Pages   (key to Page Status)   


ಕಾಯದಲ್ಲಿ ಕಾಯ ಸವೆದು
ಪ್ರಾಣದಲ್ಲಿ ಪ್ರಾಣ ಸವೆದು_ನಿಶ್ಚಿಂತವಾದ ಬಳಿಕ ಹಸಿವು_ತೃಷೆಗಳೆಂಬವು ಅಳಿದು ಹೋದವು ನೋಡಾ. ಉಂಡಿಹೆನೆಂಬ ಬಯಕೆಯಿಲ್ಲ ಒಲ್ಲೆನೆಂಬ ವೈರಾಗ್ಯವಿಲ್ಲ. ಇದು ಸ್ವಾನುಭಾವತೃಪ್ತಿಯೊಳಡಗಿತ್ತು. ಇದು ಕಾರಣ_ನಮ್ಮ ಗುಹೇಶ್ವರಲಿಂಗಕ್ಕೆ ಆರೋಗಣೆ ಇಲ್ಲ ಕಾಣಾ ಸಂಗನಬಸವಣ್ಣಾ.