ಗುರುದೀಕ್ಷೆಯಿಲ್ಲದ ಶರಣರ ಲಿಂಗವು



Pages   (key to Page Status)   


ಗುರುದೀಕ್ಷೆಯಿಲ್ಲದ ಲಿಂಗವು ಧರೆಯ ಕಲ್ಲೆನಿಸಿತ್ತು. ಗುರುದೀಕ್ಷೆಯಿಲ್ಲದ ನರನು ಶರಣರ ಸಮಯಕ್ಕೆ ಸಲ್ಲ. ಅದೆಂತೆಂದೊಡೆ : ಸುಟ್ಟ ಮಡಿಕೆಯಲ್ಲಿ ನೀರ ತುಂಬಿದಡೆ ದಿಟವಾಗಿ ನಿಲ್ಲುವುದಲ್ಲದೆ
ಹಸಿಯಮಡಿಕೆಯಲ್ಲಿ ನೀರತುಂಬಿದಡೆ ದಿಟವಾಗಿ ನಿಲ್ಲುವುದೆ ಹೇಳಾ ? ಇದು ಕಾರಣ
ಗುರುದೀಕ್ಷೆಯಿಲ್ಲದವ ಎಷ್ಟು ಜ್ಞಾನಿಯಾದಡು ಅವನ ಜ್ಞಾನವು ಪ್ರಯೋಜನಕ್ಕೆಬಾರದು. ಅವನು ಎಷ್ಟು ಕ್ರಿಯೆಯನಾಚರಿಸಿದಡು ಅವನ ಕ್ರಿಯೆಯು ನಿಷ್ಫಲ ನೋಡಾ ಅಖಂಡೇಶ್ವರಾ.