Pages   (key to Page Status)   


ಜೀವ ಪವನನ ಬೆರಸಿದ ಪ್ರಾಣನ ನಿಲುವು ಹೊಗೆ ಸುತ್ತಿದ ಉರಿಯಂತಿದೆ ನೋಡಾ. ಹೊಗೆಯ ಕಳೆದು ಚಿದಾಗ್ನಿಯ ಬಲಗೊಳಬಲ್ಲರೆ ಜಗದೊಡೆಯ ತಾನು ತಾನಲ್ಲದೆ ಬೇರಿಲ್ಲ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.