Pages   (key to Page Status)   

ಅಜ್ಞಾನ ಹಿಂಗಿತ್ತು

ಅಹಂಕಾರವಡಗಿತ್ತು 
ಅರಿಷಡ್ವರ್ಗಂಗಳು ಹರಿಹಂಚಾದವು
ಅಷ್ಟಮದಂಗಳು ಪಟ್ಟಪರಿಯಾದವು
ದಶವಾಯುಗಳು ವಶವರ್ತಿಯಾದವು
ಇಂದ್ರಿಯಂಗಳು ಬಂಧನವಡೆದವು
ಮನೋವಿಕಾರ ನಿಂದಿತ್ತು. ಕೂಡಲಸಂಗಮದೇವಾ
ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ ನಿರ್ವಾಣದ ಸಹಜ ನಿಲವ ಕಂಡು
ನಮೋ ನಮೋ ಎನುತಿರ್ದೆನಯ್ಯಾ
ಪ್ರಭುವೆ.