Pages   (key to Page Status)   


ಅಗ್ನಿ ಮುಟ್ಟಲು ತೃಣ
ಭಸ್ಮವಾದುದನೆಲ್ಲರೂ ಬಲ್ಲರು. ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ. ಅಗ್ನಿ ಜಲವ ನುಂಗಿತ್ತು
ಜಲ ಅಗ್ನಿಯ ನುಂಗಿತ್ತು. ಪೃಥ್ವಿ ಎಲ್ಲವ ನುಂಗಿತ್ತು
ಆಕಾಶವನೆಯ್ದೆ ನುಂಗಿತ್ತು. ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ_ ತಿಳಿಯಬಲ್ಲಡೆ ಗುಹೇಶ್ವರನ ನಿಲವು ತಾನೆ !