ಬಿನ್ನಹವನ್ನು ಲಕ್ಷ್ಮಣನು ಮನ್ನಿಸಿದ ಕಾರಣ ಶಾಪ ಕೊಡುವ ಪ್ರಸಂಗ ಉಂಟಾಗಲಿಲ್ಲ. ತನ್ನ ತಂದೆಯು ದಶರಥ ರಾಜನಿಗೆ ಶಾಪ ಕೊಡಬಹುದೆಂಬ ಭೀತಿಯು ಶ್ರವಣ ಕುಮಾರನಿಗೆ ಉಂಟಾಯಿತು. ತಮಗಿದ್ದ ಒಬ್ಬನೇ ಮಗನ ಸಾವಿನ ವಾರ್ತೆಯನ್ನು ಕೇಳಿ ಶ್ರವಣಕುಮಾರನ ತಂದೆಯು ಶಾಪ ಕೊಡಬಹುದಿತ್ತು; ಈ ಶಾಪವು ದಶರಥನಿಗೆ ಬರಬಾರದೆಂದು ಇಚ್ಚಿಸಿ ಒಂದು ಉಪಾಯವನ್ನು ಶ್ರವಣನು ಸೂಚಿಸಿದನು.
ಪಿತುಸ್ತ್ವಮೇವ ಮೇ ಗತ್ವಾ ಶೀಘ್ರಡೂಚಕ್ಷ ರಾಘವ ||೪೩||
ತಂ ಪ್ರಸಾದಯ ಗತ್ವಾಂ ತ್ವಂ ನ ತ್ವಾಂ ಸಂಕುಪಿತಃ ತಪೇತ್ ||೪೫||
“ಹೇ ರಘುವಂಶಜನೇ, ಕೂಡಲೇ ನೀನು ನನ್ನ ತಂದೆಯ ಬಳಿ ಹೋಗಿ ಈ ಸುದ್ದಿಯನ್ನು ತಿಳಿಸು! ದುಃಖಕೋಪಗಳಿಂದ ಶಾಪವನ್ನು ನುಡಿಯದಂತೆ ಆತನನ್ನು ಮನ್ನಿಸು.”೧೬
ಪ್ರತಿಶಾಪ
ಶಾಪ ಕೊಡಲು ಅನೇಕ ಕಾರಣಗಳಿರಬಹುದು; ಒಂದು ಶಾಪವು ಇನ್ನೊಂದಕ್ಕೆ ಮೂಲ ಕಾರಣವಾಗಬಹುದು. ಶಾಪಕ್ಕೆ ಪ್ರತ್ಯುತ್ತರವಾಗಿ ಕೊಟ್ಟ ಶಾಪವೆಂದರೆ ಪ್ರತಿಶಾಪ! ಈ ರೀತಿ ಪ್ರತಿಶಾಪಗಳನ್ನು ಕೊಡುವ ಸಂದರ್ಭಗಳು ಎರಡಾವರ್ತಿ ರಾಮಾಯಣದಲ್ಲಿ ಬಂದಿವೆ. ಒಂದು ಸಂದರ್ಭದಲ್ಲಿ ಪ್ರತಿಶಾಪವನ್ನು ಕೊಡಲಾಗಿದೆ; ಎರಡನೇ ಪ್ರಸಂಗದಲ್ಲಿ ಅದನ್ನು ತ್ಯಜಿಸಲಾಗಿದೆ. ವಸಿಷ್ಠನು ಕೊಟ್ಟ ಶಾಪದಿಂದ ಈ ಎರಡು ಪ್ರಸಂಗಗಳು ಉಂಟಾಗಿವೆ. ಬ್ರಹ್ಮರ್ಷಿಶ್ರೇಷ್ಠ ವಸಿಷ್ಠ ಋಷಿಗಳಿಗೆ ನಿಮಿರಾಜನು ತನ್ನ ದೀರ್ಘಯಾಗದ ಪೌರೋಹಿತ್ಯವನ್ನು ಮೊದಲು ಕೊಟ್ಟಿದ್ದನು. ವಸಿಷ್ಠರು, ಈ ಮೊದಲೇ ಇಂದ್ರನ ಪೌರೋಹಿತ್ಯವನ್ನು ಸ್ವೀಕರಿಸಿದ್ದುದರಿಂದ ಕೂಡಲೇ ನಿಮಿರಾಜನಿಗೆ ತಮ್ಮ ಒಪ್ಪಿಗೆಯನ್ನು ಕೊಡುವಂತಿರಲಿಲ್ಲ. ಅವರು ತುಸು ಸಮಯ ಕಾಯಬೇಕೆಂದು ನಿಮಿರಾಜನಿಗೆ ತಿಳಿಸಿದರು. ಆಗ ನಿಮಿರಾಜನು ಗೌತಮರಿಂದ ತನ್ನ ಯಾಗವನ್ನು ಪೂರೈಸಿದನು. ಈ ವೃತ್ತಾಂತವನ್ನು ಅರಿತ ವಸಿಷ್ಠರು ಕೋಪಗೊಂಡರು. ರಾಜನಿಗೆ ಈ ಬಗ್ಗೆ ವಿಚಾರಿಸಬೇಕೆಂದು ವಸಿಷ್ಠರು ಅಲ್ಲಿಗೆ ಬಂದಾಗ ರಾಜನು ನಿದ್ರಿಸುತ್ತಿದ್ದುದರಿಂದ
೧೬. ಅಯೋಧ್ಯಾಕಾಂಡ, ೬೩.