೧೬

ದಿನಗಳು ಕಳೆದುವು ವರ್ಷದ ಪರೀಕ್ಷೆಗಳಾದುವು. ಮೈಸೂರು ಸಂಸ್ಥಾನದ ಕೊನೆಯ ಲೋವರ್ ಸೆಕೆಂಡರಿ ಪರೀಕ್ಷೆಯೂ ನಡೆದು ಹೋಯಿತು. ಒಂದು ವರ್ಷ ತಾನು ಪಾಠ ಹೇಳಿದ್ದ ಆ ಹುಡುಗರನ್ನು ಕಂಡು ಜಯದೇವನಿಗೆ ಅಭಿಮಾನವೆನಿಸಿತು.

ಬೇಸಗೆಯ ರಜೆ, ಶಾಲೆ ಮುಚ್ಚುವ ದಿನ, ವೆಂಕಟರಾಯರೂ ನಂಜುಂಡಯ್ಯನೂ ಆಫೀಸು ಕೊಠಡಿಯಲ್ಲಿ ಕುಳಿತಿದ್ದರು. ಜಯದೇವ ದೃಢನಡಿಗೆಯಿಂದ ಅಲ್ಲಿಗೆ ಬಂದ. ಆತ, ನಾಜೂಕಾಗಿ ಮಡಸಿದ್ದ ಹಾಳೆಯನ್ನು ವೆಂಕಟರಾಯಯರ ಮೇಜಿನ ಮೇಲಿಟ್ಟ. ನಂಜುಂಡಯ್ಯ ಜಯದೇವನ ಮುಖನೋಡಿದರು. ವೆಂಕಟರಾಯರು ಓದಿ, ಆ ಹಾಳೆಯನ್ನು ನಂಜುಂಡಯ್ಯನಿಗೆ ಕೊಟ್ಟರು. ಜಯದೇವ ಕುಳಿತುಕೊಂಡ.

“ಹುಂ.. ಅಂತೂ ಮೇಲಧಿಕಾರಿಗಳ ವಿಚಾರಣೆ ತಪಿಸ್ಕೊಳ್ಬೇಕೂಂತ ಮಾಡಿದೀರೋ ?”

ರಾಧಾಕೃಷ್ಣಯ್ಯ ತಮ್ಮ ದೂರನ್ನು ಗಮನಿಸದೇ ಇರಬಹುದೆಂಬ ಭಯವಿದ್ದರೂ ವೆಂಕಟರಾಯರು ಹಾಗೆ ಕೇಳಿದರು.

"ಸ್ವಲ್ಪ ವಿನಯವಾಗಿ ಮಾತನಾಡಿ!”

“ಇನ್ನು ಅದನ್ನು ಬೇರೆ ನಿಮ್ಮಿಂದ ಕಲೀಬೇಕೇನು? ಐ. ಸೀ!”.

“ವಿದ್ಯಾಭ್ಯಾಸ ಮುಂದುವರಿಸ್ಬೇಕೂಂತ ಮಾಡಿದೀನಿ. ಅದಕ್ಕೊಸ್ಮರ ಹೊರಡ್ತಾ ಇದೀನಿ. ತೀರ್ಮಾನ ಮಾಡೋರು ತೀರ್ಮಾನ ಮಾಡೋರು ನೀವಲ್ವಲ್ಲ! ಮೇಲಕ್ಕೆ ಕಳಿಸ್ಕೊಡಿ" -

"ಅದು ನನಗೆ ಗೊತ್ತಿದೆ :”

“ಸರಿ ಮತ್ತೆ !”

ನಂಜುಂಡಯ್ಯ ಸಿಗರೇಟು ಹಚ್ಚಿ ಅಂದರು :

“ಬೇರೆ ವಿಷಯವೇನೇ ಇರ್ಲಿ, ವಿದ್ಯಾಭ್ಯಾಸ ಮುಂದುವರಿಸೋಕೆ ನೀವು ಮಾಡಿರೋ ನಿರ್ಧಾರ ಶ್ಲಾಘನೀಯ !”

೧೬೦

ದೂರದ ನಕ್ಷತ್ರ

“ಆಗಲಿ ಸಾರ್. ನಿಮ್ಮ ಶುಭಾಶಯವೇ ನನಗೆ ಬೆಂಬಲ. ಮುಂದೆ ಇಲ್ಲಿಗೇ ವಾಪಸು ಬರ್ತೀನಿ—ನೀವೆಲ್ಲ ಬಾ ಅಂದ್ರೆ.. !”

“ಬನ್ನಿ ಖಂಡಿತವಾಗಿ ಬನ್ನಿ...."

ವೆಂಕಟರಾಯರಿಗೆ ಯಾಕೋ ಪೆಚ್ಚು ಪಚ್ಚಾಯಿತು. ನಂಜುಂಡಯ್ಯ ಮೃದುವಾಗಿ ಮಾತನಾಡತೊಡಗಿದ್ದು ಅವರಿಗೆ ಸಹನೆಯಾಗಲಿಲ್ಲ.

ತನ್ನಲಾದ ಪರಿವರ್ತನೆ ಕಂಡು ತಾನೇ ಆಶ್ಚರ್ಯಪಡುತ್ತ ಜಯದೇವ. ವೆಂಕಟರಾಯರನ್ನೇ ನೋಡಿ ಹೇಳಿದ:

“ಇನ್ನೂ ಒಂದು ವಿಷಯ ನಿಮಗೆ ಹೇಳ್ಳೇಕು. ಕೋರ್ಸ್ ಮುಗಿಸಿ ವಾಪಸು ಬರೋವಾಗ ಹೆಂಡತೀನೂ ಕರಕೊಂಡು ಬಲ್ತಿನಿ.”

“ಓ! ಈಗಲಾದರೂ ಮದುವೆಯಾಗೋ ನಿರ್ಧಾರ ಮಾಡಿದ್ರಲ್ಲಾ!”

“ಈಗ? ಹುಡುಗಿ ಗೊತ್ತಾಗಿ ಎರಡು ವರ್ಷ ಆಯ್ತು, ಇನ್ನೂ ಎರಡು ವರ್ಷ ಕಾದಿರ್ತಾಳೆ, ವಿದ್ಯಾರ್ಥಿದೆಸೆ ಮುಗಿಸಿಯೇ ಮದುವೆ!”

ನಂಜುಂಡಯ್ಯ ಏಳುತ್ತ ಎಂದರು :

“ಇದೊಳ್ಳೆ ಶುಭಸಮಾಚಾರ, ಏಳಿ ಸಾರ್.. ಏಳಿ ಜಯದೇವ್. ಇವತ್ತು ನನ್ನ ಲೆಕ್ಕದಲ್ಲಿ ಕಾಫಿ.”

ಹೊರಡುತ್ತ ಆ ಬಡ ಕೊಠಡಿಯನ್ನು ಬಲುಪ್ರೀತಿಯಿಂದ ಜಯದೇವ ನೋಡಿದ. ಅಂಗಳ ದಾಟಿ ಬೀದಿಗಿಳಿಯುತ್ತ ಆತ ಹೇಳಿದ: .,

“ನಾನು ಈ ಶಾಲೇಲಿ ಉಪಾಧಾಯನಾದ ಮೊದಲ್ನೇ ದಿವಸ ನೀವು ಕಾಫಿ ಕುಡಿಸಿದ್ರಿ ನಂಜುಂಡಯ್ಯನವರೇ, ಕೊನೇ ದಿವಸವೂ ನೀವೇ ಕುಡಿಸ್ತಿದೀರಿ !"