ಪ್ರಮುಖ ಪಾತ್ರಗಳು
(ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಅನುಕ್ರಮದಲ್ಲಿ)
ನಾರಣಕ್ರಮಿತ- ರಾಜಪುರೋಹಿತ, ಬಿಜ್ಜಳನ ಧರ್ಮಾಧಿಕರಣದ ಮುಖ್ಯಾಧಿಕಾರಿ.
ಅಗ್ಗಳ- ಪಂಡಿತಕವಿ, ಚಾಲುಕ್ಯರಾಣಿ ಕಾಮೇಶ್ವರಿಯ ಮನೆಹೆಗ್ಗಡೆ.
ಬಿಜ್ಜಳ- ಮಂಗಳವೇಡೆಯ ಮಹಾಮಂಡಲೇಶ್ವರ, ಚಾಲುಕ್ಯರಾಜ್ಯದ ಸರ್ವಾಧಿಕಾರಿ.
ಕರ್ಣದೇವ- ಬಿಜ್ಜಳನ ಸಹೋದರ; 'ರಾಜಗೃಹ'ದ ರಕ್ಷಕ.
ಜಗದೇಕಮಲ್ಲ- ಬಿಜ್ಜಳನು 'ರಾಜಗೃಹ'ದಲ್ಲಿ ಬಂಧನದಲ್ಲಿಟ್ಟಿರುವ ಚಾಲುಕ್ಯ ಅರಸು. ದಿವಂಗತ ನೂರ್ಮಡಿ ತೈಲಪನ ಸಹೋದರ.
ಬೊಮ್ಮರಸ- ಚಾಲುಕ್ಯರಾಣಿ ಕಾಮೇಶ್ವರಿಯ ಪ್ರತಿನಿಧಿಯಾಗಿ ಚಾಲುಕ್ಯ ರಾಜತ್ವದ ಪುನಃಪ್ರತಿಷ್ಠೆಗಾಗಿ ಸಂಚು ನಡೆಸುತ್ತಿರುವ ಸಾಮಂತ
ಬ್ರಹ್ಮಶಿವ ಪಂಡಿತ- ಬೊಮ್ಮರಸನ ಕಾರ್ಯದರ್ಶಿ.
ಮಾಚಿದೇವ- ವೃದ್ಧ ಶರಣ.
ಚೆನ್ನಬಸವ- ಬಸವೇಶ್ವರನ ಸೋದರಳಿಯ. ಪ್ರಸ್ತುತದಲ್ಲಿ ಅನುಭವಮಂಟಪದ ಮುಖ್ಯ ಕಾರ್ಯದರ್ಶಿ.
ಸಕಲೇಶಮಾದರಸ, ಅನುಭವಮಂಟಪದ ಅಧ್ಯಕ್ಷ.
ಮಂಚಣ- ಬಿಜ್ಜಳನ ವೃದ್ಧ ಮಂತ್ರಿ
ನಾಗಲಾಂಬೆ- ಚೆನ್ನಬಸವನ ತಾಯಿ. ಬಸವೇಶ್ವರನ ಅಕ್ಕ.
ನೀಲಲೋಚನೆ- ಬಿಜ್ಜಳನ ಸಹೋದರಿ. ಬಸವೇಶ್ವರನ ಪತ್ನಿ.
ಸಂಗಮನಾಥ- ಬಸವೇಶ್ವರನಿಗೆ ಗಂಗಾಂಬಿಕೆಯಲ್ಲಿ ಹುಟ್ಟಿದ ಮಗ.
ಕಾಮೇಶ್ವರಿ- ನೂರ್ಮಡಿ ತೈಲಪನ ವಿಧವಾರಾಣಿ.
ಪ್ರೇಮಾರ್ಣವ- ಕಾಮೇಶ್ವರಿಯ ಕ್ಷೇತ್ರಜ ಪುತ್ರ.
ಸೋಮೇಶ್ವರ- ಬಿಜ್ಜಳನ ಹಿರಿಯ ಮಗ.
ಉಷಾವತಿ- ಕಾಮೇಶ್ವರಿಯ ಆಪ್ತ ದಾಸಿ.
ಮಧುವರಸ- ಬಿಜ್ಜಳನ ಮಂತ್ರಿ.