ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೩

ಈ ಪುಟವನ್ನು ಪ್ರಕಟಿಸಲಾಗಿದೆ
೩೫೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೩



-( ೧೮೬, ಸೂರ್ಯನು ಪಶ್ಚಿಮದಲ್ಲಿ ಯಾಕೆ ಮುಳುಗುತ್ತಾನೆ. )-

ಒಂದು ದಿವಸ ಅಕಬರನೂ ಬೀರಬಲನೂ ಏಕಾಂತದಲ್ಲಿ ವಿನೋದವಾಡುತ್ತ ಕುಳಿತು ಕೊಂಡಿದ್ದರು ಆಗ ಬೀರಬಲನು " ನರವರ ! ಸೂರ್ಯ ನು ಪಶ್ಚಿಮದಲ್ಲಿ ಯಾಕೆ ಮುಳುಗುತ್ತಾನೆ! ಎಂದು ಪ್ರಶ್ನೆ ಮಾಡಿದನು ಅದಕ್ಕೆ ಬಾದಶಹನು ಈ ಪ್ರಶ್ನೆಯನ್ನು ಯಾವನಾದರೊಬ್ಬ ಮೂರ್ಖನಿಗೆ ಮಾಡತಕ್ಕದ್ದು ಎಂದು ಉತ್ತರಕೊಟ್ಟನು ಆಗ ಬೀರಬಲನು ಖಾವಂದ ? ಅದಕ್ಕಂತಲೇ ತಮಗೆ ಪ್ರಶ್ನೆ ಮಾಡಿದೆನು ಎಂದನು, ಈ ಮಾತನ್ನು ಕೇಳಿ ಬಾದಶಹನು ಕಿಲಕಿಲ ನಕ್ಕನು.

-(೧೮೭, ಹುಜೂರ್ ಗಧೆ ಆತೇ ಹೈ)-

ಒಂದು ದಿವಸ ಬಾದಶಹನು ಬೀರಬಲನಿಗೆ ನೀನು ಈ ದಿವಸ ಬಹು ರೂಪಿಯಾಗು ??” ಎಂದು ಅಪ್ಪಣೆಮಾಡಿದನು ಆ ಕೂಡಲೆ ಬೀರಬಲನು ಕುಂಬಾರನ ವೇಷವನ್ನು ಧಾರಣಮಾಡಿಕೊಂಡು ಕತ್ತೆಯನ್ನು ಹೊಡಕೊಂಡು ಬಾದಶಹನಿಗೆ ಎದುರಾಗಿ ಮಾರ್ಗದಲ್ಲಿ ಬರಹತ್ತಿದನು. ಆಗ ಬಾದಶಹನು ಎಲೋ ಕತ್ತೆ ಕಾಯುವವನೇ ಓರೆಯಾಗು ! ಎಂದು ಅಪ್ಪಣೆ ಮಾಡಿದನು ಆಗ ಬೀರಬಲನು ನಗುತ್ತ ನಾನುದೂರದಿಂದಲೇ ಸರಕಾರ ಕತ್ತೆ ಬರುತ್ತದೆ ಓರೆಯಾಗಿದೆ ಎಂದು ಕೂಗಿಕೊಳ್ಳುತ್ತಿರುವೆನಲ್ಲಾ ! ಎಂದನು ಇದನ್ನು ಕೇಳಿ ಬಾದಶಹನು ಲಜ್ಜಿತನಾದನು,

- (೧೮೮, ಒಂಟೆಯ ಡೊಂಕ ಕುತ್ತಿಗೆಯು) -

ಒಂದುಸಮಯದಲ್ಲಿ ಅಕಬರ ಬಾದಶಹನು, ಬೀರಬಲನಿಗೆ ಕೆಲವು ದೇಶವನ್ನು ಬಕ್ಷೀಸಾಗಿ ಕೊಡುತ್ತೇನೆಂದು ಹೇಳಿದ್ದನು ಯಾವಾಗ ಕೊಡುವ ಪ್ರಸಂಗವು ಸಮೀಪಿಸಿತೋ ಆಗ ಮೋರೆಯನ್ನು ಡೊಂಕ ಮಾಡಿದನು ಮುಂದೆ ಕೆಲವು ದಿವಸಗಳಾದಮೇಲೆ ಮಾರ್ಗದಲ್ಲಿ ಹೋಗುತ್ತಿದ್ದ ಒಂದು ಉಷ್ಟ್ರವನ್ನು ಕಂಡು ಬೀರಬಲನನ್ನು ಕುರಿತು " ಬೀರಬಲ್ಲ? ಈ ಒಂಟೆಯ ಕುತ್ತಿ ಗೆಯು ಯಾಕೆ ಡೊಂಕಾಗಿರುವದು ? ” ಎಂದು ಕೇಳಿದನು ಅದಕ್ಕೆ ಬೀರ ಬಲನು ಇದು ಹಿಂದಕ್ಕೆ ಯಾವನಿಗಾದರೂ ಉಂಬಳಿ ಗ್ರಾಮವನ್ನು ಕೊಡು ತೇನೆಂದು ಹೇಳಿರಬಹುದು ! ಎಂದನು.
ಆಗ ಬಾದಶಹನಿಗೆ ತಾನು ಕೊಟ್ಟ ವಚನವು ಸ್ಮರಣೆಗೆ ಬಂತು ಆ ಕೂಡಲೆ ಒಂದು ಪ್ರಾಂತವನ್ನು ಬಕ್ಷೀಸಾಗಿ ಕೊಟ್ಟು ಬಿಟ್ಟನು. {{center|-(೧೮೯. ಜೋ ಸೋಯಾ ಸೋ ಚುಕಾ.)-

ಒಂದು ದಿವಸ ಬಾದಶಹನು ಬೀರಬಲ್ಲ ! ಈ ದಿವಸ ನೀನು ನನ್ನನ್ನು