೫೦

ಕರ್ನಾಟಕ ಗತವೈಭವ


೭ನೆಯ ಪ್ರಕರಣ


ಬಾದಾಮಿಯ ಚಾಲುಕ್ಯರ ವಂಶಾವಳಿ

ಜಯಸಿಂಹ
ರಾಜಸಿಂಹ, ರಣರಾಗ
೧. ಪುಲಿಕೇಶಿ, (೧ನೇ)
(ಸತ್ಯಾಶ್ರಯ, ರಣವಿಕ್ರಮ,)
=ದುರ್ಲಭಾದೇವಿ
( ೫೫೦)
↓------------
------------↓
೨. ಕೀರ್ತಿವರ್ಮ(೧ನೇ) ರಣಪರಾಕ್ರಮ ೩. ಮಂಗಳೇಶ, ರಣವಿಕ್ರಾಂತ
(೫೬೬-೫೯೭) (೫೯೭-೬೦೮)
↓------------
------------↓
೪. ಪುಲಿಕೇಶಿ(೨ನೇ) ಸತ್ಯಾಶ್ರಯ, ಕುಬ್ಜ ವಿಷ್ಣುವರ್ಧನ
(೬೦೯-೬೪೨) (೬೧೫-೬೩೩)
ಪೂರ್ವ ಚಾಲುಕ್ಯ ವಂಶ ಸ್ಥಾಪಕ
↓------------ ------------↓
ಆದಿತ್ಯವರ್ಮ ಚಂದ್ರಾದಿತ್ಯ ೫. ವಿಕ್ರಮಾದಿತ್ಯ(೧ನೇ) ರಣರಸಿಕ
=ವಿಜಯಮಹಾದೇವಿ (೬೫೫-೬೮೦)
(೬೫೫-೬೫೯)
೬. ವಿನಯಾದಿತ್ಯ, ರಾಜಾಶ್ರಯ (೬೮೦-೬೯೬)
೭. ವಿಜಯಾದಿತ್ಯ, ಸಮಸ್ತ ಭುವನಾಶ್ರಯ (೬೯೬-೭೩೩)
೮. ವಿಕ್ರಮಾದಿತ್ಯ(೨ನೇ)=ಲೋಕಮಹಾದೇವಿ (೭೩೩-೭೪೬).
೯. ಕೀರ್ತಿವರ್ಮ(೨ನೇ) (೭೪೬-೭೫೭)



೭ನೆಯು ಪ್ರಕರಣ – ಬಾದಾಮಿಯ ಚಾಲುಕ್ಯರು

೫೧


ಬಾದಾಮಿಯ ಚಾಲುಕ್ಯರು*
( ೫೫೦- ೭೫೭ )

ಚಾಲುಕ್ಯರೇ ಇಡೀ ಕರ್ನಾಟಕಕ್ಕೆ ಸಾರ್ವಭೌಮರಾಗಿ ಮೊದಲು ಆಳಿದ ಅರಸರು, ಈ ವಂಶದ ೯ ಜನ ಅರಸರು ಬಾದಾಮಿಯಲ್ಲಿ ಬಹು ವೈಭವದಿಂದ ಸುಮಾರು ೨೦೦ ವರ್ಷಗಳವರೆಗೆ ಆಳಿದರು. ಹಾರೀತ ಖುಷಿಯು ದೇವತೆಗಳಿಗೆ ಅರ್ಘ್ಯೋದಕವನ್ನು ಕೊಡುವಾಗ, ಅವನ ಚುಲಕದಿಂದ ಎಂದರೆ ಬೊಗಸೆಯೊಳಗಿಂದ ಒಬ್ಬ ವೀರಪುರುಷನು ಹುಟ್ಟಿದನಂತೆ, ಚಾಲುಕ್ಯರು ತಾವು ಆ ವೀರ ಪುರುಷನ ವಂಶಜರೆಂದು ಹೇಳಿಕೊಳ್ಳುತ್ತಾರೆ. ಆದುದರಿಂದ ಇವರಿಗೆ 'ಆಹಾರೀತ ಪುತ್ರ'ರೆಂದೆನ್ನುತ್ತಾರೆ. ಇವರ ಗೋತ್ರ ಮಾನವ್ಯ: ಕುಲದೇವತ ವಿಷ್ಣು ; ವಂಶ ಚಂದ್ರವಂಶ, ಇವರು ಮೊದಲು ಉತ್ತರದವರು. ನರ್ಮದೆಯನ್ನು ದಾಟಿ ಮೊದಲು ಬಂದವನು ಜಯಸಿಂಹನು ಇವನು ರಾಷ್ಟ್ರಕೂಟರ ಅರಸನಾದ ಇಂದ್ರನನ್ನು ಸೋಲಿಸಿ, ಮುಂದೆ ದಕ್ಷಿಣಕ್ಕೆ ಸಾಗಿ, ಕಂಚಿಯಲ್ಲಿರುವ ಪಲ್ಲವ ವಂಶದ ತ್ರಿಲೋಚನ ಪಲ್ಲವನೊಡನೆ ಕಾದಿದನು; ಆದರೆ ಆ ಯುದ್ಧದಲ್ಲಿ ತಾನೇ ಮಡಿದನು, ಆಗ, ಗರ್ಭಿಣಿಯಾಗಿದ್ದ ಅವನ ಹೆಂಡತಿಯು ವಿಷ್ಣು ಸೋಮಯಾಜಿಯೆಂಬ ಒಬ್ಬ ಬ್ರಾಹ್ಮಣನನ್ನು ಆಶ್ರಯಿಸಿದಳು. ಅಲ್ಲಿ ಅವಳಿಗೆ ರಾಜಸಿಂಹನೆಂಬ ಮಗನು ಹುಟ್ಟಿದನು. ಅವನು ದೊಡ್ಡವನಾದ ಬಳಿಕ ಪಲ್ಲವರೊಡನೆ ಕಾದಿ, ಅವರನ್ನು ಸೋಲಿಸಿ, ಆ ವಂಶದ ರಾಜಪುತ್ರಿಯನ್ನು ಮದುವೆಯಾದನು. ಆದರೆ, ಅವನ ಇತಿಹಾಸವು ನಮಗೆ ವಿಶೇಷವಾಗಿ ತಿಳಿದಿಲ್ಲ. ಇವನ ಮಗನಾದ ಪುಲಿಕೇಶಿಯೇ ಈ ಚಾಲುಕ್ಯ ವಂಶದ ಮೊದಲನೆಯ ಪ್ರಖ್ಯಾತ ರಾಜನು, ಇವನ ರಾಜಧಾನಿಯು ಮೊದಲು 'ಇಂದುಕಾಂತ' ಅಥವಾ ಅಜಂತೆಯಲ್ಲಿದ್ದಿತು, ಆದರೆ ಮುಂದೆ ಈ ಪುಲಿಕೇಶಿಯು ಪಲ್ಲವರನ್ನು ಬಗ್ಗು ಬಡಿದು ವಾತಾಪಿ, ಅಥವಾ ಬಾದಾಮಿಯನ್ನು ಅವರಿಂದ ಸೆಳೆದುಕೊಂಡು, ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿದನು.
*ಈ ವಂಶದ ಶಿಲಾಲಿಪಿ, ತಾಮ್ರಪಟಗಳು ಕೂಡಿ, ಸುಮಾರು ೧೦೦ರವರೆಗೆ ದೊರೆತಿದ್ದರೂ, ಅವುಗಳಲ್ಲಿ ೫೦-೫೫ ಮಾತ್ರವೇ ಶೋಧಿಸಲ್ಪಟ್ಟವೆ. ಇವರ ಲೇಖಗಳು ಪಿಂಪಳನೇರ, ಹೈದರಾಬಾದ, ಚಿಪಳೂಣ, ಕುಂಡಲಗಾಂವ, ರಾಯಗಡ ಬದಾಮಿ, ಮಹಾಕೂಟ, ಅಡೂರ, ಐಹೊಳೆ, ಪಟ್ಟದಕಲ್ಲ ಮುಂತಾದ ಸ್ಥಳಗಳಲ್ಲಿ ದೊರೆಯುತ್ತವೆ.

೫೨

ಕರ್ನಾಟಕ ಗತವೈಭವ



ಇವನು ಸಾರ್ವಭೌಮತ್ವ ಸೂಚಕವಾದ ಅಶ್ವಮೇಧಯಜ್ಞವನ್ನು ಮಾಡಿ ದಿಗಂತ ಕೀರ್ತಿಯನ್ನು ಪಡೆದನು. ಇವನ ಮಗನಾದ ಮಂಗಳೇಶನು (೫೯೭-೬೦೮) ಮಹಾಕೂಟೇಶ್ವರನ ಭಕ್ತನು, ಬಾದಾಮಿಯಲ್ಲಿಯ ಎಲ್ಲಕ್ಕೂ ದೊಡ್ಡದಾದ ಮೂರನೆಯ ವೈಷ್ಣವ ಗವಿಯನ್ನು ಕೊರೆಯಿಸಿದವನು ಇದೇ ಮಂಗಳೇಶನು.

ವನ ತರುವಾಯ ಪ್ರೌಢ ಪ್ರತಾಪಿಯಾದ ೨ನೆಯ ಪುಲಿಕೇಶಿಯು ಪಟ್ಟವೇರಿದನು(೬೦೯-೬೪೨), ಈ ೨ ನೆಯ ಪುಲಕೇಶಿಯು ಕರ್ನಾಟಕದ ಗಂಗ, ಕದಂಬ, ಪಲ್ಲವ ಮುಂತಾದ ಅರಸರನ್ನು ಗೆದ್ದುದಲ್ಲದೆ, ಕರ್ನಾಟಕವನ್ನು ದಾಟಿ ಹೋಗಿ, ಉತ್ತರದಲ್ಲಿ ಆಳುತ್ತಿದ್ದ, ಕೋಸಲ, ಕಲಿಂಗ, ಮೌರ್ಯ ಮುಂತಾದ ಅರಸರನ್ನೂ, ದಕ್ಷಿಣದಲ್ಲಿಯ ಪಾಂಡ್ಯ, ಚೋಳ, ಕೇರಳ ಮೊದಲಾದ ಅರಸರನ್ನೂ ಪಾದಾಕ್ರಾಂತರನ್ನಾಗಿ ಮಾಡಿದನು. ನೂರು ಹಡಗಗಳುಳ್ಳ ಹಡಗು ಪಡೆಯೊಂದಿಗೆ ಪಶ್ಚಿಮ ಸಮುದ್ರದಲ್ಲಿ ಸೈನ್ಯವನ್ನು ಸಾಗಿಸಿ, ಉತ್ತರಕ್ಕೆ ಮುಂಬಯಿ ಹತ್ತರ ಇರುವ 'ಪರಿ' ಎಂಬ ಪಟ್ಟಣವನ್ನು ತೆಗೆದುಕೊಂಡನು. ಆದರೆ ಈ ಪುಲಿಕೇಶಿಯು ಮಾಡಿದ ಎಲ್ಲಕ್ಕೂ ಮಹತ್ವದ ಕಾರ್ಯವೆಂದರೆ, ಉತ್ತರ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವರ್ತಿಯಾಗಿದ್ದ ಕನೋಜದ ಅರಸನಾದ 'ಹರ್ಷವರ್ಧನ' ನನ್ನು ನರ್ಮದೆಯ ದಂಡೆಯ ಮೇಲೆ ಸಂಪೂರ್ಣವಾಗಿ ಸೋಲಿಸಿದುದೇ. ಆಗ ಇವನು 'ಪರಮೇಶ್ವರ' ಎಂಬ ಬಿರುದನ್ನು ಧರಿಸಿ, ಅಶ್ವಮೇಧಯಾಗವನ್ನು ಮಾಡಿದನು. ಹರ್ಷವರ್ಧನನು ಇವನ ಮೇಲೆ ದಂಡೆತ್ತಿ ಬಂದಾಗ ಅವನ ಸೈನ್ಯದಲ್ಲಿ ಬರೀ ಆನೆಗಳೇ ಅರವತ್ತು ಸಾವಿರವಿದ್ದವು. ಎಂದ ಮೇಲೆ ಅವನ ಕುದುರೆ ಕಾಲಾಳುಗಳ ಸೈನ್ಯವು ಎಷ್ಟಿತ್ತೆಂಬುದನ್ನು ನೀವೇ ಊಹಿಸಿರಿ. ಅಂದಿನಿಂದ ಉತ್ತರ ಹಿಂದುಸ್ಥಾನದ ಇತಿಹಾಸವು ಮುಗ್ಗಿತು. ಕರ್ನಾಟಕದ ಇತಿಹಾಸಕ್ಕೆ ಕಳೆಯೇರುತ್ತ ಹೋಯಿತು. ಇವನ ರಾಜ್ಯ ವಿಸ್ತಾರವು ನರ್ಮದೆಯಿಂದ ದಕ್ಷಿಣಕ್ಕೆ ಇಡೀ ದಕ್ಷಿಣಾ ಪಥವನ್ನೇ ಆಕ್ರಮಿಸಿತ್ತು, ಪೂರ್ವ, ಪಶ್ಚಿಮ, ದಕ್ಷಿಣ ಸಮುದ್ರದ ನಡುವಿನ ನಾಡೆಲ್ಲವೂ ಇವನ ಕೈ ಸೇರಿತ್ತು. ಹ್ಯುವೆನ್ತ್ಸಂಗ್ ಎಂಬ ಚೀನ ದೇಶದ ಪ್ರವಾಸಿಯು ೬೩೯ ನೆಯ ಇಸ್ವಿಯ ಸುಮಾರಿಗೆ ಈ ಪುಲಿಕೇಶಿಯ ರಾಜ್ಯದೊಳಗೆ ಸಂಚಾರಮಾಡಿದನು. ಅವನು ನಮ್ಮೀ ಕರ್ನಾಟಕವನ್ನೂ, ಪುಲಿಕೇಶಿಯ ಆಗಿನ ಪ್ರಜೆಗಳನ್ನೂ, ಅವರ ನಡೆ ನುಡಿಗಳನ್ನೂ ಅತ್ಯಂತ ಸುಂದರವಾಗಿ ವರ್ಣಿಸಿದ್ದಾನೆ (ವೈಭವವರ್ಣನೆ ಪ್ರಕ

೭ ನೆಯು ಪ್ರಕರಣ – ಬಾದಾಮಿಯ ಚಾಲುಕ್ಯರು

೫೩


ರಣ ನೋಡಿರಿ), ಪ್ರತಿಯೊಬ್ಬ ಕನ್ನಡಿಗನು ಅದನ್ನು ತನ್ನದೆಯ ಮೇಲೆ ಬರೆದಿಟ್ಟು ಕೊಳ್ಳಬೇಕು. ಈ ಪುಲಿಕೇಶಿಯಂಥ ವೈಭವ ಸಂಪನ್ನರಾದ ಅರಸರು ಹಿಂದುಸ್ಟಾನದ ಇತಿಹಾಸದಲ್ಲಿ ಬೆರಳಿನಿಂದೆಣಿಸುವಷ್ಟು ಸಹ ಸಿಕ್ಕುವುದು ಅಪೂರ್ವ. ಇವನ ವರ್ಚಸ್ಸು ಇರಾಣ ಮುಂತಾದ ಪರರಾಷ್ಟ್ರಗಳ ಮೇಲೆಯೂ ಇತ್ತೆಂದು ಗೊತ್ತಾಗುತ್ತದೆ. ಆರಬೀ ಭಾಷೆಯ ಒಂದು ಪುಸ್ತಕದಲ್ಲಿ ಈತನು ಇರಾಣದ ಅರಸನಾದ 'ಖುಸ್ತು'ವಿನ ಕಡೆಗೆ ತನ್ನ ರಾಯಭಾರಿಯನ್ನು ಕಳುಹಿಸಿದ್ದನೆಂದು ಉಲ್ಲೇಖವಿದೆ. ಮೇಲಾಗಿ, ಇರಾಣದ ರಾಯಭಾರಿಗಳು ಇವನ ಒಡೋಲಗಕ್ಕೆ ಬಂದಿದ್ದರೆಂಬುದು 'ಅಜಂತೆ' ಯಲ್ಲಿಯ ಗವಿಯೊಳಗಿನ ಒಂದು ಚಿತ್ರದಿಂದ ಗೊತ್ತಾಗುತ್ತದೆ. ಈ ಪುಲಿಕೇಶಿಯ ಪ್ರತ್ಯಕ್ಷ ದರ್ಶನವು ಆ ಚಿತ್ರದಲ್ಲಿ ಕನ್ನಡಿಗರಿಗೆ ಆಗುವಂತಿದೆ. ಕನ್ನಡಿಗರ ದುರ್ದೈವದಿಂದ, ಅದರಲ್ಲಿಯ ಪುಲಿಕೇಶಿಯ ಮುಖವನ್ನೇ ಯಾವನೊಬ್ಬ ದುಷ್ಟನು ಕೆಡಿಸಿರುವನು (ಚಿತ್ರವನ್ನು ನೋಡಿರಿ). ಆದರೆ ಅದೇ ಅಜಂತೆಯಲ್ಲಿರುವ ಮತ್ತೊಂದು ಗವಿಯಲ್ಲಿ ಒಂದು 'ರಾಜವಿಲಾಸ' ನೌಕೆಯ ಚಿತ್ರವಿದ್ದು, ಅದರಲ್ಲಿಯ ಮೂರ್ತಿಯು ಪುಲಿಕೇಶಿಯದೇ ಇರಬಹುದೆಂದು ನನಗೆ ತೋರುತ್ತದೆ. ಇರಲಿ! ಮುಖ್ಯವಾಗಿ ಹೇಳುವುದೇನೆಂದರೆ, ಈ ಪುಲಿಕೇಶಿಯ ಹೆಸರನ್ನು ಯಾವ ಕನ್ನಡಿಗನೂ ಎಂದಿಗೂ ಮರೆಯಕೂಡದು. ಇವನ ಪರಾಕ್ರಮದ ಮತ್ತು ರಾಜನೀತಿಯ ಕೃತ್ಯಗಳನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ! ಇವನ ಕಾಲದಲ್ಲಿ ಇವನ ಹಿರೆಯ ಸೊಸೆಯಾದ ವಿಜಯಭಟ್ಟಾರಿಕಾ ಎಂಬವಳು ಸಾವಂತವಾಡಿಯನ್ನಾಳಿದಳು. ಪುಲಿಕೇಶಿಯ ಮಗನ ಆಳಿಕೆಯಲ್ಲಿ ದಕ್ಷಿಣ ಗುಜರಾಥದಲ್ಲಿ ಚಾಲುಕ್ಯರದೊಂದು ಶಾಖೆಯು ಸ್ಥಾಪಿಸಲ್ಪಟ್ಟಿತು, ಇವನ ಮಗ, ಮೊಮ್ಮಗ, ಮರಿಮಕ್ಕಳು, ಇವರೆಲ್ಲ ಶೂರರಾದ ಅರಸರೇ. ಅವರು, ಈ ವಂಶದ ಹುಟ್ಟುಹಗೆಗಳಾದ ಪಲ್ಲವರೊಡನೆಯೂ, ಚೋಳ, ಪಾಂಡ್ಯ, ಹೈಹಯ ಮುಂತಾದವರೊಡನೆಯೂ ಕಲಿತನದಿಂದ ಕಾದಿ, ಚಾಲುಕ್ಯ ವಂಶದ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿರುವರು. ಆದರೆ, ಇತಿಹಾಸವನ್ನು ಕೊಡುವುದು ನಮ್ಮ ಮುಖ್ಯ ಉದ್ದೇಶವಿರದೆ, ವೈಭವವನ್ನು ಕಣ್ಣೆದುರಿಗೆ ತಂದಿಡುವುದೇ ನಮ್ಮ ಮುಖ್ಯ ಮನೋಗತವಿರುವುದರಿಂದ, ನಾವು ಹೆಚ್ಚಿನ ಸಂಗತಿಗಳನ್ನು ಇಲ್ಲಿ ಹೇಳಿರುವುದಿಲ್ಲ. ಈ ಮಹಾಪುಲಿಕೇಶಿಯಿಂದ ನಾಲ್ಕನೆಯ ತಲೆಯವನಾದ ೨ನೆಯ ವಿಕ್ರಮಾದಿತ್ಯನು

೫೪

ಕರ್ನಾಟಕ ಗತವೈಭವ


ತನ್ನ ವಂಶಕ್ಕೆ ಪೂರ್ವದಿಂದಲೂ ಶತ್ರುಗಳಾದ ಪಲ್ಲವರೊಡನೆ ಹೋರಾಡಿ, ಮಾಣಿಕ್ಯದ ರಾಶಿಯನ್ನೂ, ಗಜ-ತುರಗಗಳನ್ನೂ, ಯಥೇಚ್ಚವಾಗಿ ತೆಗೆದುಕೊಂಡು ಅವರ ರಾಜಧಾನಿಯಾದ ಕಂಚಿಯನ್ನು ಹೊಕ್ಕ ಸಂಗತಿಯು ಮಾತ್ರ ನೆನಪಿನಲ್ಲಿಡ ತಕ್ಕುದಾಗಿದೆ. ಏಕೆಂದರೆ, ಈ ವಿಕ್ರಮಾದಿತ್ಯನು ಮಿಕ್ಕವರಂತೆ, ಆ ಪಟ್ಟಣವನ್ನು ಹಾಳುಮಾಡದೆ, ದೇವ ಬ್ರಾಹ್ಮಣರಿಗೂ ಬಡಬಗ್ಗರಿಗೂ ಅನೇಕ ದಾನ ಮುಂತಾದವುಗಳನ್ನು ಮಾಡಿ, ಅಲ್ಲಿಯ ರಾಜಸಿಂಹೇಶ್ವರ ಮುಂತಾದ ದೇವಾಲಯಗಳನ್ನು ಉದ್ದರಿಸಿದನು. ಇವನ ಹೆಂಡತಿಯಾದ ಲೋಕಮಹಾದೇವಿಯೆಂಬವಳು ಈತನ ಈ ಜಯದ ಸೂಚನಾರ್ಥವಾಗಿ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷನ ಅತಿ ವಿಸ್ತಾರವಾದ ದೇವಾಲಯವನ್ನು (೬೫೬, ಶಕ) ಕಟ್ಟಿಸಿದಳು, ಇವಳು ಆ ಕಾಲದಲ್ಲಿ 'ಕಿಸುವೊಳಲ್' ಎಂದರೆ ಪಟ್ಟದಕಲ್ಲಿನಲ್ಲಿ ಆಳುತ್ತಿದ್ದಳು. ಆದರೆ, ಇವನ ಮಗನ ಕಾಲಕ್ಕೆ, ಏಳೆಂಟು ತಲೆಗಳಿಂದ ಅವಿಚ್ಛಿನ್ನವಾಗಿ ನಡೆಯುತ್ತ ಕೈವಶವಾಗಿದ್ದ ರಾಜ್ಯಲಕ್ಷಿಯು ಈ ವಂಶವನ್ನು ಬಿಟ್ಟು ಹೋದಳು. ರಾಷ್ಟ್ರಕೂಟದ ಅರಸನಾದ ದಂತಿದುರ್ಗನೆಂಬವನು ಇವನ ರಾಜ್ಯವನ್ನು ಸೆಳೆದುಕೊಂಡು, ರಾಷ್ಟ್ರಕೂಟವಂಶ ವನ್ನು ಸ್ಥಾಪಿಸಿದನು.
ಬಗೆಯಾಗಿ, ಕರ್ನಾಟಕವನ್ನಲ್ಲ ಒಂದೇ ಛತ್ರದ ಕೆಳಗೆ ತಂದು ಕರ್ನಾಟಕದ ಕೀರ್ತಿಯನ್ನು ದಶ ದಿಕ್ಕುಗಳಲ್ಲಿ ಪಸರಿಸುವಂತೆ ಮಾಡಿದ ಈ ಚಾಲುಕ್ಯರು ಕೆಲವು ಕಾಲ ಇತಿಹಾಸದಿಂದ ಮರೆಯಾದರು. ಆದರೆ, ಚಾಲುಕ್ಯರು ಮುಳುಗಿದರೂ, ಕರ್ನಾಟಕ ವೈಭವವು ಮುಳುಗಲಿಲ್ಲ, ಏಕೆಂದರೆ, ಇವರ ತರುವಾಯ ಬಂದ ಅರಸರೂ ಕರ್ನಾಟಕಸ್ಥರೇ. ಅವರೂ ಏಕಛತ್ರಾಧಿಪತಿಗಳೇ. ಇರಲಿ. ಅವರ ಇತಿಹಾಸವನ್ನು ಮುಂದಿನ ಪ್ರಕರಣದಲ್ಲಿ ಕೊಡುವೆವು, ಈ ಚಾಲುಕ್ಯ ವಂಶದ ೨ನೆಯ ಪುಲಿಕೇಶಿ, ಅವನ ಸೊಸೆಯಾದ 'ವಿಜಯಭಟ್ಟಾರಿಕೆ' ಮತ್ತು ೨ನೆಯ ವಿಕ್ರಮಾದಿತ್ಯನ ಹೆಂಡತಿಯಾದ 'ಲೋಕಮಹಾದೇವಿ' ಮುಂತಾದವರು ಕನ್ನಡಿಗರ ಸ್ಮೃತಿಪಥದಿಂದ ಮರೆಯಾಗುವುದೆಂತು ! ಹ್ಯುವೆನ್‌ತ್ಸಂಗನು ವರ್ಣಿ ಸಿದ ಕನ್ನಡಿಗರ ಸ್ವಭಾವವೂ, ಶೌರ್ಯವೂ, ಕನ್ನಡಿಗರಲ್ಲಿದ್ದ ಅವರ ವಿಷಯ ದಲ್ಲಿಯ ಅನಾದರವನ್ನು ಓಡಿಸಲಾರವೇ! ಬಾದಾಮಿಯ ಗವಿಗಳೂ, ಅಜಂತ ಯಲ್ಲಿಯ ಅತ್ಯಂತ ಸುಂದರವಾದ ಚಿತ್ರಗಳೂ ಈ ಚಾಲುಕ್ಯ ವಂಶದೀಪಕರನ್ನು

೭ನೆಯ ಪ್ರಕರಣ - ಬಾದಾಮಿಯ ಚಾಲುಕ್ಯರು

೫೫


ಕನ್ನಡಿಗರ ಕಣ್ಣಿದಿರಿಗೆ ಥಟ್ಟನೆ ತಂದಿರಿಸದೆ ಇರವು. ಪ್ರಸಿದ್ದ ಜೈನ ಕವಿಯಾದ 'ರವಿಕೀರ್ತಿ'ಯು ೨ನೆಯ ಪುಲಕೇಶಿಯ ಸಂಬಂಧವಾಗಿ ಐಹೊಳೆಯಲ್ಲಿ ಶಿಲಾಲೇಖವನ್ನು ಬರೆದಿಟ್ಟು ಕನ್ನಡಿಗರ ವೈಭವಕ್ಕೆ ಸಾಕ್ಷಿಯಾಗಿ ನಿಂತಿರುತ್ತಾನೆ. ಕನ್ನಡಿಗರು ಆ ಲೇಖವನ್ನೇ ಕಣ್ಣೆರದು ನೋಡದಿದ್ದರೆ ಅವನೇನು ಮಾಡಿಯಾನು!