ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೦

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ
೧೫


ಎಷ್ಟೋಜನ ದಂಡಾಳುಗಳು ಮಡಿದರು ಕೆಲವರು ಪಠಾಣರಕೈಗೆ ಸಿಕ್ಕರು ಹಕೀಮ ಅಬದುಲ್ಲ ಘತಹನು ಕಷ್ಟಪಟ್ಟು ಜೀವದಿಂದ ಉಳಿದುಬಂದು ಜೈ ನಖಾನನನ್ನು ಕೂಡಿಕೊಂಡನು ಆದರೆ ಬೀರಬಲನು ಉಳಿದಿರುವನೋ, ಅಥವಾ ಮರಣ ಹೊಂದಿದನೋ ಎಂಬ ವರ್ತಮಾನವೇ ತಿಳಿಯದೆ ಹೋ ಯಿತು ಈ ಕಾಳಗದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಜನರು ಯಮಪುರಿ ಯನ್ನು ಸೇರಿದರು ಸತ್ತುಹೋದವರಲ್ಲಿ ಹಸನಾ, ಸನಿಗದಾಬೇಗ, ರಾಜಾ ಧರ್ಮಾಂಗದ ಮುಲ್ಲಾರಿ ಸಂಗ್ರಾಮಖಾ ಮೊದಲಾದವರ ಶವಗಳು ಸಿಕ್ಕ ವು ಬೀರಬಲನ ಗುರುತು ಸಹಾ ಹತ್ತದೆ ಹೋಯಿತು.

ಶೇಖ ಅಬುಲ್ಲ ಫಜಲ್ಲನು “ ಅಕಬರ ನಾಮ, ಎಂಬ ಗ್ರಂಥದಲ್ಲಿ ಬಾ ದಶಹನ ಮೂವತ್ತನೇ ವರುಷದ ಹುಟ್ಟಿದ ದಿವಸದ ಸಮಾರಂಭದ ವರ್ಣನೆ ಮಾಡಿದ್ದರಲ್ಲಿ ಹೀಗೆ ಉಲ್ಲೇಖಿಸಿರುವನಲ್ಲಾ “ ಅಫಗಾನಿಸ್ತಾನದ ಕಾಳಗವ ನ್ನು ಬೇಗನೆ ಸಮಾಪ್ತವನ್ನಾಗಿ ಮಾಡಬೇಕೆಂದು ತಿಳಿದು ಕೇವಲ ವಿಶ್ವಾ ಸಿಕನಾದ ಯಾವ ಸರದಾರನೊಡನೆ ಸೈನ್ಯವನ್ನು ಕಳಿಸಬೇಕೆಂಬ ಯೋ ಚನೆಯಲ್ಲಿರಲು, ನಾನು "ಅಬುಲ ಫಜಲ್ಲನು ನೀವೇದಿಸಿಕೊಂಡನ್ನೇನಂದರೆ ನಾನು ನಿಮ್ಮ ಸನ್ನಿಧಾನದ. ಸುಖಸಮಾಧಾನದಿಂದಲೂ ಪ್ರತಿಷ್ಠೆಯಿಂ ದಲೂ ಇದ್ದೇನೆ; ಆದರೆ ನಿಮ್ಮನ್ನು ಒಟ್ಟು ದೂರ ಹೊಗಿ ಕೆಲವು ಅಲ್ಪ ಸ್ವಲ್ಪ ಕಾರ್ಯವನ್ನು ಸಫಲಗೊಳಿಸುವದರಿಂದ ಇದಕ್ಕೂ ಹೆಚ್ಚಾಗಿ ಪ್ರತಿಷ್ಠೆ ಯುಂಟಾಗ ಬಹುದೆಂದು ಯೋಚಿಸಿದ್ದೇನೆ” ಎಂದು ಹೇಳಲು, ಅದಕ್ಕೆ ಬಾದಶಹನು ಉತ್ತರಕೊಟ್ಟದ್ದೇನಂದರೆ- "ನಾನು ನಿನ್ನನು ಶೂರರಾದ ಎಷ್ಟೋ ಜನ ದಂಡಾಳುಗಳೊಡನೆ ಕಳಿಸಬೇಕೆಂದು ಯೋಚಿಸಿದ್ದೇನೆ,, ಎಂ ದುಹೇಳಿದನು. ನಾನು, ಪ್ರಯಾಣ ಸನ್ನಾಹದಲ್ಲಿರು ಹೊರಡುವದಿವಸ ಮೂರನೇ ಪ್ರಹರದಲ್ಲಿ ಬಾದಶಹನು, ನನ್ನ ಮತ್ತು ಬೀರಬಲನ ಹೆಸರಿನಿಂದ ಚೀಟಿಯನ್ನು ಹಾಕಿಸಿದನು ಅದರಲ್ಲಿ ಬೀರಬಲನ ಹೆಸರು ಹೊರಟಿತು ಅದ ರಿಂದ ನನ್ನ ಮತ್ತು ಬಾದಶಹನಮನಸ್ಸಿಗೆ ವಿಷಾದವಾಯಿತು ನಿರ್ವಾಹವಿಲ್ಲದೆ ಮಾಘ ಶುಕ್ಲ ದ್ವಾದಶಿ ದಿವಸ ಬಾದಶಹನು ಬೀರಬಲನಿಗೆ ಅನುಜ್ಞೆಯನ್ನಿ ತ್ತನು ಅವನೊಡನೆ ಕಾಸಮಾಜಾಗದಾ ಬೇಗ ಹಾಜೀ ಸಮೂಕ, ಆಹ ಮ್ಮದಬೇಗ, ತಾಸಬೇಗ, ಹಿಜಾಮುದ್ದೀನ ಖಾಜಾ ಮೊದಲಾದ ಸರದಾರರ ನ್ನು ಕಳುಹಿಸಿದನು ಆದಿವಸ ಪ್ರಾತಃಕಾಲದಲ್ಲಿ ಎದ್ದು ಬಾದಶಹನ ದರ್ಶನ ತೆಗೆದುಕೊಂಡು ಹೊರಟು ಹೋದನು.

"ತಬಕಾತ ಅಕಬರೀ ” ಎಂಬ ಗ್ರಂಥದಲ್ಲಿ ರಾಜಾ ಬೀರಬಲನನ್ನು