Pages   (key to Page Status)   


ರವಿಯ ಕಾಳಗವ ಗೆಲಿದು
ಒಂಬತ್ತು ಬಾಗಿಲ ಮುರಿದು
ಅಷ್ಟಧವಳಾರಮಂ ಸುಟ್ಟು
ಮೇಲುಪ್ಪರಿಗೆಯ ಮೆಟ್ಟಿ
ಅಲ್ಲಅಹುದು
ಉಂಟುಇಲ್ಲ
ಬೇಕುಬೇಡೆಂಬ ಆರರಿತಾತನೆ ಗುರು ತಾನೆ ಬೇರಿಲ್ಲ. ದ್ವಯಕಮಳದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.