ಕೆಂಡಗಣ್ಣಿನ ಕೋಪದಂಡಲೆಯೊಳತಿ ಕ್ರೋಧ
ಗೊಂಡು ಹೂಂಕಾರದಲಿ ಡೆಂಡಣಿಸುತ ಸಹಾಯ
ಮಂಡಲಕೆ ಬಂದು ಬ್ರಹ್ಮಾಂಡ ಬಿರಿದೊಡೆವಂತೆ ಖಂಡೆಯವ ಝಳಪಿಸುತಲಿ
ಕೆಂಡ ಗಜರಾಕ್ಷಸನ ಕಂಡು ವೇಗದೊಳೈದಿ
ತುಂಡುಗಡಿದಾ ಶಿರವ ಕೊಂಡೊಯ್ದು ಮಲೆತವರ
ಗಂಡ ನಿನಗಿದಿರುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೨೦
‖
ವರಚಲುವ ಸದ್ಗುಣವನೊರೆದೊರೆದು ಬೋಧಿಸಲು
೩ಹರನೆ೩ ನಿನಗಿಂದಾರು ಪಿರಿಯರಿಲ್ಲದರಿಂದೆ
ಕೊರಳೊಳಗೆ ಬಗೆಬಗೆಯ ಶಿರಮಾಲೆ೪ಗಳ೪ ತಾಳ್ದೆ ಕರಿದೊಗಲಪೊರ್ದೆಯಭವ
ಉರಗನಾಭರಣವನು ಧರಿಸಿಕೊಂಡೆಲೆ ದೇವ
ಸಿರಿಯಿರಲು ಮರುಳಂತೆ ತಿರಿದುಂಡೆ ಸತಿಯನಾ
ದರೆ ಬೇಡಿದರಿಗಿತ್ತೆ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೨೧ ‖
ಕಡುಮೋಹದಿಂದೆ ಕೈವಿಡಿದು ರಕ್ಷಿಸಿಕೊಂಬ
ಒಡೆಯರೆಂಬುವರಿಲ್ಲ ಅಡಿಗಡಿಗೆ ಬಣ್ಣಿಸುವ
ಪಡೆದವರು ಮುನ್ನಿಲ್ಲದೊಡೆ ಶಿರವ ಕುಂತಳವು ತೊಡರಿ ನಿಡುಜಡೆಯಾದವು
ಉಡಿಗೆ ಪುಲಿಚರ್ಮ ಮೈಗಿಡಿವಿಡಿದ ಬೂದಿ ಕ
ಪ್ಪಡರಿತಿದನೇಂ ಪೇಳ್ವೆ ಬಿಡದೆ ಕರತಳದಲ್ಲಿ
ಪಿಡಿದೆ ಶಿರಪಾತ್ರೆಯನು ನಿಜಲಿಂಗ ಭವಭಂಗ ಶರಣಜನವರದ ಜಯತು ‖
೨೨ ‖
ಸಿರಿವಂತನೆನಲು ಭಿಕ್ಷವ ಬೇಡಿದೆಲೆ ದೇವ
ಸಿರಿಹೀನನೆನಲು ಮೂಲೋಕದೊಡೆಯನು ನೀನು
ಧರಣೀಶನೆನಲು ಬಲಿಸುತನ ೧ದ್ವಾರವ೧ ಕಾಯ್ದೆ ಬಡವನೆನಲಪ್ರತಿಮನು
ಹಿರಿಯನೆಂಬೆನೆ ಕಲ್ಲಲಿಡಿಸಿಕೊಂಡೆಲೆ ದೇವ
ಕಿರಿಯನೆಂ೨ದೆನಲು ದೇವಾಧಿದೇವೇಶ೨ ನಿ
ಪುಟ:ಶತಕ ಸಂಪುಟ.pdf/೧೦೭
ಈ ಪುಟವನ್ನು ಪರಿಶೀಲಿಸಲಾಗಿದೆ
೬೭
![](http://upload.wikimedia.org/wikipedia/commons/thumb/a/ac/%E0%B2%B6%E0%B2%A4%E0%B2%95_%E0%B2%B8%E0%B2%82%E0%B2%AA%E0%B3%81%E0%B2%9F.pdf/page107-829px-%E0%B2%B6%E0%B2%A4%E0%B2%95_%E0%B2%B8%E0%B2%82%E0%B2%AA%E0%B3%81%E0%B2%9F.pdf.jpg)