ಪಿಂಡಾಕಾಶದೊಳು ಅಖಂಡ ಜ್ಞಾನಸೂರ್ಯನುದಯವಾಗಲು,



Pages   (key to Page Status)   


ಪಿಂಡಾಕಾಶದೊಳು ಅಖಂಡ ಜ್ಞಾನಸೂರ್ಯನುದಯವಾಗಲು
ಪಿಂಡದೊಳ ಹೊರಗೆ ತಾನಾಗಿ
ತಂಡತಂಡದ ಭವ ತಿಮಿರವ ಖಂಡಿಸಿತ್ತು ನೋಡಾ. ಆ ಅಖಂಡ ಜ್ಞಾನಜ್ಯೋತಿಯಿಂದ ಅಪ್ರಮಾಣಲಿಂಗದಲ್ಲಿ ನಿಃಪತಿಯಾದಾತನೇ ನಿಜಶರಣನೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.