ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ



Pages   (key to Page Status)   


ತೆಂಗಿನೊಳಗಣ
ತಿರುಳು
ಸೇವಿಸಬರ್ಪುದಲ್ಲದೆ
ಹೊರಗಣ
ಪರಟೆ
ಸೇವಿಸಲು
ಬಾರದು.
ಚಾಂಡಾಲಂಗೆ
ಜ್ಞಾನವಂಕುರಿಸಿದಡೆ
ಆತನ
ಅಂತರಂಗದ
ವೃತ್ತಿಗೆ
ಪೂಜ್ಯತೆಯಲ್ಲದೆ
ಬಹಿರಂಗದ
ತನುವಿಗೆ
ಪೂಜ್ಯತೆಯಾಗದು.
ಒಳಹೊರಗೆಂಬ
ಭೇದವಿಲ್ಲದೆ
ಸೇವಿಸಲುಚಿತವಪ್ಪಂತೆ
ಶಿವಕುಲಪ್ರಸೂತಂಗೆ
ಶಿವಜ್ಞಾನವಾಗಲು
ಆತನ
ತನುವೃತ್ತಿಗಳೆರಡೂ
ಸೇವ್ಯವಾಗಿರ್ಪವು._
ಇಂತಿದು
ಸಾಧಕರ
ಸ್ಥಿತಿಯಯ್ಯಾ
ಕೂಡಲಚೆನ್ನಸಂಗಮದೇವಾ