ಪರಶಿವನು ಗುರುಜಂಗಮರೂಪಿಂದ ನರರನುದ್ಧರಿಸಲೆಂದು



Pages   (key to Page Status)   


ಪರಶಿವನು ಗುರುಜಂಗಮರೂಪಿಂದ ನರರನುದ್ಧರಿಸಲೆಂದು ಸಜಾತೀಯವಾದ ಮನುಜಾಕಾರವ ಧರಿಸಿ ಧರೆಗವತರಿಸಿರ್ಪನಯ್ಯಾ. ಇದನರಿಯದ ಮಂದಮತಿಗಳು ಆ ಗುರುಜಂಗಮವನಾರಾಧಿಸಿ ಭಕ್ತರಾಗದೆ
ವಿಜಾತೀಯವಾದ ಕಲ್ಲು ಕಟ್ಟಿಗೆ ಮಣ್ಣು ಮುಂತಾಗಿ ಹೊರಗಿನ ಜಡಾಕಾರವೆ ದೈವವೆಂದಾರಾಧಿಸಿ
ಮೊರಡಿಯಿಂದೊಸರುವ ನೀರ ತೀರ್ಥವೆಂದು ಸೇವಿಸಿ ಭವಭಾರಿಗಳಾಗುತ್ತಿಪ್ಪರಯ್ಯಾ `ತೀರ್ಥೇ ದಾನೇ ಜಪೇ ಯಜ್ಞೇ ಕಾಷೆ*ೀ ಪಾಷಾಣಕೇ ಸದಾ ಶಿವಂ ಪಶ್ಯತಿ ಮೂಢಾತ್ಮಾ ಶಿವೇ ದೇಹೇ ಪ್ರತಿಷಿ*ತೇ ಎಂದುದಾಗಿ ನಮ್ಮ ಕೂಡಲಚೆನ್ನಸಂಗಯ್ಯನ ವಚನವನಾರಯ್ಯದೆ ಕೆಡುತಿಪ್ಪರಯ್ಯಾ.