ಆಚಾರ ಸನ್ನಹಿತವಾಗಿ ಬಂದಡೆ,



Pages   (key to Page Status)   


ಆಚಾರ ಸನ್ನಹಿತವಾಗಿ ಬಂದಡೆ
ಜಂಗಮ ಬೇರಲ್ಲದಿರ್ದಡೆ ಭೂತಪ್ರಾಣಿ ಎಂಬೆ. ಅರ್ತಿಯಲ್ಲಿ ಲಿಂಗವೆ ಜಂಗಮವೆಂದರಿದು ಮಾಡುವಲ್ಲಿ
ಭಕ್ತನಲ್ಲದಿರ್ದಡೆ ಫಲದಾಯಕನೆಂಬೆ. ಸ್ಥಾವರ ಜಂಗಮ ಒಂದೆ ಎನಬಲ್ಲಡೆ
ಶರಣ ಸಂಬಂಧಿ
ಅಲ್ಲದಿರ್ದಡೆ ಪೂಜಕನೆಂಬೆ. ಇಂತೀ ತ್ರಿವಿಧ ನಿರ್ಣಯದ ಸೋಂಕಿನ ಸುಖವ
ಗುಹೇಶ್ವರ ಲಿಂಗದಲ್ಲಿ ಬಸವಣ್ಣನೊಬ್ಬನೆ ಬಲ್ಲನು