ಭವತೀ ಕಾತ್ಯಾಯನೀ/೩೯ನೆಯ ಗ್ರಂಥ/೨ ನೆಯ ಪ್ರಕರಣ

__೭__

ತಿಳಿಯಬೇಕು. ಮುಖ್ಯವಾಗಿ ಕೆಲಸಮಾಡುವದು ಮನವೇ ಇರುವದು . ಈರೀತಿ ಯಾಗಿ ಸುಷುಪ್ತಿಯನ್ನುಬಿಟ್ಟು ಉಳಿದಅವಸ್ಥೆಗಳಲ್ಲಿ ಉದ್ಯೋಗಮಾಡುವದು ಮನಸ್ಸಿನ ಹೊರತು ಯಾವದೂ ಇಲ್ಲ. ಕೆಲಸಮಾಡುವ ವಿಷಯದಲ್ಲಿ ಮನಕ್ಕೆ ಬೇಸರವೇ ಇಲ್ಲ. ಇಪ್ಪತ್ತುನಾಲ್ಕು ತಾಸುಗಳುಳ್ಳ ದಿವಸದಲ್ಲಿ ಒಂದುತಾಸು ಹೊತ್ತು ಸುಷುಪ್ತಿಯಾದರೆ ಬಹಳ. ಒಂದೊಂದುದಿವಸ ಸುಷುಪ್ತಿಯೇ ಬರುವದಿಲ್ಲ. ಬರೇ ಸ್ವಪ್ನ , ಅಥವಾ ಜಾಗ್ರತ್ ಈ ಅವಸ್ಥೆಯಲ್ಲಿಯೇ.ಕಾಲವು ಕ್ರಮಿಸಿಹೋಗುತ್ತದೆ. ಸುಷುಪ್ತಿಯಲ್ಲಿ ಜೀವಾತ್ಮನು ಪರಮಾತ್ಮನಹತ್ತರ ಹೋಗಿರುತ್ತಾನೆ. ಆಗ ಆತನಿಗೂ ಈತನಿಗೂ ಸಂಬಂಧವಾದ್ದರಿಂದ , ಇಂದ್ರಿಯಗಳು ಮತ್ತು ಮನವು ಇವೆರಡೂ ವ್ಯಾಪಾರಶೂನ್ಯಗಳಾ ಗಿರುತ್ತವೆ. ಆಗ ಸುಖ-ದುಃಖಗಳಿಗೆ ಜನಕವಾಗಿರುವ ವಿಷಯಗಳಸಂಬಂಧವೇ ಮನಕ್ಕೆ ಆಗುವದಿಲ್ಲ. ಜೀವನಿಗೆ ಮನಸ್ಸಿನದ್ವಾರದಿಂದಲೇ ಸುಖ-ದುಃಖಗಳ ಜ್ಞಾನವಾಗತ ಕ್ಕದ್ದು. ಅಂಥವನವೇ ವ್ಯಾಪಾರಶೂನ್ಯವಾಗಿರುವಾಗ ಜೀವನಿಗೆ ವ್ಯವಹಾರದ ಸುಖ- ದುಃಖಗಳ ಸಂಬಂಧವೇ ಆಗುವದಿಲ್ಲ. ಇದೊಂದು ಅವಸ್ಥೆಯಹೊರತು ಉಳಿದ ಜಾಗ್ರ ದವಸ್ಥೆ, ಸ್ವಪ್ನಾವಸ್ಥೆಗಳಲ್ಲಿ ಮನಸ್ಸು ಯಾವದೊಂದು ಉದ್ಯೋಗ ಮಾಡುತ್ತಲೇ ಇರುತ್ತದೆ. ಜಾಗೃದವಸ್ಥೆಯಲ್ಲಿ ಅದು ಮುಖ್ಯವಾಗಿ ಇಂದ್ರಿಯಗಳನ್ನು ಕಟ್ಟಿಕೊಂಡು ಕೆಲಸಮಾಡುವದು- ಸ್ವಪ್ನಾವಸ್ಥೆಯಲ್ಲಿ ಮುಖ್ಯವಾಗಿ ತಾನೊಂದೇ ಕೆಲಸಮಾಡು ವದು ; ಅಂದಬಳಿಕ ಇದರ ಉದ್ಯೋಗತತ್ಪರತೆಯು ಎಷ್ಟೆಂಬುದನ್ನು ವಾಚಕರು ತರ್ಕಿಸಬಹುದು.

_____ _____

೨ ನೆಯ ಪ್ರಕರಣ- ಇ೦ದಿ ಯಗಳು.

__________೦ ೦_________

-बलवानिंदियग्रामो विद्वांस मपिकर्षति. [श्रीमद्भागवत

" ಇದಿ, ಪರಮೈಶ್ವರ್ಯೇ ”ಎಂಬ 'ಇದಿ' ಧಾತುವಿನಿಂದ ಸಿದ್ದವಾದ ಇಂದ್ರಿಯ

ಶಬ್ದವು ಇಂದ್ರಿಯಗಳ ಪರಮಸಾಮರ್ಥ್ಯವನ್ನು ತೋರಿಸುತ್ತದೆ. ವಿಚಿತ್ರಸಾಮರ್ಥ್ಯವುಳ್ಳ ಈ ಇಂದ್ರಿಯಗಳು ಮನಸ್ಸಿಗೆ ಸಹಾಯಭೂತಗಳಾಗಿರುತ್ತವೆ. ಮನಸ್ಸಿಗೆ ಇವುಗಳಸಹಾ ಯದ ಹೊರತು ಯಾವ ಪದಾರ್ಥಗಳ ಜ್ಞಾನವೂ ಆಗುವದಿಲ್ಲ. ಮನಸ್ಸೆಂಬದೊಂದು ರಾಜನೆಂದು ಕಲ್ಪಿಸಿ, ಇಂದ್ರಿಯಗಳು ಅವನ ಪರಿಚಾರಕರೆಂದು ಕಲ್ಪಿಸಬಹುದು. ರಾಜನಿಗೆ ಪರಿಚಾರಕರು ಜ್ಞಾನವನ್ನುಂಟುಮಾಡಿದಂತೆ ಇಂದ್ರಿಯಗಳು ಮನಸ್ಸಿಗೆ ಪದಾರ್ಥ ಜ್ಞಾನವನ್ನು ಮಾಡಿಕೊಡುತ್ತವೆ. ಈ ಪದಾರ್ಥಜ್ಞಾನ ಮಾಡಿಕೊಡುವ ಇಂದ್ರಿಯಗಳು ಜ್ಞಾನೇಂದ್ರಿಯಗಳೆಂದು ಹೇಳಲ್ಪಡುವವು. ಇವಲ್ಲದೆ ಕರ್ಮೇಂದ್ರಿಯಗಳು ಬೇರೆ ಇರು ವವು. ಜ್ಞಾನೇಂದ್ರಿಯಗಳು ಮನಸ್ಸಿಗೆ ಜ್ಞಾನವನ್ನು ಸಂಪಾದಿಸಿಕೊಟ್ಟಮೇಲೆ ಮನಸ್ಸು

ಕಾರ್ಯ ಕಾರ್ಯ ವಿವೇಚನವನ್ನು ಮಾಡಿ ಕರ್ತವ್ಯದ ವಿಷಯವಾಗಿ ಆಜ್ಞಾಪಿಸಿದ

___೮___

ಕೂಡಲೆ ಕರ್ಮಭೂಡಲಿಕ್ಕೆ ಮುಂದುವರಿಯುವ ಇಂದ್ರಿಯಗಳು ಕರ್ಮೇಂದ್ರಿಯಗಳು. ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಐದು. ಹೀಗೆ ಒಟ್ಟು ಹತ್ತು ಇಂದ್ರಿಯ ಗಳು ಮನಸ್ಸಿನ ಕಿಂಕರರಾಗಿ ಈ ದೇಹದಲ್ಲಿರುತ್ತವೆ.

ಜ್ಞಾನೇಂದ್ರಿಯಗಳು ನೇತ್ರ, ಶ್ರೋತ್ರ, ಪ್ರಾಣ, ಜಿಹ್ವಾ, ಚರ್ಮವೆಂಬವು.

ಇವುಗಳಲ್ಲಿ ಮಾದಲನೆಯ ನೇತ್ರವೆಂಬ ಇಂದ್ರಿಯವು ರೂಪವೆಂಬ ವಿಷಯವನ್ನು ಹಿಡಿಯು ತ್ತದೆ, ಇದಕ್ಕೆ ಇದೊಂದೇ ಕೆಲಸವು, ಮತ್ತೊಂದು ವಿಷಯದಪರಿಜ್ಞಾನವು ಇದಕ್ಕೆ ಆಗು ವದಿಲ್ಲ, ಮತ್ತು ಈ ಇಂದ್ರಿಯವು ಕಣ್ಣಗುಡ್ಡಿಯಿಂದ ಹೊರಬಿದ್ದು, ತನಗೆ ವಿಷಯವಾದ ರೂಪವಿದ್ದಲ್ಲಿ ಹೋಗಿ ಆ ರೂಪವನ್ನು ಗ್ರಹಿಸುತ್ತದೆ. ಈ ಇಂದ್ರಿಯವು ತೇಜೋಮಯ ವಾದದ್ದ‌‌ರಿಂದ ಇದರ ಗತಿಯು ಬಹು ತೀವ್ರವಿರುತ್ತದೆ. ಆದ್ದರಿಂದ ಕಣ್ದೆರದಕೂಡಲೆ ರೂಪವೇ ಗೋಚರವಾಗುತ್ತದೆ. ಆದರೆ ಇದು ಹೊರಬಿದ್ದು ರೂಪವಿಧ್ದಲ್ಲಿ ಹೋಗಿ ಅದನ್ನುಹಿಡಿದದ್ದು ಸಹಸಾ ಮನಸ್ಸಿನ ಕಲ್ಪನೆಯಲ್ಲಿಯೇ ಬರುವದಿಲ್ಲ. ಈ ನೇತ್ರೇಂ ದ್ರಿಯಕ್ಕೆ “ಗತ್ಯಾಗ್ರಾಹಿ"ಎಂದು ಹೆಸರು ಇರುವದು. ಉಳಿದನಾಲ್ಕು ಜ್ಞಾನೇಂದ್ರಿಯ ಗಳು ತಾವು ಇದ್ದಲ್ಲಿಯೇ ಇದ್ದು, ತಮ್ಮ ಹತ್ತರ ವಿಷಯಗಳುಬಂದಾಗ ಅವನ್ನು ಹಿಡಿ ಯತಕ್ಕವು; ವಿಷಯಗಳಿದ್ದಸ್ಧಾನಕ್ಕೆ ಇವು ಹೋಗುವವಲ್ಲ. ಆದ್ದರಿಂದ ಇವಕ್ಕೆ " ಸ್ಧಿತ್ವಾಗ್ರಾಹಿ"ಗಳೆಂದುಹೆಸರು. ಪೃಥಿವೀ-ಜಲ-ತೇಜ-ವಾಯು-ಆಕಾಶಗಳೆಂದು ಪಂಚ ಭೂತಗಳುಂಟು. ಇವೇ ಪಂಚಭೂತಗಳಿಂದ ಪರಮೇಶ್ವರನು ನಮ್ಮ ದೇಹವನ್ನು ನಿರ್ಮಿ ಸಿದ್ದರಿಂದ, ನಮ್ಮ ದೇಹವು ಪಾಂಚಭೌತಿಕವೆಂದು 'ಹೇಳಲ್ಪಡುವದು. ಈ ಪಂಚಭೂತ ಗಳೊಳಗೆ ಒಂದೊಂದು ಜ್ಞಾನೇಂದ್ರಿಯವು ಒಂದೊಂದು ಭೂತಕ್ಕೆ ಸಂಬಂಧಪಟ್ಟಿರುತ್ತದೆ ಅದು ಹೇಗಂದರೆ-ನೇತ್ರಂದ್ರಿಯವು ತೇಜೋಮಯವಾದದ್ದರಿಂದ ತೇಜವೆಂಬ ಭೂತಕ್ಕೆ ಸಂಬಂಧಿಸುತ್ತದೆ. ಶ್ರೋತ್ರೇಂದ್ರಿಯವು ಆಕಾಶವೆಂಬ ಭೂತಕ್ಕೆ ಸಂಬಂಧಿಸುವದು. ಫ್ಯಾಣವೆಂಬ ಇಂದ್ರಿಯವು, ಪೃಥಿವೀಯೆಂಬ ಭೂತಕ್ಕೆ ಸಂಬಂಧಿಸುವದು, ಚಿಹ್ನೆಯೆಂಬ ಇಂದ್ರಿಯವು ಜಲವೆಂಬಭೂತಕ್ಕೆ ಸಂಬಂಧಿಸುವದು ಚರ್ಮವೆಂಬ ಇಂದ್ರಿಯವು ವಾಯು ಎಂಬಭೂತಕ್ಕೆ ಸಂಬಂಧಿಸುತ್ತದೆ. ಈರೀತಿಯಾಗಿ ಐದೂ ಇಂದ್ರಿಯಗಳು ತಮ್ಮ ತಮ್ಮ ಭೂತಗಳೆನಿಸುವ ಪೃಥಿವೀ ಮುಂತಾದವುಗಳ ಗುಣಗಳನ್ನು, ಅಂದರೆ ರೂಪಮುಂತಾದ ಗುಣಗಳನ್ನು ಗ್ರಹಿಸಿ ಅವುಗಳಜ್ಞಾನವನ್ನು ಮನಸ್ಸಿಗೆ ಮಾಡಿಕೊಡುತ್ತವೆ. ಮನ ಸ್ಸಾದರೂ ಅವುಗಳಲ್ಲಿ ತನಗೆ ಬೇಕಾದದ್ದನ್ನು; ಬೇಡಾದದ್ದನ್ನು ನಿರ್ಣಯಿಸಿಕೊಂಡು, ಸಂಪಾದಿಸುವದಕ್ಕೂ, ಬಿಡುವದಕ್ಕೂ ಆಜ್ಞಾಪಿಸುವದು. ಆಮೇಲೆ ಕರ್ಮೇಂದ್ರಿ `ಯಗಳು, ಅಂದರೆ ವಾಕ್-ಪಾಣೆ-ಪಾದ-ಪಾಯು-ಉಪಸ್ಥ-ಎಂಬವು ಕೆಲಸಮಾಡಹತ್ತು ತ್ತವೆ. ವಾಗಿಂದ್ರಿಯವು ಆಹ್ವಾನ-ನಿಷೇಧಗಳೆಂಬ ಕೆಲಸಗಳನ್ನೂ, ಪಾಣಿ (ಕೈ) ಎಂಬಇಂದ್ರಿಯವು ಹಾನೋಪಾದಾನ, ಭರ್ತೃನ, ತಾಡನ ಮುಂತಾದ ಕೆಲಸಗಳನ್ನೂ, ಪಾದ (ಕಾಲು) ಎಂಬಇಂದ್ರಿಯವು ಗಮನಾಗಮನಗಳೆಂಬ ಕೆಲಸಗಳನ್ನೂ, ಪಾಯು

(ಅಪಾನ) ಎಂಬಇಂದ್ರಿಯವು ಮಲವಿಸರ್ಜನದ ಕೆಲಸವನ್ನೂ, ಉಪಸ್ಥ (ಜನನೇಂದ್ರಿಯ)

-೯-

ಎಂಬ ಇಂದ್ರಿಯವು ಪ್ರಜೋತ್ಪಾದನವೆಂಬ ಕಾರ್ಯವನ್ನೂ ಮಾಡುತ್ತವೆಂಬುವದು ಸರ್ವರಿಗೂ ವಿದಿತವಾದ ವಿಷಯವೇ ಇರುತ್ತದೆ .

ಜ್ಞಾನೇಂದ್ರಿಯಗಳೇ ಆಗಲಿ, ಕರ್ಮೇಂದ್ರಿಯಗಳೇ ಆಗಲಿ, ಪ್ರತಿಯೊಂದು ಇಂದ್ರಿ ಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುವದಕ್ಕೆ ಸಮರ್ಥಗಳಾಗಿದ್ದರೂ ಅವುಗಳ ಕಡೆಗೆ ಮನಸ್ಸಿನ ಒಲವು ಇರಬೇಕಾಗುತ್ತದೆ. ಇವು ಕೆಲಸಮಾಡುವಾಗ ಮನಸ್ಸು ಇವುಗಳಲ್ಲಿ ಕೂಡಿಕೊಳ್ಳದಿದ್ದರೆ ಇವುಗಳಿಂದ ಯಾವಕೆಲಸವೂ ಅಗುವದಿಲ್ಲ. ಮನಸ್ಸು ಬೇರೆ ಎಲ್ಲಿಯಾದರೂ ಹೋಗಿದ್ದರೆ ಕಣ್ಣಿರದಿದ್ದರೂ ರೂಪವೇ ತೋರುವದಿಲ್ಲ, ಇದರಂತೆ ಶಬ್ದವೂ ಕೇಳುವದಿಲ್ಲ, ಗಂಧವೂ ತಿಳಿಯುವದಿಲ್ಲ, ರಸಜ್ಞಾನವೂ ಆಗುವದಿಲ್ಲ, ಸ್ಪರ್ಶವೂ ತಿಳಿಯುವದಿಲ್ಲ. ಈ ಅಭಿಪ್ರಾಯವನ್ನು ಭಗವದ್ಗೀತೆಯಲ್ಲಿ-"ಇಂದ್ರಿಯಾಣಾಂ ಹಿ ಚರತಾಂ ಯನ್ಮನೋನು ವಿಧೀಯತೆ| ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾನವಾಂಭಸಿ||” “ಯಾವಾಗಲೂ, ಇಂದ್ರಿಯಗಳು ವಿಷಯಗಳಲ್ಲಿ ಸಂಚರಿಸತಕ್ಕ ಸ್ವಭಾವವುಳ್ಳವಾಗಿರು ತ್ತವೆ, ಅವುಗಳ ಕರ್ತವ್ಯಕರ್ಮವೇ ಅದಾಗಿರುವದು; ಆದರೆ ಆ ಇಂದ್ರಿಯಗಳ ಸಂಗಡ ಮನಸ್ಸನ್ನುಮಾತ್ರ ಕಳಿಸಿದರೆ ಸಾಕು, ನೀರಲ್ಲಿರುವ ನಾವಿಕೆಯನ್ನು ಅನುಕೂಲಮಾರು ತನು ಹಾರಿಸುವಂತೆ ಅದು ಮನುಷ್ಯನ ಕರ್ತವ್ಯಾಕರ್ತವ್ಯವಿವೇಕವನ್ನು ಅಪಹರಿಸುತ್ತದೆ. ಅಂದರೆ ಮನುಷ್ಯನು ಇಂದ್ರಿಯ ವಶನಾಗಿ ವ್ಯವಹರಿಸಹತ್ತಿದರೆ ಸದ್ವಿಚಾರಭ್ರಷ್ಟನಾಗುವ ನೆಂಬ ತಾತ್ಪರ್ಯವು ಈ ಶ್ಲೋಕದಿಂದ ವ್ಯಕ್ತವಾಗಿರುತ್ತದೆ. ಇಂದ್ರಿಯಗಳು ತಮಗೆ ಸ್ವಾಧೀ ನನಾದ ಮನುಷ್ಯನನ್ನು ಅಡ್ಡ ಹಾದಿಗೆ ಹಚ್ಚದೆ ಎಂದೂ ಬಿಡವು ಎಂಬ ಅಭಿಪ್ರಾಯವನ್ನು ಶ್ರೀಮದ್ಭಾಗವತದ “ಮಾತ್ರಾ ಸ್ವಸ್ರಾ ದುಹಿತ್ರಾವಾ ನೈಕಶಯಾಸನೋ ಭವೇತ್|ಬಲವಾ ನಿಂದ್ರಿಯಗ್ರಾಮೋ ವಿದ್ವಾಂಸಮಪಿಕರ್ಷತಿ |" ಶಾಯಿಯಾಗಲಿ, ಅಕ್ಕತಂಗಿಯರಾಗಲಿ, ಮಗಳೇ ಆಗಲಿ, ಇವರೊಡನೆ ಪುರುಷನು ಒಂದೇ ಹಾಸಿಗೆಯಲ್ಲಿ, ಅಥವಾ ಒಂದೇ ಆಸನದಲ್ಲಿ ಕದಾಚಿತ್ಕಾಲದಲ್ಲಿಯಾದರೂ ಕುಳಿತುಕೊಳ್ಳಬಾರದು ಯಾಕಂದರೆ ಇಂದ್ರಿಯಗಳ ಹಿಂಡು ಬಲಾಢ್ಯವಾಗಿರುವದರಿಂದ ಪಂಡಿತನನ್ನೂ ಕೂಡ ಸ್ವಾಧೀನನ್ನಾಗಿ ಮಾಡಿಕೊಳ್ಳುತ್ತದೆ” ಎಂಬ ಶ್ಲೋಕವು ತೋರಿಸುತ್ತದೆ ಈ ಶ್ಲೋಕದಲ್ಲಿಯ "ವಿದ್ಯಾಸಂ" ಎಂಬ ಶಬ್ದಕ್ಕೆ ಬ್ರಹ್ಮಜ್ಞಾನಿಯೆಂಬ ಅರ್ಥವನ್ನು ಹೇಳಬಾರದು. ಶಾಸ್ತ್ರಕಲಿತವನೂ, ವ್ಯವಹಾರ ಚತುರನೂ ಆದ ಪುರಷನೆಂದು ಹೇಳಬೇಕು. ಯಾಕಂದರೆ, ಮನಸ್ಸು ಮತ್ತು ಇಂದ್ರಿಯ ಇವುಗಳ ಶಕ್ತಿಯನ್ನು ಇಲ್ಲದಂತೆ ಮಾಡಿ, ವಿಷಯಗಳನ್ನು ತುಚೀಕರಿಸಿ ಸದಾನಂದಿಯಾಗಿರುವ ಆ ಮಹಾತ್ಮನನ್ನು ಎಳೆದುಕೊಳ್ಳುವ ಶಕ್ತಿಯು ಇಂದ್ರಿಯಗಳಿಗೆ ಎಲ್ಲಿಂದಬರಬೇಕು? ವೇದದಲ್ಲಿ ಒಂದು ರೂಪಕವನ್ನು ಕಲ್ಪಿಸಿರುತ್ತದೆ. ಅದು ಹೇಗೆಂದರೆ." ಈ ದೇಹದ ಯಜ ಮಾನನಾದ ಜೀವಾತ್ಮನೇ ಒಬ್ಬ ರಥಿಕನಾಗಿರುವನು. ಬುದ್ಧಿಯೆಂಬುವದೇ ಇವನಿಗೆ ಸಾರ ಥ್ಯವನ್ನು ಮಾಡುವದು. ಇವರಿಗೆ ಕುಳಿತುಕೊಳ್ಳಲಿಕ್ಕೆ ರಥಮಾತ್ರ ಬೇಕಾಯಿತಷ್ಟೆ? ಆ ರಥವೆಂದರೆ ದೇಹವು. ರಥಕ್ಕೆ ಹೂಡಿದ ಕುದುರೆಗಳೇ ಇಂದ್ರಿಯಗಳು ಇನ್ನು ಈ ಕುದುರೆ ಗಳನ್ನು ಬಂಧನಮಾಡುವದಕ್ಕೆ ಬೇಕಾದ ಹಗ್ಗವು ಮನಸ್ಸಾಗಿರುವದು." ಇಲ್ಲಿ ಇಂದ್ರಿಯ

--೧೦--

ಗಳಿಗೆ ಅಶ್ವದೃಷ್ಟಾಂತವನ್ನು ಕೊಟ್ಟಿರುವದರಿಂದ, ಅಶ್ವಗಳ ಹಾಗೆ ಇಂದ್ರಿಯಗಳು ವಿಚಿತ್ರ ಗತಿಯುಳ್ಳವೆಂಬ ಅಭಿಪ್ರಾಯವಾಗುತ್ತದೆ. ಇಂಥ ಅಶ್ವಸಮಾನಗಳಾದ ಇಂದ್ರಿಯಗಳು ನಮ್ಮನ್ನು ಎಲ್ಲಿಯಾದರೂ ಒಂದು ಗರ್ತದಲ್ಲಿ ಕೆಡವದ ಹಾಗೆ ಬಿಗಿದು ಹಿಡಿಯುವದಕ್ಕೆ ವಿಚಾರ ಶಕ್ತಿಯುಳ್ಳ ಮನಸ್ಸೇ ರಜ್ಜುವಾಗಿರುವದೆಂಬ ತಾತ್ಪರ್ಯವು, ವಿವೇಕಿಯಾದವನು ವಿಚಾರಯುಕ್ತವಾದ ಮನಸ್ಸಿನ ಸಹಾಯದಿಂದ ಇಂದ್ರಿಯಗಳನ್ನು ವಿಷಯಗಳ ಕಡೆಗೆ ಹೋಗದಂತೆ ಇಟ್ಟುಕೊಂಡರೆ, ಅವನಿಗೆ ಸದ್ಗತಿಯಾಗುತ್ತದೆಂಬ ಭಾವಾರ್ಥವು, ಬೃಹದಾ ರಣ್ಯಕ ಶ್ರುತಿಯಲ್ಲಿ ವ್ಯಕ್ತವಾಗಿರುವದು. ಇಂದ್ರಿಯಗಳಿಗೆ ಗ್ರಹವೆಂತಲೂ, ವಿಷಯಗಳಿಗೆ ಅತಿಗ್ರಹವೆಂತಲೂ, ಅಲ್ಲಿ ಹೆಸರು ಕೊಟ್ಟಿರುವರು. "ಗೃಣ್ಣಂತಿ ಬಧ್ನಂತಿ ಪುರುಷಪಶೂ ನಿತಿ ಗ್ರಹಾಃ ಇಂದ್ರಿಯಾಣಿ” ಅಂದರೆ ಅವಿವೇಕಿಗಳಾದ ಪುರುಷರನ್ನು ಪಶುಗಳನ್ನಂತೆ ಕಟ್ಟಿಹಾಕುತ್ತವೆ, ತಮ್ಮ ಸ್ವಾಧೀನರನ್ನಾಗಿ ಮಾಡಿಕೊಳ್ಳುತ್ತವೆ ಎಂಬರ್ಥವು.ಅತಿಗ್ರಹ ಗಳೆಂದರೆ, ಇದಕ್ಕೂ ಹೆಚ್ಚಿನ ಗ್ರಹಗಳು ವಿಷಯಗಳು. ವಿಷಯಗಳಿದ್ದರೆಯೇ ಇಂದ್ರಿಯ

ಗಳ ಕೆಲಸವು ನಡೆಯುತ್ತದೆ, ಇಲ್ಲದಿದ್ದರೆ ಅವುಗಳಿಂದ ಯಾವಕಾರ್ಯವೂ ಆಗುವದಿಲ್ಲ.

ಈ ದೇಹವು ಭೂತಮಹಾಪಂಚಕದ ಸೂಕ್ಷ್ಮಾಂಶವಾಗಿದ್ದು, ಇದರೊಳಗಿನ ಅತಿ ಸೊಕ್ಷ್ಮಾಂಶಗಳೆಂದರೆ ಇಂದ್ರಿಯಗಳು. ದೇಹದಲ್ಲಿದ್ದ ಪಂಚಭೂತಗಳಿಗೆ ಹೊರಗಿನ ರೂಪ ಮುಂತಾದ್ದರ ಸಂಬಂಧದ ಹೊರತು ಪೋಷಣವಿಲ್ಲ. ಹೇಗೆಂದರೆ ಒಳಗೆ ಪ್ರಾಣ ರೂಪವಾದ ವಾಯುವು ಇರುತ್ತದಷ್ಟೆ? ಇದಕ್ಕೆ ಹೊರಗಿನ ವಾಯುವಿನ ಸಂಬಂಧವಿಲ್ಲ ದಂತಾದರೆ, ಪ್ರಾಣವಾಯುವು ನಿಲ್ಲುವದೇ ಇಲ್ಲ. ಈ ಪ್ರಾಣವಾಯುವು ಯಾವಾಗಲೂ ಒಳಗಿನ ದುರ್ಗಂಧವನ್ನೆಲ್ಲ ಮುಖದ್ವಾರದಿಂದ ಹೊರಗೆ ಹಾಕಿ, ಹೊರಗಿನ ನಿರ್ಮಲವಾದ ವಾಯುವನ್ನು ಒಳಗೆ ಒಯ್ಯುತ್ತಲಿರುತ್ತದೆ. ಇದೊಂದೇ ಈ ವಾಯುವಿನ ಕಾರ್ಯವಿ ರುತ್ತದೆ. ಈ ಒಳಗಿರುವ ವಾಯುವಿನ ಇಂದ್ರಿಯವು ತ್ವಗಿಂದ್ರಿಯವಿರುವದು. ಇದು ಭೂತಸೂಕ್ಷ್ಮವಾದ ದೇಹದ ವಾಯುವಿನ ಸೂಕ್ಷ್ಮಾಂಶವಿರುವದು. ವಾಯುವಿನ ಗುಣವು ಸ್ಪರ್ಶವಿರುವುದರಿಂದ ಇದು ಯಾವಾಗಲೂ, ಸ್ಪರ್ಶವನ್ನೇ ಹಿಡಿಯುತ್ತದೆ; ಮತ್ತು ಇದಕ್ಕೆ ಮುಖ್ಯವಾಗಿ ಹೊರಗಿನ ವಾಯುವಿನ ಸ್ಪರ್ಶವು ಬೇಕಾಗಿರುತ್ತದೆ ಅದಿಲ್ಲದಿದ್ದರೆ ಈ ದೇಹವೇ ನಿಲ್ಲುವದಿಲ್ಲ. ತ್ವಗಿಂದ್ರಿಯವು ಈ ದೇಹದಮೇಲೆ ಮತಾಯಿಸಿದಂಥ ಚರ್ಮ ವನ್ನೆಲ್ಲ ವ್ಯಾಪಿಸಿಕೊಂಡಿರುತ್ತದೆ. ಅದ,ನೇತ್ರ ಮುಂತಾದ ಇಂದ್ರಿಯಗಳಂತೆ ಒಂದೊಂದೇ ಪ್ರದೇಶದಲ್ಲಿಲ್ಲ. ಈ ದೇಹದ ಚರ್ಮಕ್ಕೆ ತುಂಬಾ ಛಿದ್ರಗಳುಂಟು. ಆ ಛಿದ್ರಗಳ ಲ್ಲೆಲ್ಲ ಸಣ್ಣ ಸಣ್ಣ ರೋಮಗಳೂ ದೊಡ್ಡ ದೊಡ್ಡ ರೋಮಗಳೂ ತುಂಬಿರುವವು. ದೇಹ ದಲ್ಲಿರುವ ವ್ಯಾನವೆಂಬ ವಾಯುವು ಒಳಗಿನ ಕಶ್ಮಲವನ್ನೆಲ್ಲ ಬೆವರಿನ ರೂಪದಿಂದ ಹೊರಗೆ ಹಾಕುತ್ತದೆ . ಅದನ್ನೆಲ್ಲ ಹೊರಗಿನ ವಾಯುವು ಆರಿಸಿ ಬಿಡುತ್ತದೆ . ಈ ಕ್ರಿಯೆಯೃ ಯಾವಾಗಲೂ ನಡೆದಿರುತ್ತದೆ. ಹೀಗಾಗದಿದ್ದರೆ, ದೇಹದ ಪೋಷಣವೇ ಆಗಲಾರದು. ಈ ತ್ವಗಿಂದ್ರಿಯದ ಸಂಪೂರ್ಣ ನಾಶವಾದರೆ ಚರ್ಮವೆಲ್ಲ ಒಣಗಿ ರಕ್ತವೇ ಓಡಾಡುವ ವದಿಲ್ಲ. ಇಂಥ ಪ್ರಸಂಗದಲ್ಲಿ ಮನುಷ್ಯನು ಬದುಕುವದೇ ಇಲ್ಲ .



-೧೧-

ಇತರ ಇಂದ್ರಿಯಗಳು ಈ ದೇಹದ ಒಂದೊಂದು ಪ್ರದೇಶದಲ್ಲಿರುವದರಿಂದ, ಇವುಗ ಳೊಳಗೆ ಒಂದೊಂದರ ನಾಶವಾದರೆ ಅಷ್ಟೊಂದು ಹಾನಿಯಾಗುವದಿಲ್ಲ. ಆಯಾ ಇಂದ್ರಿ ಯಗಳಿಂದ ಆಗತಕ್ಕ ವಿಷಯಜ್ಞಾನವು ಮಾತ್ರ ಆಗುವದಿಲ್ಲ . ನೇಂದ್ರಿಯವಿಲ್ಲದಿ ದ್ದರೆ ಅಥವಾ ಶ್ರೋತ್ರೇಂದಿಯವಿಲ್ಲದಿದ್ದರೆ ಆ ದ್ವಾರಗಳಿಂದಾಗುವ ಸತ್ಯಕ್ಕೆ ಹಾನಿಯಾಗಿ, ಮನುಷ್ಯನು ಇಹ-ಪರಗಳೆರಡಕ್ಕೂ ದೂರಾಗುತ್ತಾನೆ . ಇಷ್ಟೊಂದು ಇಂದ್ರಿಯಗಳ ಮಹತ್ವವಿರುತ್ತದೆ. ತೇಜಸ್ಸೆಂಬ ಭೂತದ ಸೂಕ್ಷ್ಮಾಂಶವೆನಿಸುವ ನೇತ್ರಂದ್ರಿಯವು, ಹೊರಗಿನ ಸೂರ್ಯ ಮುಂತಾದ ವಸ್ತುಗಳ ಪ್ರಕಾಶವನ್ನು ಗ್ರಹಿಸಿ ಒಳಗೆ ಒಯ್ಯು ತದೆ. ಈ ಪ್ರಕಾಶವು ಒಳಗೆ ಹೋಗಿ ಅಂತಃಪ್ರಕಾಶದಲ್ಲಿ ಕೂಡಿ ರಕ್ತವಾಹಿನಿಗಳ ಲ್ಲೆಲ್ಲ ಸಂಚರಿಸುತ್ತ, ಅಲ್ಲಿರುವ ಸಣ್ಣ ಸಣ್ಣ ದುಷ್ಟ ಕೃಮಿ-ಕೀಟಾದಿಗಳನ್ನು ನಾಶಗೊ ಳಿಸಿ ಒಂದು ಪ್ರಕಾರದ ಪುಷ್ಟಿಯನ್ನೂ, ಸುಖವನ್ನೂ, ಸಾಮರ್ಥ್ಯವನ್ನೂ ಸಂಪಾದಿಸಿ ಕೊಡುವದಲ್ಲದೆ ಮನುಷ್ಯನನ್ನು ಸತೇಜನನ್ನಾಗಿಯೂ , ಕರ್ತವ್ಯಕ್ಷಮನನ್ನಾಗಿಯೂ ಮಾಡುತ್ತದೆ. ಈ ಹೊರಗಿನಪ್ರಕಾಶವುನಮಗೆ ಸರ್ವಥಾ ತಗಲದಿದ್ದರೆ ನಾವು ಉಳಿ ಯುವ ಸಂಭವವೇ ಇಲ್ಲ. ಕತ್ತಲೆಕೋಣೆಯ ಶಿಕ್ಷೆಯು ಎಷ್ಟು ಕಠಿಣವಾದದ್ದೆಂಬದನ್ನು ನಾವುಬರೆಯುವ ಕಾರಣವಿಲ್ಲ. ಸೂರ್ಯನ ಪ್ರಕಾಶವು ತಾಪಕಾರಕವಾಗಿದ್ದರೂ, ನೇತ್ರ ದ್ವಾರದಿಂದ ಒಳಗೆ ಹೋದರೆ ಸೌಮ್ಯವಾಗುತ್ತದೆ. ಇನ್ನು ಹೊರಗಿನ ಶಬ್ದವು ನಮ್ಮ ಶ್ರವಣೇಂದ್ರಿಯಕ್ಕೆ ಬೀಳದೆ ಹೋದರೆ ನಮಗೆ ವ್ಯವಹಾರಜ್ಞಾನವೇನೂ ಆಗದೆ, ನಾವು ಮೂಕರಾಗಿಹೋಗುತ್ತೇವೆ. ನಾವು ಇದ್ದೂ ಇಲ್ಲದಂತಾಗುತ್ತೇವೆಂಬುವದು ಗೊತ್ತಿದ್ದ ಸಂಗತಿಯಾಗಿರುವದು . ನಮ್ಮ ಘ್ರಾಣೇಂದ್ರಿಯವು ಗಂಧವನ್ನು ಗ್ರಹಿಸದಿದ್ದರೆ ನಮಗೆ ಕೆಟ್ಟದ್ದು, ಕೊಳತದ್ದು, ಹಳಸಿದ್ದು, ಯಾವದೂ ತಿಳಿಯದೆ ಸಿಕ್ಕ ಸಿಕ್ಕ ಪದಾ ರ್ಥಗಳನ್ನು ತಿಂದು ನಮ್ಮ ದೇಹದ ಹಾನಿಯನ್ನು ನಾವೇ ಮಾಡಿಕೊಳ್ಳುವ ಪ್ರಸಂಗವು ಬಂದೀತು. ರಸನೇಂದ್ರಿಯದ ಮಾತೂ ಹಾಗೆಯೇ ಸರಿ. ಇದರಂತೆ ಪಂಚಕರ್ಮೇ೦ ದ್ರಿಯಗಳಲ್ಲಿಯ ಯಾವದೊಂದು ಇಂದ್ರಿಯದ ನಾಶವಾದರೆ, ಆ ಇಂದ್ರಿಯದ ವ್ಯಾಪಾ ರವು ನಿಂತು ಹೋಗಿ ದೇಹಕ್ಕೆ ಅಪಾಯವು ತಟ್ಟುವದು .

೯ ನೇ ಪ್ರಕರಣ - ವಿಷಯಗಳು,

याज्यं सुखं विषयसंगमजन्म पुंसाम् ।

ಅಂದರೆ ವಿಷಯಗಳು ಪ್ರಾಣಿಗಳನ್ನು ಬಂಧಿಸುವ ವಸ್ತುಗಳೆಂದು ಅರ್ಥವಾಗುತ್ತದೆ. ಈ ವಿಷಯಗಳು ಮನಸ್ಸಿನಿಂದೊಡಗೂಡಿದ ಇಂದ್ರಿಯಗಳಿಗೆ ಗೋಚರವಾದರೆ ಸಾಕು, ಪ್ರಾಣಿಗಳನ್ನು ಎಳೆದೇ ಬಿಡುತ್ತವೆ. ಆಗ ಸಹಸಾ ಇವನ್ನು ಉಪಭೋಗಿಸಲೇಬೇಕೆಂಬ ಇಚ್ಛೆಯು ಪ್ರಾಣಿಮಾತ್ರಕ್ಕೆ ಹುಟ್ಟುತ್ತದೆ. ವಿಷಯಗಳಲ್ಲಿ ದೇವರು ಒಂದು ವಿಲಕ್ಷಣವಾದ ಆಕರ್ಷಣಶಕ್ತಿಯನ್ನಿಟ್ಟಿರುವನು. ಇದರಿಂ