ಅಕಾಯನೆಂಬ ಜಂಗಮ ಮತ್ರ್ಯಕ್ಕೆ



Pages   (key to Page Status)   


ಅಕಾಯನೆಂಬ ಜಂಗಮ ಮತ್ರ್ಯಕ್ಕೆ ಬಂದು
ಎನ್ನ ಧನ್ಯನ ಮಾಡಲೆಂದು
ಸಕಲ ಧಾನ್ಯಗಳ ಪೂರ್ವಾಶ್ರಯವ ಕಳೆದು ಪ್ರಸಾದವೆಂದು ಹೆಸರಿಟ್ಟನು. ಆ ಜಂಗಮದ ಹಸ್ತದಲ್ಲಿ ಭಕ್ತಿ ಇಹುದು
ಆ ಜಂಗಮದ ಜಿಹ್ವೆಯಲ್ಲಿ ಪ್ರಸಾದ ಇಹುದು
ಆ ಜಂಗಮದ ದೇಹದಲ್ಲಿ ಜಂಗಮ ಇಹುದು. ಇಂತೀ ತ್ರಿವಿಧಪ್ರಸಾದವನಿಕ್ಕಿದ ಜಂಗಮಕ್ಕೆ ಶರಣೆಂದು ಶುದ್ಧನಾದೆನಯ್ಯಾ ಕೂಡಲಚೆನ್ನಸಂಗಮದೇವಾ.