ಪೀಠಿಕೆ

ದ್ಯೂತದಿಂದ ಪ್ರಪಂಚದಲ್ಲಿ ಅನೇಕ ಅನರ್ಥಗಳು ನಡೆಯುವುವು. ಸಂಸ್ಥಾನಗಳೇ ಮುಳುಗಿಹೋಗುವುವು. ಮಣ್ಣ, ಹೊನ್ನು, ಹೆಣ್ಣುಗಳ ನ್ನಪಹರಿಸಬೇಕೆಂಬ ದುರಾಶೆಯಿಂದ ಅನೇಕ ಅನರ್ಥಗಳಾಗುವುವು. ಇಂಥ ದುರಾಶಾಪ್ರತಿನಿವಿಷ್ಟರಾದವರು, ತಮ್ಮ ದುರಾಶೆಯ ಪರಿಣಾಮಾವಸ್ಥೆಯನ್ನು ಪರಾಲೋಚಿಸದೆ, ಆಶಾಗ್ರಹಪ್ರತಿನಿವಿಷ್ಟರಾಗಿ ಹೇಗೆ ಅನರ್ಥಕ್ಕೆ ಗುರಿಯಾಗುವರೋ, ಸನ್ಮಾರ್ಗಾವಲಂಬನೆಯು ಇಂಥ ಅನರ್ಥಗಳನ್ನು ಹೇಗೆ ತಪ್ಪಿಸುವುದೋ, ಅವುಗಳನ್ನು ವಿಶದಪಡಿಸುವುದು ಬಹಳ ಅವಶ್ಯಕವಾದುದು ಅತ್ಯುತ್ಕಟವಾದ ಪಾಪಗಳಗೆ ಈ ಜನ್ಮದಲ್ಲಿಯೇ ಶಿಕ್ಷೆಯಾಗುವುದೆಂಬುದಾಗಿಯ, ಅತ್ಯುತ್ತಮವಾದ ಧರ್ಮಗಳಿಗೂ ಫಲವು ಈ ಜನ್ಮದಲ್ಲಿಯೆ ಆಗುವುದೆಂಬುದಾಗಿಯೂ, ನಮ್ಮ ಹಿರಿಯರು ಹೇಳಿರುವರು. ಇಂಥ ಪಾಪ ಪುಣ್ಯಗಳ ಫಲಗಳು ಯಾವ ರೀತಿಯಲ್ಲಿ ಸಂಭವಿಸುವವೋ, ಅವುಗಳನ್ನು ಇತಿಹಾಸರೂಪವಾಗಿ ಪ್ರದರ್ಶನ ಮಾಡುವುದಕ್ಕೋಸ್ಕರ ಈ ಗ್ರಂಥವು ರಚಿಸಲ್ಪಟ್ಟಿತು. ಈ ವುದ್ದೇಶವನ್ನು ನೆರವೇರಿಸುವ ವಿಷಯದಲ್ಲಿ ಈ ಗ್ರಂಥವು ಸಾಧಕವಾದುದೆಂದು ವಾಚಕರಿಂದ ಗಣಿಸಲ್ಪಟ್ಟರೆ, ಈ ವಿಷಯ ದಲ್ಲಿ ಮಾಡಿದ ಪ್ರಯತ್ನವು ಸಂಪೂರ್ಣವಾದ ಫಲವನ್ನು ಹೊಂದಿತೆಂದು ಭಾವಿಸಲ್ಪಡುವುದು.


M.V.