ಶ್ರೀ
ಕರ್ನಾಟಕ - ಗತ ವೈಭವ
ಪುನರ್ಮುದ್ರಣ

ಕಾ
ಲಮಹಿಮೆಯನ್ನಬೇಕೋ, ಅಥವಾ ಕರ್ನಾಟಕ ದೇವಿಯ ಗತವೈಭವದ ಪ್ರತಾಪ ವೆನ್ನಬೇಕೋ, ಯಾವತ್ತು ಭಾಗಗಳಲ್ಲಿಯ ಕನ್ನಡಿಗರು ಈ ಚಿಕ್ಕ ಪುಸ್ತಕವನ್ನು ಅತ್ಯಂತ ಅಭಿಮಾನದಿಂದ ಅಲ್ಲ - ಪ್ರೇಮದಿಂದ ಆದರಿಸಿರುವರೆಂಬುದನ್ನು ನೋಡಿ - ಲೇಖಕನು ತಾನು ಕೃತಾರ್ಥನಾದನೆಂದು ಭಾವಿಸುತ್ತಾನೆ. ಯಾಕಂದರೆ, ಮೊದಲನೆಯ ಆವೃತ್ತಿಯು ಹೊರಟ ನಾಲ್ಕೆಂಟು ತಿಂಗಳುಗಳಲ್ಲಿಯೇ, ಪುನರ್ಮುದ್ರಣದ ಸುಯೋಗವು ಪ್ರಾಪ್ತವಾಯಿತು. ಆದರೆ, ಅನೇಕ ಅಡತಡೆಗಳ ಮೂಲಕ, ಇಷ್ಟು ದಿವಸಗಳವರೆಗೆ ಅದನ್ನು ಮುದ್ರಿಸಲಿಕ್ಕೆ ವಿಲಂಬವಾಯಿತೆಂಬ ಬಗ್ಗೆ ನಾವು ಮೊದಲು ವಾಚಕರ ಕ್ಷಮೆಯನ್ನು ಬೇಡಿಕೊಳ್ಳುತ್ತೇವೆ.

ಆವೃತ್ತಿಯಲ್ಲಿ, ಹೊಸ ವಿಷಯಗಳನ್ನು ಹೆಚ್ಚಿಗೆ ಸೇರಿಸಬೇಕೆಂದರೆ, ಇತ್ತೀಚಿಗೆ ಸಂಶೋಧನದಲ್ಲಿ ನಾವು ಹೆಚ್ಚಾಗಿ ಮುಂದೆಜ್ಜೆಯನ್ನಿಟ್ಟಿಲ್ಲವಾದುದರಿಂದ, ಇದರಲ್ಲಿ ಹೆಚ್ಚಿನ ಸಂಗತಿಗಳೇನೂ ವಿಶೇಷವಾಗಿ ಕಾಣಬರುವದಿಲ್ಲ, ಕನ್ನಡ ನಾಡಿನ ಆಗ್ನೇಯ ಗಡಿಯನ್ನು ಗೊತ್ತು ಪಡಿಸಲಿಕ್ಕೆ ಒಂದು ತಮಿಳು ಗ್ರಂಥದ ಸಹಾಯವುಂಟಾದ ಸಂಗತಿಯನ್ನು ೧೭ನೆಯ ಪುಟದಲ್ಲಿಯೂ, ಜನರು ಈಗ ತಿಳಿಯುವಂತೆ ವಿಜಯನಗರದ ಕೃಷ್ಣ ದೇವರಾಯನು ತೆಲುಗು ಮನುಷ್ಯನಾಗಿರದೆ, ಕನ್ನಡ ಮನುಷ್ಯನಾಗಿರಬೇಕೆಂಬ ಬಗ್ಗೆ ಒಂದು ತೆಲುಗು ಗ್ರ೦ಥದಲ್ಲಿ ಹೇಗೆ ಆಧಾರ ದೊರೆಯುತ್ತದೆಂಬುದನ್ನು ೮೩ ಮತ್ತು ೮೪ ನೆಯ ಪುಟಗಳಲ್ಲಿಯೂ, ಹಿಂದಿನ ಕನ್ನಡಿಗರು ಪ್ರಸಂಗಾನುಸಾರವಾಗಿ ಬೇರೆ ದೇಶಗಳಿಗೆ ಹೋಗಿ ಅನ್ಯ ಭಾಷೆಯನ್ನು ಸ್ವೀಕರಿಸಿದರೂ ತಾವು ಕರ್ನಾಟಕರೆಂಬ ಅಭಿಮಾನವನ್ನು ಹೇಗೆ ಬಿಡಲಿಲ್ಲವೆಂಬುದಕ್ಕೆ ಒಬ್ಬ ತೆಲುಗು ಗ್ರಂಥಕಾರರ ಉದ್ಗಾರವನ್ನು ೧೨೨ನೆಯ ಪುಟದಲ್ಲಿಯೂ ಹೊಸದಾಗಿ ಸೇರಿಸಿರುವೆವು, ಹೊಸದಾಗಿ ಹಾಕಿದ ಮಹತ್ವದ ಸಂಗತಿಗಳೆಂದರೆ ಇವಿಷ್ಟೇ ಸರಿ.

- ೧೨ -


ನ್ನೊಂದನೆಯ ಪ್ರಕರಣದಲ್ಲಿಯ ಬಿಜ್ಜಳ-ಬಸವರ ಕಥಾನುವಾದದಲ್ಲಿ ಕೆಲವು ದೋಷಗಳಿರಬಹುದೆಂದು ಸಂಶಯವುಂಟಾದುದರಿಂದ ನಾವು ನಮ್ಮ ಲಿಂಗಾಯತ ಮಿತ್ರರನೇಕರಿಗೆ ಹೇಳಿಕೊಳ್ಳಲಾಗಿ, ಮೊದಲಿನಿಂದಲೂ ಕನ್ನಡ ಭಾಷಾಭಿಮಾನಿಗಳಾದ ಶ್ರೀ ಗುರಬಸಪ್ಪಾ ಹಳಕಟ್ಟಿಯವರು ಹೋದ ವರುಷ ಆ ವಿಷಯವನ್ನು ಬರೆದು ಕಳುಹಿದರು. ಕರ್ನಾಟಕ ವಿಭೂತಿಗಳ ಮಹಿಮೆಯನ್ನು ಹೊಗಳು ವಾಗ ಯಾರಿಗೂ ಯಾವ ವಿಧದಿಂದಲೂ ಮನಸ್ತಾಪ ವುಂಟಾಗುವಂಥ ವಿಧಾನಗಳನ್ನು ಆದಷ್ಟು ಮಟ್ಟಿಗೆ ಮಾಡದಿರುವದಕ್ಕೆ ನಾವು ಯಾವಾಗಲೂ ಎಚ್ಚರಗೊಂಡಿ ರುವದರಿಂದ ಈ ಆವೃತ್ತಿಯಲ್ಲಿ ಶ್ರೀ ಹಳಕಟ್ಟಿಯವರು ಬರೆದುಕೊಟ್ಟ ಕಥೆಯನ್ನೇ ಸೇರಿಸಿರುವೆವು.
ಮ್ಮೀ ಪುಸ್ತಕವನ್ನು ಮೈಸೂರಿನ ಆರ್ಕಿಯಾಲಾಜಿಕಲ್ ಡಿಪಾರ್ಟ್‌ಮೆಂಟಿನ ಸುಪರಿಂಟೆಂಡಂಟರಾದ ಪ್ರಾಕ್ತನವಿಮರ್ಶ ವಿಚಕ್ಷಣ ರಾವ್‌ ಬಹದ್ದೂರ್ ಆರ್. ನರಸಿಂಹಾಚಾರ್ಯ ಎಮ್.ಎ. ಇವರೂ ಅಸಿಸ್ಟೆಂಟ್ ಸುಪರಿಂಟೆಂಡೆಂಟರಾದ ಡಾ. ವೆಂಕಟಸುಬ್ಬಯ್ಯ ಎಮ್.ಎ, ಪಿ.ಎಚ್.ಡಿ. ಇವರೂ ಇತಿಹಾಸ ದೃಷ್ಟಿಯಿಂದ ಆಮೂಲಾಗ್ರವಾಗಿ ಓದಿರುವದರಿಂದ, ಇದರೊಳಗಿನ ಇತಿಹಾಸ ವಿಷಯಗಳು ತಪ್ಪಿಲ್ಲವೆಂದು ಹೇಳಲು ಈಗ ನನಗೆ ಧೈರ್ಯವುಂಟಾಗಿದೆ. ಅವರು ತೋರಿಸಿದ ಒಂದೆರಡು ತಪ್ಪುಗಳನ್ನು ತಿದ್ದಿರುವವು. ಡಾ.ವೆಂಕಟಸುಬ್ಬಯ್ಯ ನವರು ಚಾಲುಕ್ಯರ ವಂಶಾವಳಿಯ ವಿಷಯವಾಗಿ ಇಂಡಿಯನ್ ಆಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯಲ್ಲಿ ಮೊನ್ನೆ ಮೊನ್ನೆ ಲೇಖನವನ್ನು ಬರೆದಿರುವರು, ಅವರು ಕೊಟ್ಟ ವಂಶಾವಳಿಯನ್ನು ನಾವು ೧೪ನೆ ಶ್ರಟ ಪುಟದಲ್ಲಿ ಕೊಟ್ಟಿರುವೆವು.

{[gap}}ಭಾಷಾ ವಿಷಯದಲ್ಲಿ, ಹಲ ಕೆಲವು ವ್ಯಾಕರಣ ದೋಷಗಳನ್ನು ತೆಗೆದು ಹಾಕಿರುವೆನಲ್ಲದೆ, ಮದ್ರಾಸಿನ ಮ.ರಾ.ರಾ. ಅಳಸಿಂಗಾಚಾರ್ಯರವರೂ ಮೈಸೂರಿನ ಮ.ರಾ.ರಾ. ಯಳಂದೂರ ರಾಮಚಂದ್ರರಾಯರೂ ಬಹಳ ಪರಿಶ್ರಮ ಪಟ್ಟು ಅತ್ತ ಕಡೆಯ ಶಬ್ದ ಪ್ರಯೋಗಗಳನ್ನು ತೋರಿಸಿಕೊಟ್ಟ ಮೇರೆಗೆ ಅವುಗಳನ್ನು ಸಾಧ್ಯವಾದ ಮಟ್ಟಿಗೆ ಈ ಪುಸ್ತಕದಲ್ಲಿ ಸೇರಿಸಲು ಯತ್ನಿಸಿರುವೆವು. ಹೀಗೆ, ಎಲ್ಲ ಭಾಗ
- ೧೩ -

ಗಳ ಪ್ರಯೋಗಗಳನ್ನೂ ಮೇಳಯಿಸಿ, ಇದನ್ನು ಬರೆದಿರುವದರಿಂದ, ಭಾಷೆಯ ದೃಷ್ಟಿಯಿಂದ ಇದು ಸರ್ವಥಾ ನಿರ್ದುಷ್ಟವಾಗಿರದಿದ್ದರೂ, ಕನಿಷ್ಟ ಪಕ್ಷಕ್ಕೆ ಯಾರಿಗೂ ಆತಂಕವನ್ನುಂಟುಮಾಡಲಿಕ್ಕಿಲ್ಲೆಂದು ನಂಬಿದ್ದೇವೆ.
ಹಿಂದಕ್ಕೆ ಕರ್ನಾಟಕರಾಗಿರದಿದ್ದರೂ ಈಗ ಕರ್ನಾಟಕರಾಗಿರುವ ನಮ್ಮ ಮುಸಲ್ಮಾನ ಬಂಧುಗಳ ರಾಜ್ಯಗಳಾದ ವಿಜಾಪುರ ಮೈಸೂರ ಇವೇ ಮುಂತಾದವುಗಳ ವೈಭವದ ವಿಷಯವಾಗಿ ನಾವು ಯೋಗ್ಯವಾದ ಅಭಿಮಾನ ತಾಳುವದು ಭಾವೀ ರಾಷ್ಟ್ರೀಯತ್ವದ ದೃಷ್ಟಿಯಿಂದ ಅತ್ಯಂತ ಅವಶ್ಯವಾಗಿದೆ. ಆದರೆ, ಭಾವೀ ಕರ್ನಾಟಕತ್ವದ ವಿಷಯವನ್ನು ಮತ್ತೊಂದು ಪ್ರಸಂಗದಲ್ಲಿ ನಾವು ಸೇರಿಸತಕ್ಕವರಿರುವದರಿಂದ, ಕನ್ನಡಿಗರು ಆ ಬಗ್ಗೆ ನಮ್ಮನ್ನು ಈಗ ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇವೆ.
ಮೊದಲನೆಯ ಆವೃತ್ತಿಯನ್ನು ಹೊರಡಿಸಿದಾಗ ಕಾಗದದ ಬೆಲೆಯು ಮೊದಲೇ ಏರಿತ್ತು. ಆದರೆ, ಅದು ಮತ್ತೆ ಏರುತ್ತೇರುತ್ತ ಹೋಗಿ ಈ ಆವೃತ್ತಿಯ ಮುದ್ರಣದ ಕಾಲಕ್ಕೆ ಅದು ಇಮ್ಮಡಿಯಾದುದರಿಂದ, ಅನಿರ್ವಾಹ ಪಕ್ಷಕ್ಕೆ ಬೆಲೆಯನ್ನು ಸ್ವಲ್ಪಮಟ್ಟಿಗೆ ಏರಿಸಲೇ ಬೇಕಾಯಿತು.
ಕೊನೆಗೆ, ನಮಗೆ ನೆರವಾದ ಮೇಲ್ಕಾಣಿಸಿದ ಮಹನೀಯರಿಗೂ, ಬೆನ್ನು ಚಪ್ಪರಿಸಿ ನಮಗೆ ಹುರುಪು ಕೊಟ್ಟ ಹಿರಿಯರಿಗೂ ಮಿತ್ರರಿಗೂ ಪತ್ರಿಕಾ ಸಂಪಾದಕರಿಗೂ ವಂದನೆಗಳನ್ನು ಸಮರ್ಪಿಸದಿದ್ದರೆ, ನಾವು ಕೃತಘ್ನರಾಗಬೇಕಾದೀತು! ಹಾಗೆಯೇ, ಧರ್ಮಪ್ರಕಾಶ ಪ್ರೆಸ್ಸಿನವರು ಈ ಪುಸ್ತಕಕ್ಕೆ ಈ ಅಂದವಾದ ಉಡಿಗೆಯನ್ನುಡಿಸದಿದ್ದರೆ, ಇದಕ್ಕೆ ಈ ಮೋಹಕ ಸ್ವರೂಪವೇ ಇರುತ್ತಿದ್ದಿಲ್ಲ.
ತ್ತೆ ಮತ್ತೆ ಹೇಳುವದೇನು? ಬಹಳ ದಿವಸಗಳಿಂದ ಬೀಳುವಾತುಗಳಿಗೀಡಾದುದರಿಂದ ಖತಿಗೊಂಡಿರುವ ಕನ್ನಡಿಗರು ಹೀಗೆ ಧಾತುಗುಂದದೆ, ಭರದಿಂದೆದ್ದು ಕರ್ನಾಟಕದ ಕೀರ್ತಿಯನ್ನು ನಾಲ್ಕೂ ಕಡೆಗೆ ಚಡಾಳಿಸುವಂತೆ ಮಾಡಬೇಕೆಂದೂ ಕರ್ನಾಟಕ ದೇವಿಯು ಕನ್ನಡಿಗರ ದುರಿತಗಳೆಲ್ಲವನ್ನೂ ದುವ್ವಾಳಸಲೆಂದೂ ಅನನ್ಯ ಭಾವದಿಂದ ಆ ಶ್ರೀಹರಿಯನ್ನು ಪ್ರಾರ್ಥಿಸಿ ಈ ಪ್ರಸ್ತಾವನೆಯನ್ನು ಮುಗಿಸುವವು.

ವೆಂಕಟೇಶ ಭೀಮರಾವ ಆಲೂರ.

ಧಾರವಾಡ
೨೦-೧೨-೧೮೧೯.

- ೧೪ -


ಕಲ್ಯಾಣ ಚಾಲುಕ್ಯರ ವಂಶಾವಳಿ
(ಸುಧಾರಿಸಿದ್ದು.)

ನಾಲ್ಕನೆಯ ವಿಕ್ರಮಾದಿತ್ಯ
(ತ್ರಿಭುವನಮಲ್ಲ)
(೧) ತೈಲ (ಎರಡನೇ)
(೯೭೩-೯೯೭)
↓------ -------------------- ------↓
(೨) ಇರಿವ ಬೆಡಂಗ ಸತ್ಯಾಶ್ರಯ ದಶವರ್ಮನ್ ಅಥವಾ ಯಶೋವರ್ಮನ್
(೯೯೭-೧೦೦೮)
↓------ ------↓
(೩)ವಿಕ್ರಮಾದಿತ್ಯ (೫ನೇ) (೪) ಅಯ್ಯಣ (೫) ಜಯಸಿಂಹ (೨ನೇ) ಜಗದೇಕಮಲ್ಲ
(೧೦೦೯-೧೦೧೪) (೧೦೧೪) (೧೦೧೫-೧೦೪೨)
(೬) ಸೋಮೇಶ್ವರ (೧ನೇ)
(೧೦೪೨-೧೦೬೮)
↓------ ------↓
(೭) ಸೋಮೇಶ್ವರ (೨ನೇ) (೮) ವಿಕ್ರಮಾದಿತ್ಯ(೬ನೇ)
(೧೦೬೮-೧೦೭೬) (೧೦೭೬-೧೧೨೭)
(೯) ಸೋಮೇಶ್ವರ (೩ನೇ)
(.)