ಆಸಹ್ಯವಾಗಿತ್ತು.
"ಎನಿದು ಕಂಠಿ ? ಕಂಠಿ ! ಕಂಠಿ !"
ಆತ ಒಳಬಂದೊಡನೆ ಬಾಗಿಲಿಗೆ ಅಗಣಿತಗಲಿಸಿದೆ.
ಶ್ರೀಕಂಠ ಸೋಫಾದ ಮೇಲೆ ಬಿದ್ದುಕೊಂಡು ನನ್ನನ್ನೆ ಬಿರಬಿರನೆ ನೋಡಿದ.v
"ಕಂಠಿ!ಏನೋ ಇದು? ಏನಾಯ್ತು ಕಂಠಿ?"
ನಾನು ಆತನ ಭುಜ ಹಿಡಿದು ಕುಲುಕಿದೆ.
"ದೀಪ.....ದೀಪ ಚಂದ್ರೂ....ದೀಪ ಆರ್ಸು...."
ಆತ ತೊದಲುತಿದ್ದ.
ನಾನು ದೀಪ ಆರಿಸಿ, ಅವನ ಬಳಿಯಲ್ಲೆ ಕುಳಿತು, ಆತನ ಮೈದಡವಿದೆ.
"ಕಂಠಿ! ಕಂಠಿ!"
ತಡೆದು ತಡೆದು ಸಂಕಟಪಟ್ಟುಕೊಳ್ಳುತ್ತಾ ಬಿಸಿಯುಸಿರು ಬಿಡುತ್ತಾ ಆತ ಏನನ್ನೋ ಹೇಳಲೆತ್ನಿಸುತ್ತಿದ.ಮಾತು ಹೊರಡಲಿಲ್ಲ.
ಕತ್ತಲೆಯಲ್ಲೆ ಎದ್ದು ಅಲಮಾರಿನ ಕದ ತೆರದು ಕೈಯಾಡಿಸಿದೆ. ಇಲ್ಲ,ಏನೂ ಇರಲಿಲ್ಲ ......
"ಚಂದ್ರೂ....ನೀ ನೀರು...." ಕತ್ತಲೆಯಲ್ಲಿ ತಡವುತ್ತ ಕೂಜೆಯನ್ನೆತ್ತಿ ಗ್ಲಾಸಿಗೆ ನೀರುಸುರಿದೆ. ......ಆ ನೀರು ಶ್ರಿಕಂಠಿ ನನ್ನು ಸ್ವಲ್ಪಮಟ್ಟಿಗೆ ಚೇತರಿಸಿತು.
"ಶಾರದಾ ಕಣೋ.....ಚಂದ್ರೂ....ಶಾರದಾ__"
"ಹೇಳು ಕಂಠಿ."
"ಶಾರದಾ ಸತ್ತೋದ್ಲು__"
ಆ ಮತನ್ನು ಹೊರಹಾಕಿ ಶ್ರಿಕಂಠಿ ಉಗುಳು ನುಂಗಿದ. ನನ್ನ ಹೃದಯದ ಬಡಿತ ನಿಂತಿತು__ಕ್ಷಣಕಾಲ . ನರನಾಡಿಗಳು ತಣ್ಣ ಗಾದುವು ಆಗ.
ಶಾರದಾ__
ಆದರೆ ಏನಾಗಿತ್ತು?