ಘಟದೊಳಗಿದ್ದ ಪದಾರ್ಥವು, ಆ



Pages   (key to Page Status)   


ಘಟದೊಳಗಿದ್ದ ಪದಾರ್ಥವು
ಆ ಘಟದ ಹೊರಗೆ ಉರಿಯ ಹತ್ತಿಸಿದಲ್ಲದೆ ಪರಿಪಕ್ವವಾಗದು. ಹಾಗೆ_ಅಂತರಂಗದಲಿರ್ದ ಚಿದ್ವಸ್ತು ಸಂಸ್ಕಾರಬಲದಿಂದ ಹೊರಹೊರಟಲ್ಲದೆ
ಅಂತರಂಗದಲಿರ್ದ ಭವರೋಗ ಮಾಣದು. ಇದು ಕಾರಣ
ಕೂಡಲಚೆನ್ನಸಂಗಮದೇವಾ. ಅರ್ಚನ ಅರ್ಪಣ ಅನುಭಾವಾದಿಗಳಿಂದ ನೀವು ಪ್ರಕಟಗೊಳ್ಳುವಿರಾಗಿ.