚ್ಚಿತು. ಒಬ್ಬರು ಮತ್ತೊಬ್ಬರ ಮನೆಗೆ ಮೇಲೆ ಮೇಲೆ ಬರಹತ್ತಿದರು, ಹೋಗಹತ್ತಿದರು. ಕಾತ್ಯಾಯನೀ-ಮೈತ್ರೇಯಿಯರ ಪ್ರೇ ಮವು ದಿನದಿನಕ್ಕೆ ಹೆಚ್ಚುತ್ತ ಹೋಯಿತು. ಕಾತ್ಯಾಯನಿಯು ಮೈತ್ರೇಯಿಗಿಂತ ಎರಡೇ ವರ್ಷಕ್ಕೆ ಹಿರಿಯಳಿದ್ದದ್ದರಿಂದ, ಅವರಿಬ್ಬರು ಸಾಧಾರಣ ಓರಿಗೆಯವರಾಗಿದ್ದ ರೆಂದು ಹೇಳಬಹುದು. ಕಾತ್ಯಾಯನಿಯಂತೆ ಮೈತ್ರೇಯಿಯೂ ಲಾವಣ್ಯವತಿಯಾಗಿ ದ್ದಳು. ಇಷ್ಟರಮಟ್ಟಿಗೆ ಅವರಲ್ಲಿ ಸಾಮ್ಯವಿದ್ದು, ಅವರಲ್ಲಿಯ ಗುಣಗಳು ತೀರ ವಿರು ದ್ದವಾಗಿದ್ದವು . ವಿರುದ್ಧ ಗುಣಗಳೆಂದರೆ, ಒಬ್ಬರಲ್ಲಿಯವು ಸದ್ಗುಣಗಳು, ಇನ್ನೊ ಬ್ಬರಲ್ಲಿಯವು ದುರ್ಗುಣಗಳು, ಎಂಬರ್ಥವಲ್ಲ. ಇಬ್ಬರೂ ಸದ್ಗುಣಿಗಳೇ ಆಗಿದ್ದರು. ಕಾತ್ಯಾಯನಿಯಲ್ಲಿಯ ಸದ್ಗುಣಗಳು ಸಾಂಸಾರಿಕವಾಗಿದ್ದವು , ಮೈತ್ರೇಯಿಯಲ್ಲಿಯವು ಆಧ್ಯಾತ್ಮಿಕವಾಗಿದ್ದವು. ಒಬ್ಬರ ಗುಣಗಳು ಮತ್ತೊಬ್ಬರಿಗೆ ಮಹತ್ವದವಾಗಿ ತೋರಿ, ಅವು ತನ್ನಲ್ಲಿರದೆ ಈಕೆಯಲ್ಲಿರುತ್ತವೆಂದು ತಿಳಿದು ಅವರು ಒಬ್ಬರನ್ನೊಬ್ಬರು ಆದರಿಸುತ್ತಿದ್ದರು , ಪ್ರೀತಿಸುತ್ತಿದ್ದರು. ಪರಸ್ಪರ ದರ್ಶನದಿಂದ ಅವರಿಗೆ ಆನಂದ ವಾಗುತ್ತಿತ್ತು, ವಿಯೋಗದಿಂದ ದುಃಖವಾಗುತ್ತಿತ್ತು. ಕಾತಾ ಯನಿಯ ಅಂತಃಕರ ಣವು ಅತ್ಯಂತ ಕೋಮಲವಿದ್ದದ್ದರಿಂದ , ಯಾವದೊಂದು ಸಂಗತಿಯ ಪರಿಣಾಮವು ಆಕೆಯ ಮನಸ್ಸಿನ ಮೇಲೆ ಬಹುಬೇಗ ಆಗುತ್ತಿತ್ತು. ತನಗೆ ಅನುಕೂಲವಾಗಿ ತೋರುವ ವಸ್ತುಗಳ ಮೇಲೆ ಆಕೆಯ ಪ್ರೇಮವು ತಟ್ಟನೆ ಕುಳಿತುಕೊಳ್ಳುತ್ತಿತ್ತು; ಅವುಗಳ ಗುಣದೋಷಗಳ ವಿವೇಚನದ ಕಡೆಗೆ ಆಕೆಯ ಮನಸ್ಸು ಹರಿಯುತ್ತಿದ್ದಿಲ್ಲ. ಆಕೆಯ ಸೇರಿಕೆಯ ವಸ್ತುವು ಆಕೆಯ ಎದುರಿಗೆ ಬಂದರಾಯಿತು, ಕೂಡಲೆ ಲೋಹ ಚುಂಬಕದಂತೆ ಆಕೆಯ ಮನಸ್ಸು ಅತ್ತಕಡೆಗೆ ಹರಿದುಹೊಗುತಿತ್ತು. ಆಕೆಯ ಮನೋವಿಕಾರಗಳು ಅತ್ಯಂತ ತೀವ್ರವಾಗಿದ್ದವು . ತನಗೆ ಅನುಕೂಲ ಸಂಗತಿಗಳ ಯೋಗವಾದ ಕೂಡಲೆ ಆಕೆಯಮುಖವು ಪ್ರಫುಲ್ಲಿತವಾಗಿ , ಅದರಲ್ಲಿ ಮುಗುಳುನಗೆಯು ಮಿನುಗುತ್ತಿತ್ತು. ಇದಕ್ಕೆ ವಿರುದ್ಧವಾಗಿ, ಆಕೆಗೆ ಸೇರದಸಂಗತಿಯ ಯೋಗವಾದ ಕೂಡಲೆ ಆಕೆಯ ಚಿತ್ತವು ಕ್ಷೋಭಿಸುತಿತ್ತು. ದುಃಖದ ಪ್ರಸಂಗವನ್ನು ಕಣು! ಮುಟ್ಟಿ ನೋಡುವದಂತು ಇರಲಿ , ಕಿವಿಯಿಂದ ಕೇಳಿದರೆ ಸಾಕು , ಆಕೆಯ ಕಣ್ಣುಗ ಳಲ್ಲಿ ನೀರು ಬರುತ್ತಿದ್ದವು. ಆಕೆಯ ಮನಸ್ಸು ಗಂಭೀರವಾದದ್ದಲ್ಲ. ಆಕೆಯು ವಿಲಾ ಸದಲ್ಲಿಯೂ, ಕಥೆ ಕೇಳುವಲ್ಲಿಯೂ ತಾಸಿಗೆ ತಾಸು ಕಳೆಯುತ್ತಿದ್ಧಳು. ಆಕೆಯ ಪತಿಯು ಅಂಥ ವಿದ್ವಾಂಸನಿದ್ದರೂ , ಆತನಸಂಗಡ ಪಾರಮಾರ್ಥಿಕ ವಿಷಯದ ಭಾಷಣ ಮಾಡಲಿಕ್ಕೆ ಆಕೆಯ ಮನಸ್ಸು ಇಚ್ಚಸುತಿ ದಿಲ್ಲ ; ಹೀಗಿದ್ದರೂ ತನ್ನ ಸಂಸಾರಕ್ರುತ್ಯ ಗಳಲ್ಲಿ ಆಕೆಯು ಅತ್ಯಂತ ಜಾಗರೂಕಳಾಗಿದ್ದಳು . ಆಕೆಯ ಪತಿಭಕ್ತಿಯು ಶ್ಲಾಘ ನೀಯವಾಗಿತು . ತನ್ನ ಮಕ್ಕಳ ಮೇಲಿನ ಆಕೆಯ ಅಕ್ಕರೆಯು ವಿಲಕ್ಷಣವಾಗಿತ್ತು. ತನ್ನ ಮಕ್ಕಳು ತನಗೆ ಅಲಂಕಾರವೆಂದು ಆಕೆಯು ತಿಳಿಯುತ್ತಿದ್ದಳು. ಮಕ್ಕಳ

ಸಂಗೋಪನದಲ್ಲಿ ಸರ್ವಥಾ ದುರ್ಲಕ್ಷ ಮಾಡುತ್ತಿದ್ದಿಲ್ಲ. ಪತಿಗೆ ಸುಖವನ್ನುಂಟು

17

ಮಾಡುವಲ್ಲಿ, ಮಕ್ಕಳ ಆರೈಕೆಯಲ್ಲಿ ಆಕೆಯ ಕಾಲಹರಣವಾಗುತ್ತಿತ್ತು. ಆಕೆಯ ಮನೆಯೆ‍೦ದರೆ ಸ್ವಚ್ಛತೆ, ಓರಣ, ಅಚ್ಚು ಕಟ್ಟು ವನಗಳ ಶ್ರೇಷ್ಠಮಾದರಿಯಗಿತ್ತೆ೦ದು ಹೇಳಬಹುದು. ಇದೆ ಸಂಸಾರಸುಬಗ ವಲ್ಲವೇ !

ಮೈತ್ರೇಯಿಯ ಸ್ವಭಾವ ಎಷ್ಟೋ ಸಂಗತಿಗಳಲ್ಲಿ ಕಾತ್ಯಾಯನಿಯ ಸ್ವಭಾ

ವಕ್ಕೆ ತೀರ ವಿರುದ್ಧವಾಗಿತ್ತು. ಮೈತೆಯಿದು ಅಂತಃಕರಣದಲ್ಲಿ ಪ್ರೇಮಕ್ಕೆ ಆಸ್ಪ ದವಿದ್ದಿಲ್ಲವೆಂತಲ್ಲ ; ಆದರೆ ಆಕೆಯ ಪ್ರೇಮಕ್ಕೆ ಙ್ಞಾನದ ಮಯ್ರಾದೆಯಿದ್ದದ್ದರಿ೦ದ, ಕಾತ್ಯಾಯನಿಯ ಪ್ರೇಮದಂತೆ ಅದು ಯಾವ ವಸ್ತುವಿನ ಮೇಲೆಯೂ ತಟ್ಟನೆ ಕುಳಿತು ಕೊಳ್ಳುತ್ತಿದ್ದಿಲ್ಲ. ಯಾವದೊಂದು ಸಂಗತಿಯ, ನಿಜವಾದ ಸ್ವರೂವಜ್ಞಾನವಾದಹೊ ರತು ಮೈತ್ರೇಯಿಯ ಪ್ರೇಮಕ್ಕೆ ಮಾತ್ರ ಆಗುತಿದ್ದಿಲ್ಲ . ಆಕೆಯ ಮನೋವಿ ಕಾರಗಳಿಗೆ ವಿವೇಕರ ಪ್ರತಿಬಂಧವಿದ್ದದ್ದರಿಂದ, ಸುಖ ದಃಖಗಳ, ಅಥವಾ ಶತ್ರುತ್ವ- ಮಿತ್ರತ್ವಗಳ ಪರಿಣಾಮವು ಆಕೆಯ ಮನಸ್ಸಿನ ಮೇಲೆ ತಟ್ಟನೆ ಆಗುತ್ತಿದ್ದಿಲ್ಲಿ. ಪ್ರೌಢ ರಲ್ಲಿಯ ಗಾಂಭೀರ್ಯ, ದೊಡ್ಡಸ್ತಿಗೆ , ನಿರ್ದಾರ ಇ ಮೈತ್ರೆಯಿಯ ಮುಖದಲ್ಲಿ ಈಗಿನಿಂದಲೇ ಮಿನುಗುತ್ತಿದ್ದವು . ಸ್ತ್ರಿಯರ ಮನೋರಂಜನದ ಸ್ವಾಭಾವಿಕ ಸಾಧನ ಗಳಾದ ವಿಲಾಸ , ಕಥಾತ್ರವಣ ಇವುಗಳು ಮೈತ್ರೇಯಿಯ ಮನಸ್ಸು ಬಹಳಹೊತ್ತು ತೊಡಗಿರುತ್ತಿದ್ದಿಲ್ಲ. ಆಳೆದು ಕಣ್ಣುಗಳು ಮಹಾತ್ಮನ ಸ್ವರೂಪವನ್ನು ನೋಡುವ ವಿಷಯದಲ್ಲಿಯೂ , ಕಿವಿಗಳು ವರಮಾತ್ಮನ ಗುಣಾನುವಾದಗಳನ್ನು ಕೇಳುವ ವಿಷಯ ದಲ್ಲಿಯೂ ತತ್ಪರವಾಗಿದ್ದಿದ್ದರಿoದ, ಕ ಚಿ೦ತನೆಯಹ್ರಸ್ಥಿತಿಯ ಕಡೆಗೂ , ಸೌಂದ ರ್ಯದ ಕಡೆಗೂ ಆಕೆಯ ಮನಸ್ಸು ಹರಿಯುತ್ತಿದ್ದಿಗಲ್ಲ, ವಿಷಯೋಪಭೋಗದ ವಿಷ ಯುದಲ್ಲಿ ಆಕೆಯು ಅತ್ಯಂತ ಉದಾಸೀನಳಾಗಿದ್ದಳು, ಆಧ್ಯಾತ್ಮವಿಷಯದ ಗಂಭೀರ ವಿಚಾರಮಾಡುವಲ್ಲಿಯೇ ಆಕೆಯ ಕಲಹರಣವ ಗುಸ್ತಿದದರಿ೦ದ, ಸಾಂಸಾರಿಕ ಕೃತ್ಯಗ ಳಲ್ಲಿ ಆಕೆಯು ಉದಾಸೀನಳಾಗಿದ್ದಳು. ತಂದೆಯ ಪತಿಯಲ್ಲಿ ಮಾಡದಿದ್ದರೆ ನಡೆಯದಿ ರುವ ಸಂಸಾರಕ್ಕತಗಳನ್ನು ಔದಾಸೀನದಿ೦ದ ನಿವ್ರಾಹವಿಲ್ಲದೆ ಮಾಡುತ್ತಿದ್ದಳು. ಆಕೆಯ ಕೆಲಸವಲ್ಲಿ ವ್ಯವಸ್ಥೆ, ಅಚ್ಚುಕಟ್ಟುತ, ಓರಣ ಇವು ತೋರುವವರ ಬದಲು, ಹ್ಯಾಗಾದರೂ ಕೆಲಸವಾಯಿತೆ೦ದರ ಲಕ್ಷಣಗಳು ತೋರುತ್ತಿದ್ದವು. ತಿರುಗಿ ಕೇಳಿ ದರೆ, ಇಷ್ಟುಸಹ ಸಂಸಾರದ ಕಡೆಗೆ ಲಕ್ಷಕೊಡುವ ಆಕೆಗೆ ಸೇರುತ್ತಿದ್ದಿಲ್ಲ. ಆಧ್ಯಾ ತ್ಮಿಕ ವಿಚಾರಕ್ಕೆ ತಕ್ಕ ಗುರುವೆಂಬ ದ್ರುಷ್ಠಿಯಿ೦ದಲೇ ಆಲೆಯು ಯಾಜ್ಞವಲ್ಕ್ಯರ ಫಾಣಿಗ್ರಹಣ ಮಾಡಲು ಇಚ್ಛಿಸುತ್ತಿದ್ದನು, ಈ ಯೋಗವು ಒದಗಿಲಾರದಿದ್ದರೆ ಆಜನ್ಮ ಬ್ರಹ್ಮಚರ್ಯದಿಂದಿರಬೇಕೆಂದು ಆಕೆಯು ಸಂಕಲ್ಪಿಸಿದಳು. ಆಕೆಯಲ್ಲಿ ಸೌಜನ್ಯಕ್ಕೂ, ವಿವೇಕಕ್ಕೂ ಕೊರತೆಯಿಲ್ಲ. ತನ್ನನ್ನು ಯಾಙ್ಞವಲ್ಕ್ಯರು ಲಗ್ನವಾಗುವದರಿಂದ ಕಾತ್ಯಾಯನಿಯ ಸುಖಕ್ಕೆ ಕೊರತೆಯಾಗುವಂತಲೂ , ಈ ಸಂಗತಿಯು ಕಾತ್ಯಾಯ

ನಿಯ ಮನಸ್ಸನ್ನು ನೋಯಿಸತಕ್ಕದ್ದಿಂತಲೂ ಆಕೆಯು ತಿಳಿದಿದ್ದಳು. ಆಕೆಯು ಮಾತ್ಸ ರ್ಯರಹಿತಳಿದ್ದಳು. ಸ್ವಾರ್ಧದ ಗಂಧವುಕೂದ ಆಳಿಯಲ್ಲಿ ಸುಳಿಯುತ್ತಿದ್ದಿಲ್ಲ; ಅಂದಬ

18

ಳಿಕ ಕಾತ್ಯಾಯನಿಯ ಮನಸ್ಸನ್ನು ನೋಯಿಸಿ ಯಾಜ್ಞ್ಯವಲ್ಕರ ಪಾಣಿಗ್ರಹಣದಿಂದ ತನ್ನ ಹಿತವನ್ನು ಸಾಧಿಸಿಕೊಳ್ಳಲಿಕ್ಕೆ ಆಕೆಯು ಹ್ಯಾಗೆ ಇಚ್ಛಿಸುವಳು ? ಕಾತ್ಯಾಯ ನಿಯ ಸುಕುಮಾರಗುಣಗಳಿಗೆ ಮೈತ್ರೇಯಿಯು ಲುಬ್ಧಳಾಗಿರುವಂತೆ , ಮೈತ್ರೇಯಿಯ ಗಂಭೀರಗುಣಗಳಿಗೆ ಕಾತ್ಯಾಯನಿಯೂ ಲುಬ್ಧಳಾಗಿದ್ದದ್ದರಿಂದ ಅವರು ಒಬ್ಬರನ್ನೊಬ್ಬರು ಕಂಡರೆ ಬಿದ್ದು ಸಾಯುತ್ತಿದ್ದರು. ತನ್ನ ಪತಿಯ ಪಾಣಿಗ್ರಹಣಕ್ಕಾಗಿ ಕುಳಿತವಳೆಂದು ಕಾತ್ಯಾಯನಿಯಾಗಲಿ , ತನ್ನ ಪಾಣಿಗ್ರಹಣಕ್ಕೆ ಅಡ್ಡಬಂದು ಕುಳಿತವಳೆಂದು ಮೈತ್ರೇ ಯಿಯಾಗಲಿ ಪರಸ್ಪರರನ್ನು ಮತ್ಸರಿಸುವಹಾಗಿದ್ದಿಲ್ಲ! ಅಯೋಗ್ಯ ಕಾರ್ಯಕ್ಕೆ ಕೈಹಾ ಕತಕ್ಕವರಲ್ಲವೆಂಬದನ್ನು ಪರಸ್ಪರರು ಅರಿತುಕೊಂಡಿದ್ದರಾದ್ದರಿಂದ ಒಬ್ಬರ ವಿಷಯವಾಗಿ ಮತ್ತೊಬ್ಬರ ಅಪನಂಬಿಗೆಯು ಹುಟ್ಟುವಹಾಗಿದ್ದಿಲ್ಲ. ಮೈತ್ರೇಯಿಯು ಕಾತ್ಯಾಯ ನಿಗೆ ಅತ್ಯಂತ ಪ್ರಿಯಳಾಗುತ್ತನಡೆದದ್ದರಿಂದ, ಕಾತ್ಯಾಯನಿಯ ಸ್ವಭಾವಕ್ಕನುಸರಿಸಿ ಆಕೆಗೆ ಮೈತ್ರೇಯಿಯ ಹಂಬಲವು ವಿಶೇಷವಾಗಿ ಹತ್ತಿತು. ಆಕೆಯು ಮೈತ್ರೇಯಿ ಯನ್ನು ಒಂದು ಕ್ಷಣವಾದರೂ ಅಗಲಿ ಇರದಾದಳು! ಮೈತ್ರೇಯಿಯ ವಿಯೋಗದ ಕಲ್ಪನೆಯು ಸಹ ಆಕೆಗೆ ದುಸ್ಸಹದುಃಖವನ್ನು ಕೊಡಹತ್ತಿತು !! ನಿರ್ಮಲಾಂತಃಕರ ಣದ ಪ್ರಭಾವವನ್ನು ನಾವು ಇದಕ್ಕೂ ಹೆಚ್ಚಿಗೆ ಏನು ವರ್ಣಿಸೋಣ ?