ಪಡೆವುದರಿದು ನರಜನ್ಮವ, ಪಡೆವುದರಿದು



Pages   (key to Page Status)   

ಪಡೆವುದರಿದು ನರಜನ್ಮವ
ಪಡೆವುದರಿದು ಹರಭಕ್ತಿಯ
ಪಡೆವುದರಿದು ಗುರುಕಾರುಣ್ಯವ
ಪಡೆವುದರಿದು ಲಿಂಗಜಂಗಮಸೇವೆಯ
ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.