ಇಷ್ಟಲಿಂಗಾರ್ಪಣವಾವುದು, ಪ್ರಾಣಲಿಂಗಾರ್ಪಣವಾವುದು, ಭಾವಲಿಂಗಾರ್ಪಣವಾವುದುಯೆಂದರೆ



Pages   (key to Page Status)   


ಇಷ್ಟಲಿಂಗಾರ್ಪಣವಾವುದು
ಪ್ರಾಣಲಿಂಗಾರ್ಪಣವಾವುದು
ಭಾವಲಿಂಗಾರ್ಪಣವಾವುದುಯೆಂದರೆ ಹೇಳಿಯೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಶರೀರವೆ ಸಮರ್ಪಣ. ಪ್ರಾಣಲಿಂಗಕ್ಕೆ ಮನವೆ ಸಮರ್ಪಣ. ಭಾವಲಿಂಗಕ್ಕೆ ತೃಪ್ತಿಯೆ ಸಮರ್ಪಣ. ಶರೀರವೆಂದರೆ ರೂಪು
ಮನವೆಂದರೆ ರುಚಿ
ತೃಪ್ತಿಯೆಂದರೆ ಸಂತೋಷ. ಈ ತೆರನನರಿದು ಲಿಂಗಕ್ಕೆ ಸಮರ್ಪಿಸಿ ಪ್ರಸಾದವ ಭೋಗಿಸಬಲ್ಲಾತನೇ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಿಯೆಂದು ಹೇಳಲ್ಪಟ್ಟಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.