ಕಂ|| ವಿಜಿಗೀಷುವೃತ್ತಿಯಿಂ ಭೂ
ಭುಜರಂ ಬೆಸಕೆಯಿಸಿ ಕೊಂಡು. ಭೂಮಂಡಲಮಂ||
ಭುಜದಂಡದೊಳಿರಿಸಿದನೇ
ನಜಯ್ಯಭುಜಬಲನೋ ವಿಜಯರಥ ನರನಾಥಂ||೧೨೫||
ಆ ನರೇಂದ್ರನ ನಂದನಂ--
ಕಂ|| ಜಿತರಿಪು, ಸುರೇಂದ್ರಮನ್ಯು
ಕ್ಷಿತಿಪತಿ ರಿಪುನೃಪಕುಲಾಂಗನಾಜನಮನ್ಯೂ||
ದೃತಬಾಷ್ಪ ಸಲಿಲಧಾರಾ
ಪ್ರತಾನದಿಂ ಕೀರ್ತಿವಲ್ಲಿಯಂ ಬೆಳೆಯಿಸಿದಂ||೧೩೬||
ಆ ವಿಶದಕೀರ್ತಿಗೆ ಕೀರ್ತಿಶ್ರೀಯೆಂಬಳರಸಿಯಾಗೆ--
ಕಂ|| ಅ೦ದಮದಟಲೆಯೆ ಮನಸಿಜ
ನಂದಮನಳವಳವಿಗಳೆದು ಕೇಸರಿಯಳವ೦
ಬೆಂದಗುಳೆ ವಜ್ರಬಾಹು ಪು
ರಂದರರೆಂಬಿರ್ವರವರ್ಗೆ ನಂದನರಾದರ್||೧೩೭||
ಕಡಿದು ವಿಪಕ್ಷಮನಿಂದ್ರಂ
ಕಡಿದಂತೆ ಕುಲಾದ್ರಿಪಕ್ಷಮಂ ತೋಳ್ವಲಮಂ||
ಪಡೆದಂ| ಪರಪ್ರತಾಪಂ
ಪೊಡರ್ಪುಗಿಡುವಂತೆ ವಜ್ರಬಾಹು ಕುಮಾರಂ||೧೩೮||
ಪರಪುರಮನುರಿಪಿ ದೆಸೆಗುರಿ
ವರಿವಿನೆಗಂ ತನ್ನ ತೇಜಮರಿನೃಪವದನಾಂ
ಬುರುಹಂ ಕರಿಂಕುವರಿದಿರೆ
ಪುರಂದರಂ ನೃಪಪುರಂದರಂ ಪೊಗಿಳಿಸಿದಂ||೧೩೯||
ಮಗನೊರ್ವಂ ತನಗಿರ್ವರ್
ಮಗಂಗೆ ಸುತರಾಗೆ| ಮೂರುಕಣ್ಣೆನೆ ಮೂರುಂ||
ಜಗಮಂ ತನಗೆರಗಿಸಿದಂ
ತ್ರಿಗುಣಿಸೆ ತನ್ನೊಳ್ಮನೋರಥಂ ವಿಜಯರಥಂ||೧೪೦||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೫
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಥಮಾಶ್ವಾಸಂ
೨೫
![](http://upload.wikimedia.org/wikipedia/commons/thumb/2/27/%E0%B2%B0%E0%B2%BE%E0%B2%AE%E0%B2%9A%E0%B2%82%E0%B2%A6%E0%B3%8D%E0%B2%B0_%E0%B2%9A%E0%B2%B0%E0%B2%BF%E0%B2%A4_%E0%B2%AA%E0%B3%81%E0%B2%B0%E0%B2%BE%E0%B2%A3%E0%B2%82.djvu/page115-1024px-%E0%B2%B0%E0%B2%BE%E0%B2%AE%E0%B2%9A%E0%B2%82%E0%B2%A6%E0%B3%8D%E0%B2%B0_%E0%B2%9A%E0%B2%B0%E0%B2%BF%E0%B2%A4_%E0%B2%AA%E0%B3%81%E0%B2%B0%E0%B2%BE%E0%B2%A3%E0%B2%82.djvu.jpg)